The Vyadha Gita

The discussion of an impatient Brahmin (Vipra, Dwija), A devoted married women (Pativratha) & a Duty conscious, knowledgable, meat-seller (Vyadha). The Vyadha gita which he tells to Brahmin about duties of individual, why we sin, why we may sin, how to overcome he explains to Brahmin how devoted he is in serving parents. He explains with humility, his reasoning behind his profession. Its quite apt for modern world. Its must read for all.

This rare Gita is unlike other Gitas, here a Hunter/Butcher/Meat-seller by profession advices an impatient/half-learnt Brahmin. It also precedes with Pativrata (a devoted women) advising to same Brahmin & asks him to learn more from the Vyadha living in Mithila (King Janaka’s capital)

source: https://www.vyasaonline.com/aranyaka-parva-chapter-196/ to https://www.vyasaonline.com/aranyaka-parva-chapter-206/
https://ambuda.org/texts/mahabharatam/3.196 to https://ambuda.org/texts/mahabharatam/3.206
https://bombay.indology.info/mahabharata/text/UD/MBh03.txt
https://www.wisdomlib.org/hinduism/book/the-mahabharata-mohan/d/doc7484.html from Section CCIV to Section CCXV

Tools: https://translate.google.com/
https://en.glosbe.com/sa/en
https://www.onlinetranslationpro.com/sanskrit-to-english-translation

Sanskrit Verse Translation
वैशंपायन उवाच।
ततो युधिष्ठिरो राजा मार्कण्डेयं महाद्युतिम्।
पप्रच्छ भरतश्रेष्ठो धर्मप्रश्नं सुदुर्वचम्॥03-196-001॥
ವೈಶಂಪಾಯನನು ಹೇಳಿದನು: “ಆಗ ಭರತಶ್ರೇಷ್ಠ ರಾಜ ಯುಧಿಷ್ಠಿರನು ಮಹಾದ್ಯುತಿ ಮಾರ್ಕಂಡೇಯನನ್ನು ಒಳ್ಳೆಯ ಮಾತಿನಿಂದ ಧರ್ಮಪ್ರಶ್ನೆಯನ್ನು ಕೇಳಿದನು.
श्रोतुमिच्छामि भगवन्स्त्रीणां माहात्म्यमुत्तमम्।
कथ्यमानं त्वया विप्र सूक्ष्मं धर्मं च तत्त्वतः॥03-196-002॥
“ಭಗವನ್! ವಿಪ್ರ! ನೀನು ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಮತ್ತು ಧರ್ಮ ಸೂಕ್ಷವನ್ನು ತತ್ವತವಾಗಿ ಹೇಳುವುದನ್ನು ಕೇಳಬಯಸುತ್ತೇನೆ.
प्रत्यक्षेण हि विप्रर्षे देवा दृश्यन्ति सत्तम।
सूर्याचन्द्रमसौ वायुः पृथिवी वह्निरेव च॥03-196-003॥
पिता माता च भगवन्गाव एव च सत्तम।
यच्चान्यदेव विहितं तच्चापि भृगुनन्दन॥03-196-004॥
ಭೃಗುನಂದನ! ವಿಪ್ರರ್ಷೇ! ಸತ್ತಮ! ಭಗವನ್! ದೇವತೆಗಳು, ಸೂರ್ಯ-ಚಂದ್ರರು, ವಾಯು, ಭೂಮಿ, ಅಗ್ನಿ ಮತ್ತು ಮಾತಾಪಿತೃಗಳು, ಗೋವುಗಳು, ಮತ್ತು ದೇವವೆಂದು ವಿಹಿತವಾಗಿರುವ ಎಲ್ಲವನ್ನೂ ನಾವು ಪ್ರತ್ಯಕ್ಷವಾಗಿಯೇ ಕಾಣುತ್ತೇವೆ.
मन्येऽहं गुरुवत्सर्वमेकपत्न्यस्तथा स्त्रियः।
पतिव्रतानां शुश्रूषा दुष्करा प्रतिभाति मे॥03-196-005॥
ಈ ಎಲ್ಲವನ್ನೂ ನಾನು ಗುರುವೆಂದು ಮನ್ನಿಸುತ್ತೇನೆ. ಹಾಗೆಯೇ ಪತ್ರಿವ್ರತೆಯರಾದ ಸ್ತ್ರೀಯರನ್ನು ಕೂಡ. ಪತಿವ್ರತೆಯರು ಮಾಡುವ ಶುಶ್ರೂಷೆಗಳು ದುಷ್ಕರವೆಂದು ನನಗನ್ನಿಸುತ್ತವೆ.
पतिव्रतानां माहात्म्यं वक्तुमर्हसि नः प्रभो।
निरुध्य चेन्द्रियग्रामं मनः संरुध्य चानघ।
पतिं दैवतवच्चापि चिन्तयन्त्यः स्थिता हि याः॥03-196-006॥
ಪ್ರಭೋ! ಸದಾ ಪತಿಯೇ ದೈವವೆಂದು ಯೋಚಿಸುವ, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ನಿಯಂತ್ರಿಸಿರುವ ಪತಿವ್ರತೆಯರ ಮಹಾತ್ಮೆಯನ್ನು ಹೇಳಬೇಕು.
भगवन्दुष्करं ह्येतत्प्रतिभाति मम प्रभो।
मातापितृषु शुश्रूषा स्त्रीणां भर्तृषु च द्विज॥03-196-007॥
ಭಗವನ್! ಪ್ರಭೋ! ದ್ವಿಜ! ಸ್ತ್ರೀಯರು ಮಾತಾ-ಪಿತೃಗಳ ಮತ್ತು ಪತಿಯ ಶುಶ್ರೂಷೆ ಮಾಡುವುದು ದುಷ್ಕರವೆಂದು ನನಗನ್ನಿಸುತ್ತದೆ.
स्त्रीणां धर्मात्सुघोराद्धि नान्यं पश्यामि दुष्करम्।
साध्वाचाराः स्त्रियो ब्रह्मन्यत्कुर्वन्ति सदादृताः।
दुष्करं बत कुर्वन्ति पितरो मातरश्च वै॥03-196-008॥
ಬ್ರಹ್ಮನ್! ಸ್ತ್ರೀಯರ ಧರ್ಮಕ್ಕಿಂತ ಘೋರವೂ ದುಷ್ಕರವೂ ಆದ ಇನ್ನೊಂದನ್ನು ನಾನು ಕಾಣೆ. ಸದಾ ನಿಷ್ಠೆಯಿಂದ ಸದಾಚಾರ ಸ್ತ್ರೀಯರು ಏನನ್ನು ಮಾಡುತ್ತಾರೋ ಅದನ್ನು ತಂದೆ ತಾಯಂದಿರು ದುಷ್ಕರವನ್ನಾಗಿಸುತ್ತಾರೆ.
एकपत्न्यश्च या नार्यो याश्च सत्यं वदन्त्युत।
कुक्षिणा दश मासांश्च गर्भं संधारयन्ति याः।
नार्यः कालेन संभूय किमद्भुततरं ततः॥03-196-009॥
ಸ್ತ್ರೀಯಾಗಿ ಹುಟ್ಟಿ, ಪತಿವ್ರತೆಯಾಗಿದ್ದು, ಸದಾ ಸತ್ಯವನ್ನೇ ಆಡಿಕೊಂಡು, ಹೊಟ್ಟೆಯಲ್ಲಿ ಹತ್ತು ತಿಂಗಳು ಗರ್ಭವನ್ನು ಧರಿಸುವುದಕ್ಕಿಂತ ಅದ್ಭುತವಾದುದು ಬೇರೆ ಏನಿದೆ?
संशयं परमं प्राप्य वेदनामतुलामपि।
प्रजायन्ते सुतान्नार्यो दुःखेन महता विभो।
पुष्णन्ति चापि महता स्नेहेन द्विजसत्तम॥03-196-010॥
ವಿಭೋ! ದ್ವಿಜಸತ್ತಮ! ಪರಮ ಸಂಶಯವನ್ನು ಹೊಂದಿ, ಅತುಲ ವೇದನೆಯನ್ನನ್ನುಭವಿಸಿ ನಾರಿಯರು ಮಹಾ ದುಃಖದಿಂದ ಮಕ್ಕಳನ್ನು ಹಡೆಯುತ್ತಾರೆ ಮತ್ತು ಮಹಾ ಸ್ನೇಹದಿಂದ ಬೆಳೆಸುತ್ತಾರೆ.
ये च क्रूरेषु सर्वेषु वर्तमाना जुगुप्सिताः।
स्वकर्म कुर्वन्ति सदा दुष्करं तच्च मे मतम्॥03-196-011॥
ಹಾಗೆಯೇ ಕ್ರೂರಕರ್ಮಗಳನ್ನು ಮಾಡುವ, ಎಲ್ಲರ ಜಿಗುಪ್ಸೆಗೆ ಪಾತ್ರರಾದವರೂ ಕೂಡ ಸದಾ ದುಷ್ಕರ ಸ್ವಕರ್ಮವನ್ನು ಮಾಡುತ್ತಿರುತ್ತಾರೆ ಎಂದು ನನಗನ್ನಿಸುತ್ತದೆ.
क्षत्रधर्मसमाचारं तथ्यं चाख्याहि मे द्विज।
धर्मः सुदुर्लभो विप्र नृशंसेन दुरात्मना॥03-196-012॥
ದ್ವಿಜ! ಕ್ಷತ್ರಧರ್ಮವನ್ನು ಸದಾಚಾರದಲ್ಲಿರಿಸುಕೊಳ್ಳುವುದರ ಸತ್ಯವನ್ನೂ ನನಗೆ ಹೇಳು. ವಿಪ್ರ! ಕ್ರೂರ ಮತ್ತು ದುರಾತ್ಮನು ಧರ್ಮದಲ್ಲಿ ನಡೆದುಕೊಳ್ಳುವುದು ಕಷ್ಟ.
एतदिच्छामि भगवन्प्रश्नं प्रश्नविदां वर।
श्रोतुं भृगुकुलश्रेष्ठ शुश्रूषे तव सुव्रत॥03-196-013॥
ಪ್ರಶ್ನೆಗಳನ್ನು ತಿಳಿದುಕೊಳ್ಳುವವರಲ್ಲಿ ಶ್ರೇಷ್ಠ! ಭಗವನ್! ಭೃಗುಕುಲಶ್ರೇಷ್ಠ! ಸುವ್ರತ! ಈ ಪ್ರಶ್ನೆಯ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.”
मार्कण्डेय उवाच।
हन्त ते सर्वमाख्यास्ये प्रश्नमेतं सुदुर्वचम्।
तत्त्वेन भरतश्रेष्ठ गदतस्तन्निबोध मे॥03-196-014॥
ಮಾರ್ಕಂಡೇಯನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಕಷ್ಟದ ಪ್ರಶ್ನೆಯನ್ನು ಉತ್ತರಿಸುತ್ತೇನೆ. ಸತ್ಯವನ್ನು ಹೇಳಿದಂತೆ ನನ್ನನ್ನು ಕೇಳು.
मातरं सदृशीं तात पितॄनन्ये च मन्यते।
दुष्करं कुरुते माता विवर्धयति या प्रजाः॥03-196-015॥
ಮಗೂ! ಕೆಲವರು ತಾಯಿಯನ್ನು ಮತ್ತೆ ಕೆಲವರು ತಂದೆಯನ್ನು ಉಚ್ಛರೆಂದು ಪರಿಗಣಿಸುತ್ತಾರೆ. ಆದರೆ ಮಕ್ಕಳನ್ನು ಬೆಳೆಸುವ ದುಷ್ಕರ ಕಾರ್ಯವನ್ನು ತಾಯಂದಿರೇ ಮಾಡುತ್ತಾರೆ.
तपसा देवतेज्याभिर्वन्दनेन तितिक्षया।
अभिचारैरुपायैश्च ईहन्ते पितरः सुतान्॥03-196-016॥
ತಪಸ್ಸಿನ ಮೂಲಕ, ದೇವತೆಗಳನ್ನು ಪೂಜಿಸಿ ವಂದಿಸುವುದರ ಮೂಲಕ, ಧೃಢತೆಯ ಮೂಲಕ, ಅಭಿಚಾರ ಉಪಾಯಗಳ ಮೂಲಕ ತಂದೆಯರು ಪುತ್ರರನ್ನು ಪಡೆಯಲು ಬಯಸುತ್ತಾರೆ.
एवं कृच्छ्रेण महता पुत्रं प्राप्य सुदुर्लभम्।
चिन्तयन्ति सदा वीर कीदृशोऽयं भविष्यति॥03-196-017॥
ವೀರ! ಈ ರೀತಿ ಮಹಾ ಕಷ್ಟಪಟ್ಟು ದುರ್ಲಭನಾದ ಪುತ್ರನನ್ನು ಪಡೆದು ಇವನು ಏನಾಗುತ್ತಾನೋ ಎಂದು ಸದಾ ಚಿಂತಿಸುತ್ತಿರುತ್ತಾರೆ.
आशंसते च पुत्रेषु पिता माता च भारत।
यशः कीर्तिमथैश्वर्यं प्रजा धर्मं तथैव च॥03-196-018॥
ಭಾರತ! ತಂದೆ-ತಾಯಿಯರು ತಮ್ಮ ಪುತ್ರರು ಯಶಸ್ಸು, ಕೀರ್ತಿ, ಐಶ್ವರ್ಯ ಮತ್ತು ಧರ್ಮದಲ್ಲಿ ಮಕ್ಕಳನ್ನೂ ಪಡೆಯಲೆಂದು ಆಶಿಸುತ್ತಾರೆ.
तयोराशां तु सफलां यः करोति स धर्मवित्।
पिता माता च राजेन्द्र तुष्यतो यस्य नित्यदा।
इह प्रेत्य च तस्याथ कीर्तिर्धर्मश्च शाश्वतः॥03-196-019॥
ರಾಜೇಂದ್ರ! ಅವರ ಆಶೆಗಳನ್ನು ಸಫಲಗೊಳಿಸುವವನು ಧರ್ಮವಿದು. ತಂದೆ-ತಾಯಿಯರನ್ನು ನಿತ್ಯವೂ ತೃಪ್ತಿಗೊಳಿಸುವವನು ಇಲ್ಲಿ ಮತ್ತು ಪರದಲ್ಲಿ ಶಾಶ್ವತ ಕೀರ್ತಿ-ಧರ್ಮಗಳನ್ನು ಪಡೆಯುತ್ತಾನೆ.
नैव यज्ञः स्त्रियः कश्चिन्न श्राद्धं नोपवासकम्।
या तु भर्तरि शुश्रूषा तया स्वर्गमुपाश्नुते॥03-196-020॥
ಸ್ತ್ರೀಯರಿಗೆ ಯಜ್ಞ, ಶ್ರಾದ್ಧ, ಉಪವಾಸಗಳು ಉಪಯೋಗಕ್ಕೆ ಬರುವವಲ್ಲವು. ಪತಿಯ ಶುಶ್ರೂಷೆ ಮಾಡುವುದರಿಂದ ಅವಳಿಗೆ ಸ್ವರ್ಗವು ದೊರೆಯುತ್ತದೆ.
एतत्प्रकरणं राजन्नधिकृत्य युधिष्ठिर।
प्रतिव्रतानां नियतं धर्मं चावहितः शृणु॥03-196-021॥
ರಾಜನ್! ಯುಧಿಷ್ಠಿರ! ಈ ವಿಷಯದಲ್ಲಿ ಪತಿವ್ರತೆಯರ ನಿಯತ ಧರ್ಮವನ್ನು ಗಮನವಿಟ್ಟು ಕೇಳು.”
मार्कण्डेय उवाच।
कश्चिद्द्विजातिप्रवरो वेदाध्यायी तपोधनः।
तपस्वी धर्मशीलश्च कौशिको नाम भारत॥03-197-001॥
ಮಾರ್ಕಂಡೇಯನು ಹೇಳಿದನು: “ಭಾರತ! ಓರ್ವ ದ್ವಿಜಾತಿಪ್ರವರ, ವೇದಧ್ಯಾಯೀ, ತಪೋಧನ, ಧರ್ಮಶೀಲ ಕೌಶಿಕ ಎಂಬ ಹೆಸರಿನ ತಪಸ್ವಿಯಿದ್ದನು.
साङ्गोपनिषदान्वेदानधीते द्विजसत्तमः।
स वृक्षमूले कस्मिंश्चिद्वेदानुच्चारयन्स्थितः॥03-197-002॥
ಆ ದ್ವಿಜಸತ್ತಮನು ಉಪನಿಷತ್ತುಗಳೊಂದಿಗೆ ವೇದಗಳನ್ನು ತಿಳಿದುಕೊಂಡಿದ್ದನು. ಒಮ್ಮೆ ಅವನು ಒಂದು ಮರದ ಕೆಳಗೆ ವೇದಗಳನ್ನು ಉಚ್ಚರಿಸುತ್ತಾ ನಿಂತಿದ್ದನು.
उपरिष्टाच्च वृक्षस्य बलाका संन्यलीयत।
तया पुरीषमुत्सृष्टं ब्राह्मणस्य तदोपरि॥03-197-003॥
ಆ ವೃಕ್ಷದ ಮೇಲೆ ಒಂದು ಹೆಣ್ಣು ಬಲಾಕಾ ಪಕ್ಷಿಯು ಕುಳಿತಿತ್ತು. ಅದು ಬ್ರಾಹ್ಮಣನ ಮೇಲೆ ಪಿಷ್ಟವನ್ನು ಹಾಕಿತು.
तामवेक्ष्य ततः क्रुद्धः समपध्यायत द्विजः।
भृशं क्रोधाभिभूतेन बलाका सा निरीक्षिता॥03-197-004॥
ಆಗ ಕೃದ್ಧನಾದ ದ್ವಿಜನು ಅದನ್ನು ನೋಡಿ, ಆ ಬಲಾಕದ ಮೇಲೆ ಕ್ರೋಧಯುಕ್ತವಾದ ಯೋಚನೆಯನ್ನು ಪ್ರಯೋಗಿಸಿದನು.
अपध्याता च विप्रेण न्यपतद्वसुधातले।
बलाकां पतितां दृष्ट्वा गतसत्त्वामचेतनाम्।
कारुण्यादभिसंतप्तः पर्यशोचत तां द्विजः॥03-197-005॥
ನೃಪತೇ! ವಿಪ್ರನ ಆ ಯೋಚನೆಯ ಪೆಟ್ಟು ತಿಂದ ಬಲಾಕವು ನೆಲದಮೇಲೆ ಬಿದ್ದಿತು. ಸತ್ತು ಅಚೇತಸವಾಗಿ ಬಿದ್ದಿದ್ದ ಅದನ್ನು ನೋಡಿ ದ್ವಿಜನು ಕಾರುಣ್ಯದಿಂದ ಸಂತಪ್ತನಾಗಿ ಶೋಕಿಸಿದನು.
अकार्यं कृतवानस्मि रागद्वेषबलात्कृतः।
इत्युक्त्वा बहुशो विद्वान्ग्रामं भैक्षाय संश्रितः॥03-197-006॥
“ರಾಗದ್ವೇಷಗಳ ಬಲಕ್ಕೆ ಬಂದು ನಾನು ಅಕಾರ್ಯವನ್ನು ಮಾಡಿಬಿಟ್ಟೆ!” ಎಂದು ಬಹುಬಾರಿ ಹೇಳಿಕೊಳ್ಳುತ್ತಾ ಆ ವಿದ್ವಾಂಸಿ ಸಂಶ್ರಿತನು ಗ್ರಾಮಕ್ಕೆ ಭಿಕ್ಷೆ ಬೇಡಲು ಹೋದನು.
ग्रामे शुचीनि प्रचरन्कुलानि भरतर्षभ।
प्रविष्टस्तत्कुलं यत्र पूर्वं चरितवांस्तु सः॥03-197-007॥
ಭರತರ್ಷಭ! ಗ್ರಾಮದಲ್ಲಿ ಶುಚಿಯಾದ ಕುಲಗಳನ್ನು ಸುತ್ತಾಡಿಕೊಂಡು ಹಿಂದೆ ಭೇಟಿಕೊಟ್ಟಿದ್ದ ಕುಲವನ್ನು ಪ್ರವೇಶಿಸಿದನು.
देहीति याचमानो वै तिष्ठेत्युक्तः स्त्रिया ततः।
शौचं तु यावत्कुरुते भाजनस्य कुटुम्बिनी॥03-197-008॥
“ದೇಹಿ!” ಎಂದು ಬೇಡುತ್ತಾ ನಿಂತಿದ್ದ ಅವನಿಗೆ “ನಿಲ್ಲು!” ಎಂದು ಸ್ತ್ರೀಯು ಹೇಳಿ, ಆ ಕುಂಟುಂಬಿನಿಯು ಪಾತ್ರೆಯನ್ನು ತೊಳೆಯತೊಡಗಿದಳು.
एतस्मिन्नन्तरे राजन्क्षुधासंपीडितो भृशम्।
भर्ता प्रविष्टः सहसा तस्या भरतसत्तम॥03-197-009॥
ರಾಜನ್! ಭರತಸತ್ತಮ! ಇದೇ ಸಮಯದಲ್ಲಿ ತುಂಬಾ ಹಸಿವೆಯಿಂದ ಬಳಲಿದ ಅವಳ ಪತಿಯು ಅವಸರದಲ್ಲಿ ಪ್ರವೇಶಿಸಿದನು.
सा तु दृष्ट्वा पतिं साध्वी ब्राह्मणं व्यपहाय तम्।
पाद्यमाचमनीयं च ददौ भर्त्रे तथासनम्॥03-197-010॥
ಪತಿಯನ್ನು ನೋಡಿ ಆ ಸಾಧ್ವಿಯು ಬ್ರಾಹ್ಮಣನನ್ನು ಮರೆತುಬಿಟ್ಟಳು. ಗಂಡನಿಗೆ ಪಾದ್ಯ ಆಚಮನೀಯಗಳನ್ನೂ ಆಸನವನ್ನು ನೀಡಿದಳು.
प्रह्वा पर्यचरच्चापि भर्तारमसितेक्षणा।
आहारेणाथ भक्ष्यैश्च वाक्यैः सुमधुरैस्तथा॥03-197-011॥
ಆ ಕಪ್ಪುಕಣ್ಣಿನವಳು ವಿನಯದಿಂದ ಆಹಾರ-ಭಕ್ಷಗಳಿಂದ ಮತ್ತು ಸುಮಧುರ ಮಾತುಗಳಿಂದ ತನ್ನ ಪತಿಯ ಸೇವೆಗಳನ್ನು ಮಾಡಿದಳು.
उच्छिष्टं भुञ्जते भर्तुः सा तु नित्यं युधिष्ठिर।
दैवतं च पतिं मेने भर्तुश्चित्तानुसारिणी॥03-197-012॥
ಯುಧಿಷ್ಠಿರ! ನಿತ್ಯವೂ ಅವಳು ಪತಿಯು ತಿಂದು ಬಿಟ್ಟುದುದನ್ನು ತಿನ್ನುತ್ತಿದ್ದಳು. ಪತಿಯು ದೇವರೆಂದು ತಿಳಿದು ಪತಿಯ ಮನಸ್ಸಿನಂತೆ ನಡೆದುಕೊಳ್ಳುತ್ತಿದ್ದಳು.
न कर्मणा न मनसा नात्यश्नान्नापि चापिबत्।
तं सर्वभावोपगता पतिशुश्रूषणे रता॥03-197-013॥
ಕರ್ಮದಲ್ಲಿಯಾಗಲೀ ಮನಸ್ಸಿನಲ್ಲಿಯಾಗಲೀ ಅವಳು ಅವನ ಮೊದಲು ಉಣ್ಣುತ್ತಿರಲಿಲ್ಲ; ಅವಳು ಎಲ್ಲ ಭಾವಗಳಲ್ಲಿ ಪತಿಯ ಸೇವೆಮಾಡುವುದರಲ್ಲಿ ಆನಂದ ಹೊಂದುತ್ತಿದ್ದಳು.
साध्वाचारा शुचिर्दक्षा कुटुम्बस्य हितैषिणी।
भर्तुश्चापि हितं यत्तत्सततं सानुवर्तते॥03-197-014॥
ಒಳ್ಳೆಯ ನಡತೆಯ, ಶುಚಿ, ದಕ್ಷೆಯಾಗಿದ್ದು, ಕುಟುಂಬದ ಹಿತೈಷಿಣಿಯಾಗಿದ್ದು ಅವಳು ಸತತವೂ ತನ್ನ ಪತಿಯ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಳು.
देवतातिथिभृत्यानां श्वश्रूश्वशुरयोस्तथा।
शुश्रूषणपरा नित्यं सततं संयतेन्द्रिया॥03-197-015॥
ಸತತವೂ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವಳು ದೇವತೆಗಳ, ಅತಿಥಿಗಳ, ಪತಿಯ, ಅತ್ತೆಮಾವಂದಿರ ಸೇವೆಯಲ್ಲಿ ನಿತ್ಯವೂ ನಿರತಳಾಗಿದ್ದಳು.
सा ब्राह्मणं तदा दृष्ट्वा संस्थितं भैक्षकाङ्क्षिणम्।
कुर्वती पतिशुश्रूषां सस्माराथ शुभेक्षणा॥03-197-016॥
ಅಗ ಪತಿಸೇವೆಯನ್ನು ಮಾಡುತ್ತಿದ್ದ ಆ ಶುಭೇಕ್ಷಣೆಯು ಭಿಕ್ಷೆಯನ್ನು ಬೇಡಿ ನಿಂತಿದ್ದ ಆ ಬ್ರಾಹ್ಮಣನನ್ನು ನೋಡಿ ನೆನಪಿಸಿಕೊಂಡಳು.
व्रीडिता साभवत्साध्वी तदा भरतसत्तम।
भिक्षामादाय विप्राय निर्जगाम यशस्विनी॥03-197-017॥
ಭರತಸತ್ತಮ! ಆಗ ಆ ಯಶಸ್ವಿನೀ ಸಾಧ್ವಿಯು ನಾಚಿಕೊಂಡು ವಿಪ್ರನಿಗೆ ಭಿಕ್ಷವನ್ನು ತೆಗೆದುಕೊಂಡು ಹೊರಬಂದಳು.
ब्राह्मण उवाच।
किमिदं भवति त्वं मां तिष्ठेत्युक्त्वा वराङ्गने।
उपरोधं कृतवती न विसर्जितवत्यसि॥03-197-018॥
ಬ್ರಾಹ್ಮಣನು ಹೇಳಿದನು: “ವರಾಂಗನೇ! ಇದೇನಾಯಿತು? ನನಗೆ ನಿಲ್ಲಲು ಹೇಳಿ, ಹೋಗು ಎಂದೂ ಹೇಳದೇ, ತಡಮಾಡಿದೆ!””
मार्कण्डेय उवाच।
ब्राह्मणं क्रोधसंतप्तं ज्वलन्तमिव तेजसा।
दृष्ट्वा साध्वी मनुष्येन्द्र सान्त्वपूर्वं वचोऽब्रवीत्॥03-197-019॥
ಮಾರ್ಕಂಡೇಯನು ಹೇಳಿದನು: “ಮನುಷ್ಯೇಂದ್ರ! ಕ್ರೋಧಸಂತಪ್ತನಾದ ಬ್ರಾಹ್ಮಣನು ತೇಜಸ್ಸಿನಿಂದ ಸುಟ್ಟುಬಿಡುವನೋ ಎಂದು ಅವಳನ್ನು ನೋಡಲು, ಸಾಧ್ವಿಯು ಸಾಂತ್ವನದ ಮಾತುಗಳನ್ನಾಡಿದಳು.
क्षन्तुमर्हसि मे विप्र भर्ता मे दैवतं महत्।
स चापि क्षुधितः श्रान्तः प्राप्तः शुश्रूषितो मया॥03-197-020॥
“ವಿಪ್ರ! ಕ್ಷಮಿಸಬೇಕು. ನನಗೆ ನನ್ನ ಪತಿಯು ಮಹಾ ದೇವತೆ. ಅವನೂ ಕೂಡ ಹಸಿದಿದ್ದ, ಬಳಲಿದ್ದ. ಅವನಿಗೆ ನಾನು ಶುಶ್ರೂಷೆ ಮಾಡುತ್ತಿದ್ದೆ.”
ब्राह्मण उवाच।
ब्राह्मणा न गरीयांसो गरीयांस्ते पतिः कृतः।
गृहस्थधर्मे वर्तन्ती ब्राह्मणानवमन्यसे॥03-197-021॥
ಬ್ರಾಹ್ಮಣನು ಹೇಳಿದನು: “ಬ್ರಾಹ್ಮಣರು ಹೆಚ್ಚಿನವರಲ್ಲವೇ? ನೀನು ನಿನ್ನ ಪತಿಯನ್ನು ಹೆಚ್ಚಿನವನನ್ನಾಗಿ ಮಾಡಿಬಿಟ್ಟೆಯಲ್ಲ! ಗೃಹಸ್ಥ ಧರ್ಮದಲ್ಲಿದ್ದುಕೊಂಡು ನೀನು ಬ್ರಾಹ್ಮಣನನ್ನು ಕೀಳಾಗಿ ಮಾಡಿಬಿಟ್ಟೆಯಲ್ಲ!
इन्द्रोऽप्येषां प्रणमते किं पुनर्मानुषा भुवि।
अवलिप्ते न जानीषे वृद्धानां न श्रुतं त्वया।
ब्राह्मणा ह्यग्निसदृशा दहेयुः पृथिवीमपि॥03-197-022॥
ಇಂದ್ರನೇ ಅವನಿಗೆ ತಲೆಬಾಗುವಾಗ ಭುವಿಯಲ್ಲಿರುವ ಮನುಷ್ಯರೇನು? ಅವಲಿಪ್ತೇ! ನಿನಗೆ ಇದು ತಿಳಿದಿಲ್ಲವೇ? ಹಿರಿಯರಿಂದ ಇದನ್ನು ನೀನು ಕೇಳಿಲ್ಲವೇ? ಅಗ್ನಿಯಂತೆ ಬ್ರಾಹ್ಮಣರು ಇಡೀ ಭೂಮಿಯನ್ನೇ ಸುಡಬಲ್ಲರು!”
स्त्र्युवाच।
नावजानाम्यहं विप्रान्देवैस्तुल्यान्मनस्विनः।
अपराधमिमं विप्र क्षन्तुमर्हसि मेऽनघ॥03-197-023॥
ಸ್ತ್ರೀಯು ಹೇಳಿದಳು: “ವಿಪ್ರ! ಅನಘ! ನಾನು ದೇವಸಮರಾದ ಮನಸ್ವಿ ವಿಪ್ರರನ್ನು ಕೀಳಾಗಿ ನೋಡುತ್ತಿಲ್ಲ! ಈ ಅಪರಾಧವನ್ನು ಕ್ಷಮಿಸಬೇಕು.
जानामि तेजो विप्राणां महाभाग्यं च धीमताम्।
अपेयः सागरः क्रोधात्कृतो हि लवणोदकः॥03-197-024॥
ಧೀಮಂತ ಮಹಾಭಾಗ್ಯ ವಿಪ್ರರ ತೇಜಸ್ಸನ್ನು ತಿಳಿದಿದ್ದೇನೆ. ಕ್ರೋಧದಿಂದ ಅವರು ಸಾಗರವನ್ನು ಉಪ್ಪಾಗಿ, ಕುಡಿಯಲು ಅಯೋಗ್ಯವಾಗಿ ಮಾಡಿದರು.
तथैव दीप्ततपसां मुनीनां भावितात्मनाम्।
येषां क्रोधाग्निरद्यापि दण्डके नोपशाम्यति॥03-197-025॥
ಹಾಗೆಯೇ ದೀಪ್ತತಪಸ್ವಿಗಳ, ಭಾವಿತಾತ್ಮ ಮುನಿಗಳ ಕ್ರೋಧಾಗ್ನಿಯು ಇಂದೂ ಕೂಡ ದಂಡಕದಲ್ಲಿ ಆರದೇ ಉರಿಯುತ್ತಿದೆ.
ब्राह्मणानां परिभवाद्वातापिश्च दुरात्मवान्।
अगस्त्यमृषिमासाद्य जीर्णः क्रूरो महासुरः॥03-197-026॥
ಬ್ರಾಹ್ಮಣರನ್ನು ಪೀಡಿಸುತ್ತಿದ್ದ ದುರಾತ್ಮ ಕ್ರೂರ ಮಹಾಸುರ ವಾತಾಪಿಯೂ ಕೂಡ ಅಗಸ್ತ್ಯಮುನಿಗಳಿಂದ ಜೀರ್ಣಗೊಂಡನು.
प्रभावा बहवश्चापि श्रूयन्ते ब्रह्मवादिनाम्।
क्रोधः सुविपुलो ब्रह्मन्प्रसादश्च महात्मनाम्॥03-197-027॥
ಬ್ರಹ್ಮನ್! ಬ್ರಹ್ಮವಾದಿಗಳ ಬಹಳಷ್ಟು ಪ್ರಭಾವಗಳ ಕುರಿತು ಕೇಳಿದ್ದೇವೆ. ಆ ಮಹಾತ್ಮರ ಕ್ರೋಧದಷ್ಟೇ ಪ್ರಸಾದವೂ ತುಂಬಾ ಫಲವನ್ನೀಯುತ್ತದೆ.
अस्मिंस्त्वतिक्रमे ब्रह्मन्क्षन्तुमर्हसि मेऽनघ।
पतिशुश्रूषया धर्मो यः स मे रोचते द्विज॥03-197-028॥
ಬ್ರಹ್ಮನ್! ಅನಘ! ಈ ಅತಿಕ್ರಮವನ್ನು ಕ್ಷಮಿಸಬೇಕು. ದ್ವಿಜ! ಪತಿಶುಶ್ರೂಷವೇ ನನ್ನ ಧರ್ಮವೆಂದು ನನಗನ್ನಿಸುತ್ತದೆ.
दैवतेष्वपि सर्वेषु भर्ता मे दैवतं परम्।
अविशेषेण तस्याहं कुर्यां धर्मं द्विजोत्तम॥03-197-029॥
ಎಲ್ಲ ದೇವತೆಗಳಲ್ಲಿಯೂ ಕೂಡ ಪತಿಯು ನನ್ನ ಪರಮ ದೇವತೆ. ದ್ವಿಜೋತ್ತಮ! ಏನನ್ನೂ ಬಿಡದೇ ಅವನ ಧರ್ಮವನ್ನು ನಾನು ಮಾಡುತ್ತೇನೆ.
शुश्रूषायाः फलं पश्य पत्युर्ब्राह्मण यादृशम्।
बलाका हि त्वया दग्धा रोषात्तद्विदितं मम॥03-197-030॥
ಬ್ರಾಹ್ಮಣ! ಪತಿಯ ಶುಶ್ರೂಷೆಯ ಫಲವು ಎಂಥಹುದೆಂದು ನೋಡು! ನಿನ್ನ ರೋಷದಿಂದ ಬಲಾಕ ಪಕ್ಷಿಯೊಂದು ಸುಟ್ಟುಹೋಯಿತೆಂದು ನನಗೆ ತಿಳಿದಿದೆ.
क्रोधः शत्रुः शरीरस्थो मनुष्याणां द्विजोत्तम।
यः क्रोधमोहौ त्यजति तं देवा ब्राह्मणं विदुः॥03-197-031॥
ದ್ವಿಜೋತ್ತಮ! ಕ್ರೋಧವು ಮನುಷ್ಯರ ಶರೀರದಲ್ಲಿರುವ ಶತ್ರು. ಕ್ರೋಧ ಮೋಹಗಳನ್ನು ತ್ಯಜಿಸಿದವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
यो वदेदिह सत्यानि गुरुं संतोषयेत च।
हिंसितश्च न हिंसेत तं देवा ब्राह्मणं विदुः॥03-197-032॥
ಯಾರು ಸತ್ಯವನ್ನೇ ಮಾತನಾಡುತ್ತಾರೋ, ಗುರುವನ್ನು ಸಂತೋಷಪಡಿಸುತ್ತಾರೋ, ಮತ್ತು ಹಿಂಸೆಯನ್ನು ಹಿಂಸೆಯಿಂದ ಉತ್ತರಿಸುವುದಿಲ್ಲವೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿಯುತ್ತಾರೆ.
जितेन्द्रियो धर्मपरः स्वाध्यायनिरतः शुचिः।
कामक्रोधौ वशे यस्य तं देवा ब्राह्मणं विदुः॥03-197-033॥
ಜಿತೇಂದ್ರಿಯರನ್ನು, ಧರ್ಮಪರರನ್ನು, ಸ್ವಾಧ್ಯಾಯನಿರತರನ್ನು, ಶುಚಿಯಾಗಿರುವವರನ್ನು, ಮತ್ತು ಕಾಮಕ್ರೋಧಗಳನ್ನು ವಶದಲ್ಲಿಟ್ಟುಕೊಂಡವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿದಿದ್ದಾರೆ.
यस्य चात्मसमो लोको धर्मज्ञस्य मनस्विनः।
सर्वधर्मेषु च रतस्तं देवा ब्राह्मणं विदुः॥03-197-034॥
ಲೋಕಗಳನ್ನು ತನ್ನಂತಯೇ ಕಾಣುವ, ಮನಸ್ವಿ, ಧರ್ಮಜ್ಞ, ಸರ್ವಧರ್ಮಗಳನ್ನೂ ಪ್ರೀತಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
योऽध्यापयेदधीयीत यजेद्वा याजयीत वा।
दद्याद्वापि यथाशक्ति तं देवा ब्राह्मणं विदुः॥03-197-035॥
ಕಲಿಸುವ ಮತ್ತು ಕಲಿಯುವ, ಯಜ್ಞಗಳನ್ನು ಮಾಡುವ ಮತ್ತು ಮಾಡಿಸುವ, ಶಕ್ತಿಯಿದ್ದಷ್ಟು ದಾನಮಾಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
ब्रह्मचारी च वेदान्यो अधीयीत द्विजोत्तमः।
स्वाध्याये चाप्रमत्तो वै तं देवा ब्राह्मणं विदुः॥03-197-036॥
ಬ್ರಹ್ಮಚಾರಿಯಾಗಿದ್ದು ಕೊಂಡು, ವೇದಗಳನ್ನು ಅಧ್ಯಯನ ಮಾಡುವ, ಸ್ವಾಧ್ಯಾಯದಲ್ಲಿ ಅಪ್ರಮತ್ತನಾಗದೇ ಇರುವ ದ್ವಿಜೋತ್ತಮನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
यद्ब्राह्मणानां कुशलं तदेषां परिकीर्तयेत्।
सत्यं तथा व्याहरतां नानृते रमते मनः॥03-197-037॥
ಬ್ರಾಹ್ಮಣರಿಗೆ ಕುಶಲವಾದುದೇನೆಂದು ಅವರೇ ಹೇಳುತ್ತಾರೆ. ಸತ್ಯದಲ್ಲಿಯೇ ವ್ಯವಹರಿಸುವ ಅವರ ಮನಸ್ಸು ಸುಳ್ಳಿನಲ್ಲಿ ಸಂತೋಷ ಹೊಂದುವುದಿಲ್ಲ.
धनं तु ब्राह्मणस्याहुः स्वाध्यायं दममार्जवम्।
इन्द्रियाणां निग्रहं च शाश्वतं द्विजसत्तम।
सत्यार्जवे धर्ममाहुः परं धर्मविदो जनाः॥03-197-038॥
ದ್ವಿಜಸತ್ತಮ! ಬ್ರಾಹ್ಮಣರ ಸಂಪತ್ತು ಅವರ ಸ್ವಾಧ್ಯಾಯ, ದಮ, ಆರ್ಜವ, ಮತ್ತು ಶಾಶ್ವತವಾದ ಇಂದ್ರಿಯಗಳ ನಿಗ್ರಹಗಳೆಂದು ಹೇಳುತ್ತಾರೆ. ಧರ್ಮವಿದರು ಸತ್ಯ ಮತ್ತು ಆರ್ಜವಗಳು ಪರಮ ಧರ್ಮವೆಂದು ಹೇಳುತ್ತಾರೆ.
दुर्ज्ञेयः शाश्वतो धर्मः स तु सत्ये प्रतिष्ठितः।
श्रुतिप्रमाणो धर्मः स्यादिति वृद्धानुशासनम्॥03-197-039॥
ಶಾಶ್ವತವಾದ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ. ಅದು ಸತ್ಯದಲ್ಲಿ ಪ್ರತಿಷ್ಠಿತವಾಗಿದೆ. ಧರ್ಮವು ಶ್ರುತಿಪ್ರಮಾಣವಾಗಿರಬೇಕೆಂದು ವೃದ್ಧರು ಉಪದೇಶಿಸುತ್ತಾರೆ.
बहुधा दृश्यते धर्मः सूक्ष्म एव द्विजोत्तम।
भवानपि च धर्मज्ञः स्वाध्यायनिरतः शुचिः।
न तु तत्त्वेन भगवन्धर्मान्वेत्सीति मे मतिः॥03-197-040॥
ದ್ವಿಜೋತ್ತಮ! ಬಹುಬಾರಿ ಧರ್ಮವು ಸೂಕ್ಷ್ಮವೆಂದು ತೋರುತ್ತದೆ. ನೀನಾದರೋ ಶುಚಿಯಾಗಿದ್ದು ಸ್ವಾಧ್ಯಾಯದಲ್ಲಿ ನಿರತನಾಗಿದ್ದು ಧರ್ಮವನ್ನು ತಿಳಿದುಕೊಂಡಿದ್ದೀಯೆ. ಭಗವನ್! ಆದರೂ ನೀನು ಧರ್ಮವನ್ನು ನಿಜವಾಗಿ ತಿಳಿದುಕೊಂಡಿಲ್ಲವೆಂದು ನನಗನ್ನಿಸುತ್ತದೆ.
मातापितृभ्यां शुश्रूषुः सत्यवादी जितेन्द्रियः।
मिथिलायां वसन्व्याधः स ते धर्मान्प्रवक्ष्यति।
तत्र गच्छस्व भद्रं ते यथाकामं द्विजोत्तम॥03-197-041॥
ಮಾತಾಪಿತೃಗಳ ಸೇವಾನಿರತನಾದ, ಸತ್ಯವಾದೀ, ಜಿತೇಂದ್ರಿಯ ವ್ಯಾಧನೊಬ್ಬನು ಮಿಥಿಲೆಯಲ್ಲಿ ವಾಸಿಸುತ್ತಾನೆ. ಅವನು ನಿನಗೆ ಧರ್ಮಗಳನ್ನು ತೋರಿಸಿಕೊಡುತ್ತಾನೆ. ದ್ವಿಜೋತ್ತಮ! ನಿನಗಿಷ್ಟವಾದರೆ ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ!
अत्युक्तमपि मे सर्वं क्षन्तुमर्हस्यनिन्दित।
स्त्रियो ह्यवध्याः सर्वेषां ये धर्मविदुषो जनाः॥03-197-042॥
ಅನಿಂದಿತ! ನಾನು ಹೆಚ್ಚಾಗಿಯೇ ಮಾತನಾಡಿದ್ದಿದ್ದರೆ ಅವೆಲ್ಲವನ್ನೂ ಕ್ಷಮಿಸಬೇಕು. ಯಾಕೆಂದರೆ ಧರ್ಮವಿದುಷ ಜನರಿಗೆ ಸ್ತ್ರೀಯರು ಅವಧ್ಯರಲ್ಲವೇ?”
ब्राह्मण उवाच।
प्रीतोऽस्मि तव भद्रं ते गतः क्रोधश्च शोभने।
उपालम्भस्त्वया ह्युक्तो मम निःश्रेयसं परम्।
स्वस्ति तेऽस्तु गमिष्यामि साधयिष्यामि शोभने॥03-197-043॥
ಬ್ರಾಹ್ಮಣನು ಹೇಳಿದನು: “ಶೋಭನೇ! ನಿನಗೆ ಮಂಗಳವಾಗಲಿ. ನಿನ್ನಿಂದ ಸಂತೋಷಗೊಂಡಿದ್ದೇನೆ. ಸಿಟ್ಟು ಹೊರಟುಹೋಗಿದೆ. ನೀನು ನೀಡಿದ ಟೀಕೆಗಳು ನನಗೆ ಪರಮ ಶ್ರೇಯಸ್ಕರವಾದವುಗಳು. ಶೋಭನೇ! ನಾನು ಹೋಗಿ ಉತ್ತಮ ಪುರುಷನಾಗುವುದನ್ನು ಸಾಧಿಸುತ್ತೇನೆ.””
मार्कण्डेय उवाच।
तया विसृष्टो निर्गम्य स्वमेव भवनं ययौ।
विनिन्दन्स द्विजोऽऽत्मानं कौशिको नरसत्तम॥03-197-044॥
ಮಾರ್ಕಂಡೇಯನು ಹೇಳಿದನು: “ಅವಳಿಂದ ಬೀಳ್ಕೊಂಡು ಆ ದ್ವಿಜ ನರಸತ್ತಮ ಕೌಶಿಕನು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ತನ್ನ ಮನೆಗೆ ಹಿಂದುರಿಗಿದನು.”
मार्कण्डेय उवाच।
चिन्तयित्वा तदाश्चर्यं स्त्रिया प्रोक्तमशेषतः।
विनिन्दन्स द्विजोऽऽत्मानमागस्कृत इवाबभौ॥03-198-001॥
ಮಾರ್ಕಂಡೇಯನು ಹೇಳಿದನು: “ಸ್ತ್ರೀಯು ಹೇಳಿದ ಆಶ್ಚರ್ಯಕರ ವಿಷಯದ ಕುರಿತು ಸಂಪೂರ್ಣವಾಗಿ ಆಲೋಚಿಸಿ ದ್ವಿಜನು ತನ್ನನ್ನು ತಾನೇ ನಿಂದಿಸಿಕೊಂಡು ತಪ್ಪಿತಸ್ಥನಂತಾದನು.
चिन्तयानः स धर्मस्य सूक्ष्मां गतिमथाब्रवीत्।
श्रद्दधानेन भाव्यं वै गच्छामि मिथिलामहम्॥03-198-002॥
ಧರ್ಮದ ಸೂಕ್ಷ್ಮಗತಿಯ ಕುರಿತು ಚಿಂತಿಸುತ್ತಾ ಅವನು ತನ್ನಲ್ಲಿಯೇ ಹೇಳಿಕೊಂಡನು: “ಇದರಲ್ಲಿ ಶ್ರದ್ಧೆಯನ್ನಿಡಬೇಕು. ನಾನು ಮಿಥಿಲಿಗೆ ಹೋಗುತ್ತೇನೆ.
कृतात्मा धर्मवित्तस्यां व्याधो निवसते किल।
तं गच्छाम्यहमद्यैव धर्मं प्रष्टुं तपोधनम्॥03-198-003॥
ಅಲ್ಲಿ ಕೃತಾತ್ಮ ಧರ್ಮಾತ್ಮ ವ್ಯಾಧನು ವಾಸಿಸುತ್ತಿದ್ದಾನೆಂದು ಅವಳು ಹೇಳಿಲ್ಲವೇ? ಇಂದೇ ನಾನು ಅಲ್ಲಿಗೆ ಹೋಗಿ ಆ ತಪೋಧನನಲ್ಲಿ ಧರ್ಮದ ಕುರಿತು ಕೇಳುತ್ತೇನೆ.”
इति संचिन्त्य मनसा श्रद्दधानः स्त्रिया वचः।
बलाकाप्रत्ययेनासौ धर्म्यैश्च वचनैः शुभैः।
संप्रतस्थे स मिथिलां कौतूहलसमन्वितः॥03-198-004॥
ಹೀಗೆ ಅವಳು ಬಲಾಕದ ಕುರಿತು ಹೇಳಿದ್ದುದನ್ನೂ ಮತ್ತು ಧರ್ಮಕರ ಶುಭವಚನಗಳನ್ನೂ ಮನಸ್ಸಿನಲ್ಲಿ ಆಲೋಚಿಸಿ ಅವನು ಸ್ತ್ರೀಯ ಮಾತುಗಳಲ್ಲಿ ಶ್ರದ್ಧೆಯನ್ನಿರಿಸಿದನು. ಮತ್ತು ಕುತೂಹಲದಿಂದ ಮಿಥಿಲೆಗೆ ಪ್ರಯಾಣ ಬೆಳೆಸಿದನು.
अतिक्रामन्नरण्यानि ग्रामांश्च नगराणि च।
ततो जगाम मिथिलां जनकेन सुरक्षिताम्॥03-198-005॥
ಅರಣ್ಯಗಳನ್ನೂ, ಗ್ರಾಮಗಳನ್ನೂ, ನಗರಗಳನ್ನೂ ದಾಟಿ ಜನಕನಿಂದ ಸುರಕ್ಷಿತವಾಗಿದ್ದ ಮಿಥಿಲೆಗೆ ಹೋದನು.
धर्मसेतुसमाकीर्णां यज्ञोत्सववतीं शुभाम्।
गोपुराट्टालकवतीं गृहप्राकारशोभिताम्॥03-198-006॥
ಧರ್ಮಕ್ಕನುಗುಣವಾಗಿ ವಿಭಜಿಸಲ್ಪಟ್ಟ ಆ ನಗರಿಯು ಯಜ್ಞ-ಉತ್ಸವಗಳಿಂದ ತುಂಬಿ ಪುಣ್ಯಕರವಾಗಿತ್ತು. ದ್ವಾರ-ಗೋಪುರಗಳಿಂದ ರಕ್ಷಿತವಾಗಿತ್ತು ಮತ್ತು ಗೃಹ-ಪ್ರಾಕಾರಗಳಿಂದ ಶೋಭಿಸುತ್ತಿತ್ತು.
प्रविश्य स पुरीं रम्यां विमानैर्बहुभिर्वृताम्।
पण्यैश्च बहुभिर्युक्तां सुविभक्तमहापथाम्॥03-198-007॥
अश्वै रथैस्तथा नागैर्यानैश्च बहुभिर्वृताम्।
हृष्टपुष्टजनाकीर्णां नित्योत्सवसमाकुलाम्॥03-198-008॥
ಬಹಳಷ್ಟು ಐಶ್ವರ್ಯಗಳಿಂದ ತುಂಬಿದ್ದ, ಬಹು ವಿಮಾನಗಳಿಂದ ಆವೃತವಾಗಿದ್ದ, ಚೆನ್ನಾಗಿ ರಚಿಸಲ್ಪಟ್ಟ ಹೆದ್ದಾರಿಗಳನ್ನುಳ್ಳ, ಬಹುಸಂಖ್ಯೆಯ ಕುದುರೆ, ರಥ, ಮತ್ತು ಆನೆಗಳೇ ಮೊದಲಾದ ವಾಹನಗಳಿಂದ ತುಂಬಿದ್ದ, ಸಂತೋಷದಿಂದ, ಆರೋಗ್ಯದಿಂದ ಕೂಡಿರುವ ಜನಸಮೂಹಗಳನ್ನು ಹೊಂದಿದ್ದ, ನಿತ್ಯವೂ ಉತ್ಸವವೋ ಎಂಬಂತಿದ್ದ ಆ ರಮ್ಯ ಪುರಿಯನ್ನು ಪ್ರವೇಶಿಸಿದನು.
सोऽपश्यद्बहुवृत्तान्तां ब्राह्मणः समतिक्रमन्।
धर्मव्याधमपृच्छच्च स चास्य कथितो द्विजैः॥03-198-009॥
ಸಂಚರಿಸುತ್ತಾ ಆ ಬ್ರಾಹ್ಮಣನು ಅಲ್ಲಿ ನಡೆಯುತ್ತಿದ್ದ ಬಹಳಷ್ಟನ್ನು ನೋಡಿದನು; ಧರ್ಮವ್ಯಾಧನ ಕುರಿತು ಕೇಳಲು, ದ್ವಿಜರು ಅವನಿಗೆ ಹೇಳಿದರು.
अपश्यत्तत्र गत्वा तं सूनामध्ये व्यवस्थितम्।
मार्गमाहिषमांसानि विक्रीणन्तं तपस्विनम्।
आकुलत्वात्तु क्रेतॄणामेकान्ते संस्थितो द्विजः॥03-198-010॥
ಅಲ್ಲಿ, ಅಂಗಡಿಗಳ ಮಧ್ಯೆ ನೆಲಸಿದ್ದ, ಮಾರ್ಗ-ಮಾಹಿಷ ಮಾಂಸಗಳನ್ನು ಮಾರುತ್ತಿದ್ದ ತಪಸ್ವಿಯನ್ನು ಕಂಡನು. ಗ್ರಾಹಕರ ಗುಂಪನ್ನು ನೋಡಿ ದ್ವಿಜನು ಒಬ್ಬನೇ ಒಂದು ಸ್ಥಳದಲ್ಲಿ ನಿಂತುಕೊಂಡನು.
स तु ज्ञात्वा द्विजं प्राप्तं सहसा संभ्रमोत्थितः।
आजगाम यतो विप्रः स्थित एकान्त आसने॥03-198-011॥
ದ್ವಿಜನು ಬಂದಿದ್ದಾನೆಂದು ತಿಳಿದು ಅವನು ತಕ್ಷಣವೇ ಎದ್ದು ವಿಪ್ರನು ಏಕಾಂತನಾಗಿ ಕುಳಿತಿದ್ದಲ್ಲಿಗೆ ಬಂದನು.
व्याध उवाच।
अभिवादये त्वा भगवन्स्वागतं ते द्विजोत्तम।
अहं व्याधस्तु भद्रं ते किं करोमि प्रशाधि माम्॥03-198-012॥
ವ್ಯಾಧನು ಹೇಳಿದನು: “ಭಗವನ್! ನಿನಗೆ ನಮಸ್ಕಾರಗಳು. ದ್ವಿಜೋತ್ತಮ! ನಿನಗೆ ಸ್ವಾಗತ! ನಾನು ವ್ಯಾಧ! ನಿನಗೆ ಮಂಗಳವಾಗಲಿ! ನಾನೇನು ಮಾಡಲಿ? ಚಿತ್ತೈಸು.
एकपत्न्या यदुक्तोऽसि गच्छ त्वं मिथिलामिति।
जानाम्येतदहं सर्वं यदर्थं त्वमिहागतः॥03-198-013॥
ಓರ್ವ ಪತಿವ್ರತೆಯು ನಿನಗೆ ಮಿಥಿಲೆಗೆ ಹೋಗೆಂದು ಹೇಳಿದ್ದಾಳೆ. ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬ ಕಾರಣಗಳೆಲ್ಲವೂ ನನಗೆ ತಿಳಿದಿದೆ.””
मार्कण्डेय उवाच।
श्रुत्वा तु तस्य तद्वाक्यं स विप्रो भृशहर्षितः।
द्वितीयमिदमाश्चर्यमित्यचिन्तयत द्विजः॥03-198-014॥
ಮಾರ್ಕಂಡೇಯನು ಹೇಳಿದನು: “ಅವನ ಆ ಮಾತುಗಳನ್ನು ಕೇಳಿದ ವಿಪ್ರನು ತುಂಬಾ ಹರ್ಷಿತನಾದನು. ಇದು ಎರಡನೆಯ ಆಶ್ಚರ್ಯವೆಂದು ದ್ವಿಜನು ಆಲೋಚಿಸಿದನು.
अदेशस्थं हि ते स्थानमिति व्याधोऽब्रवीद्द्विजम्।
गृहं गच्छाव भगवन्यदि रोचयसेऽनघ॥03-198-015॥
“ನೀನು ನಿಲ್ಲಬಾರದ ಸ್ಥಳದಲ್ಲಿ ನಿಂತಿದ್ದೀಯೆ! ಅನಘ! ನಿನಗಿಷ್ಟವಾದರೆ ಭಗವನ್! ಮನೆಗೆ ಹೋಗೋಣ!” ಎಂದು ವ್ಯಾಧನು ದ್ವಿಜನಿಗೆ ಹೇಳಿದನು.
बाढमित्येव संहृष्टो विप्रो वचनमब्रवीत्।
अग्रतस्तु द्विजं कृत्वा स जगाम गृहान्प्रति॥03-198-016॥
ಸಂತೋಷದಿಂದ ವಿಪ್ರನು “ಧಾರಾಳವಾಗಿ!” ಎಂದು ಉತ್ತರಿಸಿದನು. ದ್ವಿಜನನ್ನು ಮುಂದಿರಿಸಿಕೊಂಡು ಅವನ ಮನೆಯ ಕಡೆ ನಡೆದನು.
प्रविश्य च गृहं रम्यमासनेनाभिपूजितः।
पाद्यमाचमनीयं च प्रतिगृह्य द्विजोत्तमः॥03-198-017॥
ಆ ಸುಂದರ ಗೃಹವನ್ನು ಪ್ರವೇಶಿಸಿ. ಆಸನ ಸತ್ಕಾರಗಳನ್ನೂ, ಪಾದ್ಯ ಆಚಮನೀಯಗಳನ್ನು ದ್ವಿಜೋತ್ತಮನು ಸ್ವೀಕರಿಸಿದನು.
ततः सुखोपविष्टस्तं व्याधं वचनमब्रवीत्।
कर्मैतद्वै न सदृशं भवतः प्रतिभाति मे।
अनुतप्ये भृशं तात तव घोरेण कर्मणा॥03-198-018॥
ಸುಖವಾಗಿ ಕುಳಿತುಕೊಂಡನಂತರ ವ್ಯಾಧನಿಗೆ ಹೇಳಿದನು: “ನೀನು ಮಾಡುವ ಕೆಲಸವು ನಿನಗೆ ಸರಿಯಾದುದಲ್ಲವೆಂದು ನನಗನ್ನಿಸುತ್ತದೆ. ಮಗೂ! ನೀನು ಈ ರೀತಿಯ ಘೋರ ಕರ್ಮಗಳನ್ನು ಮಾಡುತ್ತಿರುವೆಯೆಂದು ನನಗೆ ಅನುತಾಪವುಂಟಾಗುತ್ತಿದೆ.”
व्याध उवाच।
कुलोचितमिदं कर्म पितृपैतामहं मम।
वर्तमानस्य मे धर्मे स्वे मन्युं मा कृथा द्विज॥03-198-019॥
ವ್ಯಾಧನು ಹೇಳಿದನು: “ಇದು ನನ್ನ ಪಿತೃಪಿತಾಮಹರಿಂದ ಬಂದ ಕುಲೋಚಿತವಾದ ಕರ್ಮ. ದ್ವಿಜ! ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆಂದು ಸಿಟ್ಟಾಗದಿರು.
धात्रा तु विहितं पूर्वं कर्म स्वं पालयाम्यहम्।
प्रयत्नाच्च गुरू वृद्धौ शुश्रूषेऽहं द्विजोत्तम॥03-198-020॥
ಧಾತ್ರುವು ಮೊದಲೇ ವಿಹಿತಗೊಳಿಸಿದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ದ್ವಿಜೋತ್ತಮ! ಹಿರಿಯರ ಮತ್ತು ವೃದ್ಧರ ಸೇವೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
सत्यं वदे नाभ्यसूये यथाशक्ति ददामि च।
देवतातिथिभृत्यानामवशिष्टेन वर्तये॥03-198-021॥
ಸತ್ಯವನ್ನು ಮಾತನಾಡುತ್ತೇನೆ. ಅಸೂಯೆ ಪಡುವುದಿಲ್ಲ. ಮತ್ತು ಯಥಾಶಕ್ತಿ ದಾನಮಾಡುತ್ತೇನೆ. ದೇವತೆಗಳು, ಅತಿಥಿಗಳು ಮತ್ತು ನನ್ನನ್ನೇ ಅವಲಂಬಿಸಿರುವವರು ಬಿಟ್ಟಿದ್ದುದನ್ನು ತಿಂದು ಬದುಕುತ್ತೇನೆ.
न कुत्सयाम्यहं किंचिन्न गर्हे बलवत्तरम्।
कृतमन्वेति कर्तारं पुरा कर्म द्विजोत्तम॥03-198-022॥
ದ್ವಿಜೋತ್ತಮ! ಏನನ್ನೂ ಅಲ್ಲಗಳೆಯುವುದಿಲ್ಲ. ನನಗಿಂತ ಬಲಶಾಲಿಗಳನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ಹಿಂದೆ ಮಾಡಿದ ಕರ್ಮಗಳು ಕರ್ತಾರನನ್ನು ಅನುಸರಿಸಿ ಬರುತ್ತವೆ.
कृषिगोरक्ष्यवाणिज्यमिह लोकस्य जीवनम्।
दण्डनीतिस्त्रयी विद्या तेन लोका भवन्त्युत॥03-198-023॥
ಕೃಷಿ, ಗೋರಕ್ಷೆ, ವಾಣಿಜ್ಯ, ರಾಜಕೀಯಗಳು ಈ ಲೋಕದ ಜೀವನ. ಮೂರು ವೇದಗಳಿಂದ ಲೋಕಗಳು ನಡೆಯುತ್ತವೆ.
कर्म शूद्रे कृषिर्वैश्ये संग्रामः क्षत्रिये स्मृतः।
ब्रह्मचर्यं तपो मन्त्राः सत्यं च ब्राह्मणे सदा॥03-198-024॥
ಶೂದ್ರರಿಗೆ ಕರ್ಮ, ವೈಶ್ಯರಿಗೆ ಕೃಷಿ ಮತ್ತು ಕ್ಷತ್ರಿಯರಿಗೆ ಸಂಗ್ರಾಮವೆಂದು ಕೇಳಿದ್ದೇವೆ. ಬ್ರಾಹ್ಮಣರಿಗೆ ಸದಾ ಬ್ರಹ್ಮಚರ್ಯೆ, ತಪಸ್ಸು, ಮಂತ್ರ, ಮತ್ತು ಸತ್ಯ.
राजा प्रशास्ति धर्मेण स्वकर्मनिरताः प्रजाः।
विकर्माणश्च ये केचित्तान्युनक्ति स्वकर्मसु॥03-198-025॥
ಸ್ವಕರ್ಮದಲ್ಲಿ ನಿರತರಾದ ಪ್ರಜೆಗಳನ್ನು ರಾಜನು ಧರ್ಮದಿಂದ ಆಳುತ್ತಾನೆ. ಯಾರಾದರೂ ವಿಕರ್ಮಗಳಲ್ಲಿ ನಿರತರಾದರೆ ಅವರನ್ನು ಸ್ವಕರ್ಮದಲ್ಲಿ ತೊಡಗಿಸುತ್ತಾನೆ.
भेतव्यं हि सदा राज्ञां प्रजानामधिपा हि ते।
मारयन्ति विकर्मस्थं लुब्धा मृगमिवेषुभिः॥03-198-026॥
ಪ್ರಜೆಗಳ ಅಧಿಪತಿಯಾದ ರಾಜನನ್ನು ಸದಾ ಭಯಪಡಬೇಕು. ವಿಕರ್ಮದಲ್ಲಿ ನಿರತರಾದವರನ್ನು ಅವನು ಮೃಗಗಳನ್ನು ಬಾಣಗಳಿಂದ ಹೊಡೆಯುವಂತೆ ವಧಿಸುತ್ತಾನೆ.
जनकस्येह विप्रर्षे विकर्मस्थो न विद्यते।
स्वकर्मनिरता वर्णाश्चत्वारोऽपि द्विजोत्तम॥03-198-027॥
ದ್ವಿಜೋತ್ತಮ! ವಿಪ್ರರ್ಷೇ! ಜನಕನಲ್ಲಿ ಯಾರೂ ವಿಕರ್ಮಿಗಳಿರುವುದು ತಿಳಿದಿಲ್ಲ. ನಾಲ್ಕೂ ವರ್ಣದವರೂ ಅವರವರ ಕರ್ಮಗಳಲ್ಲಿ ನಿರತರಾಗಿದ್ದಾರೆ.
स एष जनको राजा दुर्वृत्तमपि चेत्सुतम्।
दण्ड्यं दण्डे निक्षिपति तथा न ग्लाति धार्मिकम्॥03-198-028॥
ದುರ್ವೃತ್ತಿಯು ತನ್ನ ಮಗನೇ ಆಗಿದ್ದರೂ ರಾಜ ಜನಕನು ಅವನನ್ನು ದಂಡದಿಂದ ದಂಡಿಸಿ ಬೀಳಿಸುತ್ತಾನೆ. ಆದರೆ ಧಾರ್ಮಿಕನನ್ನು ಬಾಧಿಸುವುದಿಲ್ಲ.
सुयुक्तचारो नृपतिः सर्वं धर्मेण पश्यति।
श्रीश्च राज्यं च दण्डश्च क्षत्रियाणां द्विजोत्तम॥03-198-029॥
ದ್ವಿಜೋತ್ತಮ! ಸುಯುಕ್ತಚಾರರಿಂದ ಕೂಡಿದ ನೃಪತಿಯು ಸರ್ವರನ್ನೂ ಧರ್ಮದಿಂದ ನೋಡುತ್ತಾನೆ. ಸಂಪತ್ತು, ರಾಜ್ಯ ಮತ್ತು ಸೇನೆಯು ಕ್ಷತ್ರಿಯರದ್ದು.
राजानो हि स्वधर्मेण श्रियमिच्छन्ति भूयसीम्।
सर्वेषामेव वर्णानां त्राता राजा भवत्युत॥03-198-030॥
ರಾಜನೂ ಕೂಡ ಸ್ವಧರ್ಮದಿಂದಲೇ ಹೆಚ್ಚಿನ ಸಂಪತ್ತನ್ನು ಬಯಸುತ್ತಾನೆ. ರಾಜನು ಎಲ್ಲ ವರ್ಣದವರ ತ್ರಾತನಾಗಿದ್ದಾನೆ.
परेण हि हतान्ब्रह्मन्वराहमहिषानहम्।
न स्वयं हन्मि विप्रर्षे विक्रीणामि सदा त्वहम्॥03-198-031॥
ಬ್ರಹ್ಮನ್! ವರಾಹ-ಮಹಿಷಗಳನ್ನು ಇತರರು ಕೊಲ್ಲುತ್ತಾರೆ. ಸ್ವಯಂ ನಾನು ಕೊಲ್ಲುವುದಿಲ್ಲ. ಸದಾ ನಾನು ಅವುಗಳನ್ನು ಮಾರುತ್ತೇನೆ ಮಾತ್ರ.
न भक्षयामि मांसानि ऋतुगामी तथा ह्यहम्।
सदोपवासी च तथा नक्तभोजी तथा द्विज॥03-198-032॥
ದ್ವಿಜ! ಮಾಂಸಗಳನ್ನು ನಾನು ತಿನ್ನುವುದಿಲ್ಲ. ಯಾವಾಗ ಮಾಡಬೇಕೋ ಆವಾಗ ಮಾತ್ರ ನಾನು ನನ್ನ ಪತ್ನಿಯನ್ನು ಕೂಡುತ್ತೇನೆ. ಸದಾ ಉಪವಾಸದಲ್ಲಿದ್ದುಕೊಂಡು, ರಾತ್ರಿ ಮಾತ್ರ ಊಟ ಮಾಡುತ್ತೇನೆ.
अशीलश्चापि पुरुषो भूत्वा भवति शीलवान्।
प्राणिहिंसारतश्चापि भवते धार्मिकः पुनः॥03-198-033॥
ಅಶೀಲನಾಗಿದ್ದರೂ ಕೂಡ ಪುರುಷನು ಶೀಲವಂತನಾಗುತ್ತಾನೆ. ಪುನಃ ಧಾರ್ಮಿಕನೂ ಕೂಡ ಪ್ರಾಣಿಹಿಂಸೆಗಳಲ್ಲಿ ತೊಡಗುತ್ತಾನೆ.
व्यभिचारान्नरेन्द्राणां धर्मः संकीर्यते महान्।
अधर्मो वर्धते चापि संकीर्यन्ते तथा प्रजाः॥03-198-034॥
ರಾಜರ ವ್ಯಬಿಚಾರದಿಂದ ಧರ್ಮವು ಮಹಾ ಗೊಂದಲಕ್ಕೊಳಗಾಗುತ್ತದೆ. ಅಧರ್ಮವು ಹೆಚ್ಚಾಗುತ್ತದೆ ಮತ್ತು ಪ್ರಜೆಗಳು ಗೊಂದಲಗಳಿಗೊಳಗಾಗುತ್ತಾರೆ.
उरुण्डा वामनाः कुब्जाः स्थूलशीर्षास्तथैव च।
क्लीबाश्चान्धाश्च जायन्ते बधिरा लम्बचूचुकाः।
पार्थिवानामधर्मत्वात्प्रजानामभवः सदा॥03-198-035॥
ಜನರು ಸಣ್ಣವರಾಗಿ, ಕುಳ್ಳರಾಗಿ, ಕುಬ್ಜರಾಗಿ, ದೊಡ್ಡ ತಲೆಯುಳ್ಳವರಾಗಿ, ನಪುಂಸಕರಾಗಿ, ಕುರುಡರಾಗಿ, ಕಿವುಡರಾಗಿ, ಬಗ್ಗಿದವರಾಗಿ ಹುಟ್ಟುತ್ತಾರೆ. ರಾಜರ ಅಧರ್ಮದಿಂದ ಪ್ರಜೆಗಳು ಕಡಿಮೆಯಾಗುತ್ತಾರೆ.
स एष राजा जनकः सर्वं धर्मेण पश्यति।
अनुगृह्णन्प्रजाः सर्वाः स्वधर्मनिरताः सदा॥03-198-036॥
ನಮ್ಮ ಈ ರಾಜ ಜನಕನು ಎಲ್ಲವನ್ನೂ ಧರ್ಮದಿಂದ ನೋಡುತ್ತಾನೆ. ಸದಾ ಸ್ವಧರ್ಮನಿರತರಾದ ಪ್ರಜೆಗಳಿಗೆ ಅನುಗ್ರಹಿಸುತ್ತಾನೆ.
ये चैव मां प्रशंसन्ति ये च निन्दन्ति मानवाः।
सर्वान्सुपरिणीतेन कर्मणा तोषयाम्यहम्॥03-198-037॥
ನನ್ನನ್ನು ಪ್ರಶಂಸಿಸುವವರಿರಲಿ ನಿಂದಿಸುವವರಿರಲಿ, ಎಲ್ಲ ಜನರಿಗೂ ನಾನು ನನ್ನ ಸುಪರಿಣಿತ ಕರ್ಮಗಳಿಂದ ತೃಪ್ತಗೊಳಿಸುತ್ತೇನೆ.
ये जीवन्ति स्वधर्मेण संभुञ्जन्ते च पार्थिवाः।
न किंचिदुपजीवन्ति दक्षा उत्थानशीलिनः॥03-198-038॥
ಸ್ವಧರ್ಮದಂತೆ ಯಾರು ಜೀವಿಸುತ್ತಾರೋ ಮತ್ತು ಭೋಗಿಸುತ್ತಾರೋ ಹಾಗೂ ಬೇರೆಯವರ ಅಥವಾ ಬೇರೊಂದನ್ನು ಆಧರಿಸಿ ಜೀವಿಸುವುದಿಲ್ಲವೋ ಅಂಥಹ ಪಾರ್ಥಿವರು ಉತ್ಥಾನಶೀಲರಾಗಿರುತ್ತಾರೆ.
शक्त्यान्नदानं सततं तितिक्षा धर्मनित्यता।
यथार्हं प्रतिपूजा च सर्वभूतेषु वै दया।
त्यागान्नान्यत्र मर्त्यानां गुणास्तिष्ठन्ति पूरुषे॥03-198-039॥
ಶಕ್ತಿಯಿದ್ದಷ್ಟು ಅನ್ನದಾನ ಮಾಡುವುದು, ಸತತ ತಾಳ್ಮೆಯಲ್ಲಿರುವುದು, ನಿತ್ಯವೂ ಧರ್ಮದಲ್ಲಿರುವುದು, ಯಥಾರ್ಹವಾಗಿ ಪ್ರತಿ ಗೌರವಿಸುವುದು, ಮತ್ತು ಸರ್ವಭೂತಗಳಲ್ಲಿ ದಯೆ ಮೊದಲಾದ ಉತ್ತಮ ಮನುಷ್ಯ ಗುಣಗಳು ಪುರುಷನ ತ್ಯಾಗದಿಂದಲ್ಲದೇ ಬೇರೆಯದರಿಂದ ಹುಟ್ಟುವುದಲ್ಲ.
मृषावादं परिहरेत्कुर्यात्प्रियमयाचितः।
न च कामान्न संरम्भान्न द्वेषाद्धर्ममुत्सृजेत्॥03-198-040॥
ಸುಳ್ಳನ್ನು ದೂರವಿಡಬೇಕು. ಕೇಳದೆಯೇ ಪ್ರಿಯವಾದುದನ್ನು ಮಾಡಬೇಕು. ಮತ್ತು ಕಾಮಕ್ಕಾಗಲೀ, ದುಡುಕಿಯಾಗಲೀ ದ್ವೇಷಕ್ಕಾಗಲೀ ಧರ್ಮವನ್ನು ಬಿಡಬಾರದು.
प्रिये नातिभृशं हृष्येदप्रिये न च संज्वरेत्।
न मुह्येदर्थकृच्छ्रेषु न च धर्मं परित्यजेत्॥03-198-041॥
ಬೇಕಾದದ್ದು ನಡೆದಾಗ ತುಂಬಾ ಸಂತೋಷಪಡಬಾರದು. ಬೇಡದಿದ್ದದು ನಡೆದಾಗ ಜ್ವರಪೀಡಿತರಾಗಬಾರದು. ಅಥವಾ ಕಷ್ಟಗಳು ಬಂದಾಗ ಧರ್ಮವನ್ನು ಬಿಟ್ಟುಬಿಡುವಷ್ಟು ಮೋಹಿತರಾಗಬಾರದು.
कर्म चेत्किंचिदन्यत्स्यादितरन्न समाचरेत्।
यत्कल्याणमभिध्यायेत्तत्रात्मानं नियोजयेत्॥03-198-042॥
ಯಾವ ಕರ್ಮವಾದರೂ ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಪುನಃ ಮಾಡಬಾರದು. ತನಗೆ ಯಾವುದು ಸರಿಯೆನ್ನಿಸುತ್ತದೆಯೋ ಅದರಂತೆ ತನ್ನನ್ನು ತೊಡಗಿಸಿಕೊಳ್ಳಬೇಕು.
न पापं प्रति पापः स्यात्साधुरेव सदा भवेत्।
आत्मनैव हतः पापो यः पापं कर्तुमिच्छति॥03-198-043॥
ಪಾಪಕ್ಕೆ ಹಿಂದಿರುಗಿ ಪಾಪ ಮಾಡಬಾರದು. ಸದಾ ಸಾಧುವಾಗಿರಬೇಕು. ಪಾಪವನ್ನು ಮಾಡಬಯಸುವ ಪಾಪಿಯು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ.
कर्म चैतदसाधूनां वृजिनानामसाधुवत्।
न धर्मोऽस्तीति मन्वानाः शुचीनवहसन्ति ये।
अश्रद्दधाना धर्मस्य ते नश्यन्ति न संशयः॥03-198-044॥
ಕೆಟ್ಟ ಮೋಸಗಾರರ ಕರ್ಮಗಳು ಸಾಧುವಲ್ಲ. ಧರ್ಮವೇ ಇಲ್ಲವೆಂದು ಯೋಚಿಸಿ, ಧರ್ಮದಲ್ಲಿ ಶ್ರದ್ಧೆಯನ್ನಿಡದೇ, ಶುಚಿಯಾಗಿದ್ದವರನ್ನು ಯಾರು ಅವಹೇಳನ ಮಾಡುತ್ತಾರೋ ಅವರು ನಾಶ ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
महादृतिरिवाध्मातः पापो भवति नित्यदा।
मूढानामवलिप्तानामसारं भाषितं भवेत्।
दर्शयत्यन्तरात्मानं दिवा रूपमिवांशुमान्॥03-198-045॥
ಪಾಪಿಷ್ಟನು ನಿತ್ಯವೂ ಗಾಳಿತುಂಬಿದ ಚೀಲದಂತೆ ಉಬ್ಬಿಕೊಂಡಿರುತ್ತಾನೆ. ಮೂಢರ ಮಾತುಗಳಲ್ಲಿ ಸಾರವಿರುವುದಿಲ್ಲ ಮತ್ತು ರವಿಯು ಹೇಗೆ ಎಲ್ಲವನ್ನೂ ತೋರಿಸುತ್ತಾನೋ ಹಾಗೆ ಅದು ಅವರ ಅಂತರಾತ್ಮವನ್ನು ತೋರಿಸುತ್ತದೆ.
न लोके राजते मूर्खः केवलात्मप्रशंसया।
अपि चेह मृजा हीनः कृतविद्यः प्रकाशते॥03-198-046॥
ಕೇವಲ ಆತ್ಮಪ್ರಶಂಸನೆಯಿಂದ ಮೂರ್ಖನು ಲೋಕದಲ್ಲಿ ರಾಜಿಸುವುದಿಲ್ಲ. ಆದರೆ ವಿದ್ಯಾವಂತನು, ಹೀನನಾಗಿದ್ದರೂ ಪ್ರಕಾಶಿಸುತ್ತಾನೆ.
अब्रुवन्कस्यचिन्निन्दामात्मपूजामवर्णयन्।
न कश्चिद्गुणसंपन्नः प्रकाशो भुवि दृश्यते॥03-198-047॥
ಯಾರಿಗೂ ನಿಂದನೆಯನ್ನು ಮಾಡದ, ಆತ್ಮವರ್ಣನೆಯನ್ನು ಮಾಡಿ ಪೂಜಿಸಿಕೊಳ್ಳದವನು ಗುಣಸಂಪನ್ನನಾಗಿ ಭೂಮಿಯಲ್ಲಿ ಪ್ರಕಾಶಿತನಾಗಿ ಕಂಡುಬರುತ್ತಾನೆ.
विकर्मणा तप्यमानः पापाद्विपरिमुच्यते।
नैतत्कुर्यां पुनरिति द्वितीयात्परिमुच्यते॥03-198-048॥
ತಪ್ಪುಗಳಿಗೆ ಪರಿತಪಿಸಿದರೆ ಅದರ ಪಾಪದಿಂದ ಮುಕ್ತರಾಗುತ್ತಾರೆ. ಪುನಃ ಇದನ್ನು ಮಾಡುವುದಿಲ್ಲ ಎಂದು ಅದು ಮರುಕಳಿಸುವುದನ್ನು ತಪ್ಪಿಸಬೇಕು.
कर्मणा येन तेनेह पापाद्द्विजवरोत्तम।
एवं श्रुतिरियं ब्रह्मन्धर्मेषु परिदृश्यते॥03-198-049॥
ದ್ವಿಜೋತ್ತಮ! ಈ ರೀತಿ ಯಾವುದೇ ಪಾಪದಿಂದ ಬಿಡುಗಡೆ ಹೊಂದಬಹುದು. ಬ್ರಹ್ಮನ್! ಇದು ಧರ್ಮಗಳಲ್ಲಿ ಕಂಡುಬಂದಿರುವುದು ಎಂದು ಕೇಳುತ್ತೇವೆ.
पापान्यबुद्ध्वेह पुरा कृतानि; प्राग्धर्मशीलो विनिहन्ति पश्चात्।
धर्मो ब्रह्मन्नुदते पूरुषाणां; यत्कुर्वते पापमिह प्रमादात्॥03-198-050॥
ಹಿಂದೆ ಮಾಡಿದ ಪಾಪಗಳನ್ನು ತಿಳಿಯದೇ, ಧರ್ಮಶೀಲನು ನಂತರದಲ್ಲಿ ಅವುಗಳನ್ನು ನಾಶಪಡಿಸುತ್ತಾನೆ. ಧರ್ಮವು ತಪ್ಪಿತಸ್ಥ ಭಾವನೆಯನ್ನು, ಇಲ್ಲಿ ತಿಳಿಯದೇ ಮಾಡಿದ ಪಾಪವನ್ನು ಹೋಗಲಾಡಿಸುತ್ತದೆ.
पापं कृत्वा हि मन्येत नाहमस्मीति पूरुषः।
चिकीर्षेदेव कल्याणं श्रद्दधानोऽनसूयकः॥03-198-051॥
ಪಾಪವನ್ನು ಮಾಡಿ, ಇದು ನಾನಲ್ಲ ಎಂದು ತಿಳಿಯಬೇಕು. ಶ್ರದ್ಧೆಯಿಂದ ವಿರೋಧಿಸದೇ ಯಾವುದು ಸರಿಯೋ ಅದನ್ನು ಮಾಡಲು ನೋಡಬೇಕು.
वसनस्येव छिद्राणि साधूनां विवृणोति यः।
पापं चेत्पुरुषः कृत्वा कल्याणमभिपद्यते।
मुच्यते सर्वपापेभ्यो महाभ्रैरिव चन्द्रमाः॥03-198-052॥
ಸಾಧುಗಳ ಬಟ್ಟೆಯ ಹರಕುಗಳನ್ನು ಮುಚ್ಚಿದರೂ ಕೂಡ ಪಾಪಗಳನ್ನು ಕಳೆದುಕೊಂಡು ಪುರುಷನು ಕಲ್ಯಾಣವನ್ನು ಹೊಂದುತ್ತಾನೆ. ಚಂದ್ರನು ಮಹಾಮೋಡಗಳಿಂದ ಹೇಗೋ ಹಾಗೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
यथादित्यः समुद्यन्वै तमः सर्वं व्यपोहति।
एवं कल्याणमातिष्ठन्सर्वपापैः प्रमुच्यते॥03-198-053॥
ಉದಯವಾಗುವ ಸೂರ್ಯನು ಹೇಗೆ ಎಲ್ಲ ಕತ್ತಲೆಯನ್ನೂ ಕಳೆಯುತ್ತಾನೋ ಹಾಗೆ ಕಲ್ಯಾಣ ಕಾರ್ಯಗಳನ್ನು ಮಾಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ.
पापानां विद्ध्यधिष्ठानं लोभमेव द्विजोत्तम।
लुब्धाः पापं व्यवस्यन्ति नरा नातिबहुश्रुताः।
अधर्मा धर्मरूपेण तृणैः कूपा इवावृताः॥03-198-054॥
ದ್ವಿಜೋತ್ತಮ! ಲೋಭವೇ ಪಾಪಗಳ ಕೇಂದ್ರಬಿಂದುವೆಂದು ತಿಳಿ. ದುರಾಸಿ ನರರು, ಬಹಳಷ್ಟು ವಿವೇಕವಿಲ್ಲದೇ, ಪಾಪಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಹುಲ್ಲುಗಳಿಂದ ಮುಚ್ಚಲ್ಪಟ್ಟ ಬಾವಿಯಂತೆ ಧರ್ಮದ ರೂಪವನ್ನು ತೊಟ್ಟಿರುವ ಅವರು ಅಧರ್ಮಿಗಳು.
तेषां दमः पवित्राणि प्रलापा धर्मसंश्रिताः।
सर्वं हि विद्यते तेषु शिष्टाचारः सुदुर्लभः॥03-198-055॥
ಅವರಲ್ಲಿ ದಮವಿದೆ. ಪವಿತ್ರ ಮಾತುಗಳನ್ನಾಡುತ್ತಾರೆ. ಧರ್ಮಸಂಶ್ರಿತರಾಗಿರುತ್ತಾರೆ. ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಆದರೆ ಅವರಲ್ಲಿ ಶಿಷ್ಟಾಚಾರವು ದುರ್ಲಭವಾಗಿರುತ್ತದೆ.””
मार्कण्डेय उवाच।
स तु विप्रो महाप्राज्ञो धर्मव्याधमपृच्छत।
शिष्टाचारं कथमहं विद्यामिति नरोत्तम।
एतन्महामते व्याध प्रब्रवीहि यथातथम्॥03-198-056॥
ಮಾರ್ಕಂಡೇಯನು ಹೇಳಿದನು: “ಆಗ ಮಹಾಪ್ರಾಜ್ಞ ವಿಪ್ರನು ಧರ್ಮವ್ಯಾಧನನ್ನು ಕೇಳಿದನು: “ಶಿಷ್ಟಾಚಾರವೆಂದರೆ ಏನೆಂದು ತಿಳಿಸು. ಮಹಾಮತಿ! ನರೋತ್ತಮ! ವ್ಯಾಧ! ಇದರ ಕುರಿತು ಯಥಾವತ್ತಾಗಿ ಹೇಳು.”
व्याध उवाच।
यज्ञो दानं तपो वेदाः सत्यं च द्विजसत्तम।
पञ्चैतानि पवित्राणि शिष्टाचारेषु नित्यदा॥03-198-057॥
ವ್ಯಾಧನು ಹೇಳಿದನು: “ದ್ವಿಜಸತ್ತಮ! ಯಜ್ಞ, ದಾನ, ತಪಸ್ಸು, ವೇದಗಳು ಮತ್ತು ಸತ್ಯ ಈ ಐದು ನಿತ್ಯವೂ ಪವಿತ್ರವಾಗಿರುವ ಶಿಷ್ಟಾಚಾರಗಳು.
कामक्रोधौ वशे कृत्वा दम्भं लोभमनार्जवम्।
धर्म इत्येव संतुष्टास्ते शिष्टाः शिष्टसंमताः॥03-198-058॥
ಕಾಮ-ಕ್ರೋಧಗಳನ್ನು, ಜಂಬ, ಲೋಭ, ಮತ್ತು ಅಪ್ರಾಮಾಣಿಕತೆಗಳನ್ನು ವಶದಲ್ಲಿಟ್ಟುಕೊಂಡು ಶಿಷ್ಟರು, ಶಿಷ್ಟರಿಂದ ಒಪ್ಪಿಗೆಯನ್ನು ಪಡೆದು, ಧರ್ಮದಲ್ಲಿಯೇ ಸಂತುಷ್ಟರಾಗಿರುತ್ತಾರೆ.
न तेषां विद्यतेऽवृत्तं यज्ञस्वाध्यायशीलिनाम्।
आचारपालनं चैव द्वितीयं शिष्टलक्षणम्॥03-198-059॥
ಯಜ್ಞ ಮತ್ತು ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡವರಿಗೆ ವೃತ್ತಿಯಿಲ್ಲದೇ ಇರುವುದಿಲ್ಲ. ಅವರು ಸರಿಯಾದ ಆಚಾರಗಳನ್ನು ಪಾಲಿಸುತ್ತಾರೆ. ಇದು ಶಿಷ್ಟರ ಎರಡನೆಯ ಲಕ್ಷಣ.
गुरुशुश्रूषणं सत्यमक्रोधो दानमेव च।
एतच्चतुष्टयं ब्रह्मञ्शिष्टाचारेषु नित्यदा॥03-198-060॥
ಬ್ರಾಹ್ಮಣ! ಗುರುಶುಶ್ರೂಷಣ, ಸತ್ಯ, ಅಕ್ರೋಧ, ಮತ್ತು ದಾನ ಈ ನಾಲ್ಕು ನಿತ್ಯವೂ ಶಿಷ್ಟಾಚಾರಗಳು.
शिष्टाचारे मनः कृत्वा प्रतिष्ठाप्य च सर्वशः।
यामयं लभते तुष्टिं सा न शक्या ह्यतोऽन्यथा॥03-198-061॥
ಶಿಷ್ಟಾಚಾರದಲ್ಲಿ ಮನಸ್ಸು ಮಾಡಿ ಯಾವಾಗಲೂ ಅದರಲ್ಲಿಯೇ ಇರುವವನು ಬೇರೆ ಯಾವುದರಿಂದಲೂ ಪಡೆಯಲಾಗದ ತೃಪ್ತಿಯನ್ನು ಪಡೆಯುತ್ತಾನೆ.
वेदस्योपनिषत्सत्यं सत्यस्योपनिषद्दमः।
दमस्योपनिषत्त्यागः शिष्टाचारेषु नित्यदा॥03-198-062॥
ನಿತ್ಯದ ಶಿಷ್ಟಾಚಾರಗಳಲ್ಲಿ ವೇದದ ಗುಟ್ಟು ಸತ್ಯ, ಸತ್ಯದ ಗುಟ್ಟು ದಮ, ಮತ್ತು ದಮದ ಗುಟ್ಟು ತ್ಯಾಗ.
ये तु धर्ममसूयन्ते बुद्धिमोहान्विता नराः।
अपथा गच्छतां तेषामनुयातापि पीड्यते॥03-198-063॥
ಬುದ್ಧಿಮೋಹಾನ್ವಿತರಾಗಿ ಧರ್ಮವನ್ನು ವಿರೋಧಿಸಿ ಬೇರೆಯೇ ಮಾರ್ಗದಲ್ಲಿ ಹೋಗುವವರನ್ನು ಹಿಂಬಾಲಿಸುವವರೂ ಕೂಡ ಪೀಡೆಗೊಳಗಾಗುತ್ತಾರೆ.
ये तु शिष्टाः सुनियताः श्रुतित्यागपरायणाः।
धर्म्यं पन्थानमारूढाः सत्यधर्मपरायणाः॥03-198-064॥
ಆದರೆ ಸುನಿಯತರಾದ, ಶ್ರುತಿತ್ಯಾಗಪರಾಯಣರಾದ ಶಿಷ್ಟರು ಧರ್ಮದ ದಾರಿಯನ್ನು ಏರಿ, ಸತ್ಯಧರ್ಮಪರಾಯಣರಾಗಿರುತ್ತಾರೆ.
नियच्छन्ति परां बुद्धिं शिष्टाचारान्विता नराः।
उपाध्यायमते युक्ताः स्थित्या धर्मार्थदर्शिनः॥03-198-065॥
ಶಿಷ್ಟಾಚಾರದಂತೆ ನಡೆದುಕೊಳ್ಳುವ ನರರು ಪರಮ ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಧರ್ಮಾರ್ಥದರ್ಶಿಗಳಾಗಿದ್ದುಕೊಂಡು ತಮ್ಮ ಉಪಾಧ್ಯಾಯರಿಗೆ ವಿನೀತರಾಗಿರುತ್ತಾರೆ.
नास्तिकान्भिन्नमर्यादान्क्रूरान्पापमतौ स्थितान्।
त्यज ताञ्ज्ञानमाश्रित्य धार्मिकानुपसेव्य च॥03-198-066॥
ನಾಸ್ತಿಕರನ್ನು, ಮರ್ಯಾದೆಯನ್ನು ಮೀರುವವರನ್ನು, ಕ್ರೂರರನ್ನು ಮತ್ತು ಪಾಪಮತಿಗಳನ್ನು ತ್ಯಜಿಸು. ಜ್ಞಾನವನ್ನು ಅವಲಂಬಿಸಿ, ಧಾರ್ಮಿಕರನ್ನು ಅನುಸರಿಸು.
कामलोभग्रहाकीर्णां पञ्चेन्द्रियजलां नदीम्।
नावं धृतिमयीं कृत्वा जन्मदुर्गाणि संतर॥03-198-067॥
ಧೃತಿಯೆನ್ನುವ ನಾವೆಯನ್ನು ಕಟ್ಟಿ ಕಾಮಲೋಭಗಳೆಂಬ ಮೊಸಳೆಗಳನ್ನುಳ್ಳ, ಪಂಚೇಂದ್ರಿಯಗಳೇ ನೀರಾಗಿ ಹರಿಯುವ ನದಿಯನ್ನು ದಾಟಿ ಜನ್ಮದ ಆಚೆ ಹೋಗು.
क्रमेण संचितो धर्मो बुद्धियोगमयो महान्।
शिष्टाचारे भवेत्साधू रागः शुक्लेव वाससि॥03-198-068॥
ಕ್ರಮೇಣವಾಗಿ ಸಂಚಿತಗೊಳಿಸಿದ, ಬುದ್ಧಿಯೋಗಮಯವಾದ ಧರ್ಮವು ಬೆಳೆದು ಸಾಧುಗಳ ಶಿಷ್ಟಾಚಾರವಾಗಿ ಬಿಳೀ ಬಟ್ಟೆಯ ಮೇಲೆ ಕೆಂಪು ಬಿಂದುವಿನಂತೆ ತೋರುತ್ತದೆ.
अहिंसा सत्यवचनं सर्वभूतहितं परम्।
अहिंसा परमो धर्मः स च सत्ये प्रतिष्ठितः।
सत्ये कृत्वा प्रतिष्ठां तु प्रवर्तन्ते प्रवृत्तयः॥03-198-069॥
ಅಹಿಂಸೆ ಮತ್ತು ಸತ್ಯವಚನಗಳು ಸರ್ವಭೂತಗಳಿಗೂ ಪರಮ ಹಿತವಾದವುಗಳು. ಅಹಿಂಸೆಯು ಪರಮ ಧರ್ಮ ಮತ್ತು ಅದು ಸತ್ಯದಲ್ಲಿ ನೆಲೆಗೊಂಡಿದೆ. ಸತ್ಯದಲ್ಲಿದ್ದುಕೊಂಡು ಮಾಡುವವೆಲ್ಲವೂ ಪ್ರವೃತ್ತಿಯಂತೆ ವೃದ್ಧಿಯಾಗುತ್ತವೆ.
सत्यमेव गरीयस्तु शिष्टाचारनिषेवितम्।
आचारश्च सतां धर्मः सन्तश्चाचारलक्षणाः॥03-198-070॥
ಶಿಷ್ಟಾಚಾರದಲ್ಲಿರುವವರ ಸತ್ಯವು ಇನ್ನೂ ಹೆಚ್ಚಿನದು. ಸತ್ಯವಂತರ ಆಚಾರವೇ ಧರ್ಮ. ಆಚಾರವೇ ಸತ್ಯವಂತರ ಲಕ್ಷಣ.
यो यथाप्रकृतिर्जन्तुः स्वां स्वां प्रकृतिमश्नुते।
पापात्मा क्रोधकामादीन्दोषानाप्नोत्यनात्मवान्॥03-198-071॥
ಪ್ರತಿಯೊಂದು ಜಂತುವೂ ಅದರ ಪ್ರಕೃತಿಯನ್ನು, ಅದು ಏನೇ ಇರಲಿ, ಅನುಸರಿಸುತ್ತದೆ. ತನ್ನನ್ನು ನಿಯಂತ್ರಣದಲ್ಲಿಟ್ಟುಕೊಂಡಿರದ ಪಾಪಾತ್ಮನು ಕಾಮ-ಕ್ರೋಧಾದಿ ದೋಷಗಳನ್ನು ಹೊಂದುತ್ತಾನೆ.
आरम्भो न्याययुक्तो यः स हि धर्म इति स्मृतः।
अनाचारस्त्वधर्मेति एतच्छिष्टानुशासनम्॥03-198-072॥
ನ್ಯಾಯಯುಕ್ತವಾಗಿ ಆರಂಭಿಸಿದುದನ್ನೇ ಧರ್ಮವೆಂದು ಹೇಳುತ್ತಾರೆ. ಅನಾಚಾರವು ಅಧರ್ಮ ಎಂದು ಶಿಷ್ಟಾಚಾರಿಗಳು ಹೇಳುತ್ತಾರೆ.
अक्रुध्यन्तोऽनसूयन्तो निरहंकारमत्सराः।
ऋजवः शमसंपन्नाः शिष्टाचारा भवन्ति ते॥03-198-073॥
ಸಿಟ್ಟಾಗದವರು, ಅಸೂಯೆ ಪಡದವರು, ನಿರಹಂಕಾರಿಗಳು, ಮತ್ಸರಕ್ಕೊಳಗಾಗದವರು, ವಿಧೇಯರಾಗಿರುವವರು ಮತ್ತು ಶಾಂತರಾಗಿರುವವರು ಶಿಷ್ಟಾಚಾರಿಗಳು.
त्रैविद्यवृद्धाः शुचयो वृत्तवन्तो मनस्विनः।
गुरुशुश्रूषवो दान्ताः शिष्टाचारा भवन्त्युत॥03-198-074॥
ಮೂರು ವೇದಗಳಲ್ಲಿ ವೃದ್ಧರಾಗಿರುವವರು, ಶುಚಿಗಳು, ವೃತ್ತಿವಂತರು, ಮನಸ್ವಿಗಳು, ಗುರುಶುಶ್ರೂಷೆ ಮಾಡುವವರು ಮತ್ತು ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಶಿಷ್ಟಾಚಾರಿಗಳು.
तेषामदीनसत्त्वानां दुष्कराचारकर्मणाम्।
स्वैः कर्मभिः सत्कृतानां घोरत्वं संप्रणश्यति॥03-198-075॥
ದೀನರಲ್ಲದವರು, ಸತ್ವವಿಲ್ಲದವರು, ದುಷ್ಕರ ಆಚಾರಕರ್ಮಿಗಳು, ಮತ್ತು ತಮ್ಮದೇ ಕರ್ಮಗಳಿಂದ ಸತ್ಕೃತರಾದವರಲ್ಲಿ ಘೋರತ್ವವು ನಾಶಗೊಳ್ಳುತ್ತದೆ.
तं सदाचारमाश्चर्यं पुराणं शाश्वतं ध्रुवम्।
धर्मं धर्मेण पश्यन्तः स्वर्गं यान्ति मनीषिणः॥03-198-076॥
ಈ ಸದಾಚಾರ ಧರ್ಮವನ್ನು ಆಶ್ಚರ್ಯ, ಪುರಾಣ, ಶಾಶ್ವತ, ಧ್ರುವವೆಂದು ಧರ್ಮದಿಂದ ನೋಡುವ ಮನೀಷಿಗಳು ಸ್ವರ್ಗಕ್ಕೆ ಹೋಗುತ್ತಾರೆ.
आस्तिका मानहीनाश्च द्विजातिजनपूजकाः।
श्रुतवृत्तोपसंपन्नाः ते सन्तः स्वर्गगामिनः॥03-198-077॥
ಆಸ್ತಿಕರು, ಜಂಬವಿಲ್ಲದವರು, ದ್ವಿಜಾತಿಯವರನ್ನು ಪೂಜಿಸುವವರು, ಮತ್ತು ಶ್ರುತಿಗಳಂತೆ ನಡೆದುಕೊಳ್ಳುವ ಸಂತರು ಸ್ವರ್ಗಗಾಮಿಗಳಾಗುತ್ತಾರೆ.
वेदोक्तः परमो धर्मो धर्मशास्त्रेषु चापरः।
शिष्टाचीर्णश्च शिष्टानां त्रिविधं धर्मलक्षणम्॥03-198-078॥
ವೇದಗಳಲ್ಲಿ ಹೇಳಿದುದು ಪರಮ ಧರ್ಮ. ಧರ್ಮಶಾಸ್ತ್ರಗಳಲ್ಲಿರುವವು ಇನ್ನೊಂದು ಧರ್ಮ. ಶಿಷ್ಟರ ಶಿಷ್ಟಾಚಾರಗಳು ಇನ್ನೊಂದು. ಹೀಗೆ ಮೂರು ವಿಧದ ಧರ್ಮ ಲಕ್ಷಣಗಳಿವೆ.
पारणं चापि विद्यानां तीर्थानामवगाहनम्।
क्षमा सत्यार्जवं शौचं शिष्टाचारनिदर्शनम्॥03-198-079॥
ವೇದಗಳ ಪಾರಾಯಣ, ತೀರ್ಥಗಳಲ್ಲಿ ಸ್ನಾನ, ಕ್ಷಮೆ, ಸತ್ಯ, ವಿಧೇಯತೆ ಮತ್ತು ಶುಚಿ ಇವು ಶಿಷ್ಟಾಚಾರಿಗಳ ನಿದರ್ಶನಗಳು.
सर्वभूतदयावन्तो अहिंसानिरताः सदा।
परुषं न प्रभाषन्ते सदा सन्तो द्विजप्रियाः॥03-198-080॥
ಸರ್ವಭೂತಗಳ ಮೇಲೂ ದಯಾವಂತನಾಗಿರುವ, ಸದಾ ಅಹಿಂಸ ನಿರತನಾಗಿರುವ, ದ್ವಿಜಪ್ರಿಯ ಪುರುಷನನ್ನು ಸದಾ ಸಂತನೆಂದು ಕರೆಯುತ್ತಾರೆ.
शुभानामशुभानां च कर्मणां फलसंचये।
विपाकमभिजानन्ति ते शिष्टाः शिष्टसंमताः॥03-198-081॥
ಶುಭಾಶುಭ ಕರ್ಮಗಳ ಫಲಸಂಚಯಗಳಿಂದ ಯಾವುದು ತಯಾರಾಗಿದೆ ಎಂದು ತಿಳಿದವರನ್ನು ಶಿಷ್ಟರು ಶಿಷ್ಟರೆಂದು ಒಪ್ಪಿಕೊಳ್ಳುತ್ತಾರೆ.
न्यायोपेता गुणोपेताः सर्वलोकहितैषिणः।
सन्तः स्वर्गजितः शुक्लाः संनिविष्टाश्च सत्पथे॥03-198-082॥
ನ್ಯಾಯೋಪೇತರಾದ, ಗುಣೋಪೇತರಾದ, ಸರ್ವಲೋಕ ಹಿತೈಷಿಗಳಾದ, ಪರಿಶುದ್ಧ ಸಂತರು ಸ್ವರ್ಗವನ್ನು ಗೆದ್ದು ಸತ್ಪಥದಲ್ಲಿಯೇ ಇರುತ್ತಾರೆ.
दातारः संविभक्तारो दीनानुग्रहकारिणः।
सर्वभूतदयावन्तस्ते शिष्टाः शिष्टसंमताः॥03-198-083॥
ಕೊಡುವವರು, ಹಂಚಿಕೊಳ್ಳುವವರು, ದೀನರಿಗೆ ಅನುಗ್ರಹವನ್ನು ಮಾಡುವವರು, ಸರ್ವಭೂತಗಳಿಗೂ ದಯೆಯನ್ನು ತೋರಿಸುವವರು ಶಿಷ್ಟರಿಂದ ಶಿಷ್ಟರಾಗಿ ಸ್ವೀಕೃತಗೊಳ್ಳುವರು.
सर्वपूज्याः श्रुतधनास्तथैव च तपस्विनः।
दाननित्याः सुखाँल्लोकानाप्नुवन्तीह च श्रियम्॥03-198-084॥
ಸರ್ವರಿಗೂ ಪೂಜ್ಯರಾಗಿ, ಶ್ರದ್ಧೆ ಮತ್ತು ತಪಸ್ಸುಗಳಿಂದ ಕೂಡಿಕೊಂಡು, ಸದಾ ದಾನವನ್ನು ನೀಡುವವರು ಸುಖ ಲೋಕಗಳನ್ನು ಮತ್ತು ಇಲ್ಲಿ ಸಂಪತ್ತನ್ನೂ ಹೊಂದುತ್ತಾರೆ.
पीडया च कलत्रस्य भृत्यानां च समाहिताः।
अतिशक्त्या प्रयच्छन्ति सन्तः सद्भिः समागताः॥03-198-085॥
ಸಂತರು ಸಂತರನ್ನು ಕೂಡಿದಾಗ ಪತ್ನಿ ಮತ್ತು ಅವಲಂಬಿಗಳಿಗೆ ಪೀಡೆಯೊದಗಿದರೂ ಶಕ್ತಿಗಿಂತ ಅತಿಯಾದುದನ್ನು ಕೊಡುತ್ತಾರೆ.
लोकयात्रां च पश्यन्तो धर्ममात्महितानि च।
एवं सन्तो वर्तमाना एधन्ते शाश्वतीः समाः॥03-198-086॥
ಸಂತರು ಹೀಗೆ ಲೋಕಯಾತ್ರೆ, ಧರ್ಮ ಮತ್ತು ಆತ್ಮಹಿತವನ್ನು ನೋಡಿಕೊಂಡು, ಬಹು ವರ್ಷಗಳು ವೃದ್ಧಿ ಹೊಂದುತ್ತಾರೆ.
अहिंसा सत्यवचनमानृशंस्यमथार्जवम्।
अद्रोहो नातिमानश्च ह्रीस्तितिक्षा दमः शमः॥03-198-087॥
धीमन्तो धृतिमन्तश्च भूतानामनुकम्पकाः।
अकामद्वेषसंयुक्तास्ते सन्तो लोकसत्कृताः॥03-198-088॥
ಅಹಿಂಸೆ, ಸತ್ಯವಚನ, ವೃದುತ್ವ, ವಿಧೇಯತೆಗಳಿರುವ, ಭಯದಿಂದ ದೂರವಿರುವ, ಜಂಬವಿಲ್ಲದಿರುವ, ಅದ್ರೋಹಿ, ವಿನಯ, ಧೀಮಂತ, ಧೃತಿವಂತ, ಭೂತಗಳ ಮೇಲೆ ಅನುಕಂಪವಿರುವ, ಕಾಮ ದ್ವೇಷರಹಿತರಾದ ಸಂತರು ಲೋಕದಲ್ಲಿ ಸತ್ಕೃತರಾಗಿರುತ್ತಾರೆ.
त्रीण्येव तु पदान्याहुः सतां वृत्तमनुत्तमम्।
न द्रुह्येच्चैव दद्याच्च सत्यं चैव सदा वदेत्॥03-198-089॥
ಈ ಮೂರು ಸಂತರ ಲಕ್ಷಣಗಳು ಮತ್ತು ಅನುತ್ತಮ ನಡತೆಯೆಂದು ಹೇಳುತ್ತಾರೆ: ದ್ರೋಹವೆಸಗದಿಲ್ಲದಿರುವುದು, ದಾನ ಮಾಡುವುದು, ಮತ್ತು ಸದಾ ಸತ್ಯವನ್ನೇ ಮಾತನಾಡುವುದು.
सर्वत्र च दयावन्तः सन्तः करुणवेदिनः।
गच्छन्तीह सुसंतुष्टा धर्म्यं पन्थानमुत्तमम्।
शिष्टाचारा महात्मानो येषां धर्मः सुनिश्चितः॥03-198-090॥
अनसूया क्षमा शान्तिः संतोषः प्रियवादिता।
कामक्रोधपरित्यागः शिष्टाचारनिषेवणम्॥03-198-091॥
ಎಲ್ಲರ ಮೇಲೂ ದಯಾವಂತರಾದ, ಕರುಣವೇದಿ ಸಂತರು ತುಂಬಾ ಸಂತುಷ್ಟರಾಗಿ, ಉತ್ತಮ ಧರ್ಮಮಾರ್ಗದಲ್ಲಿ ನಡೆಯುತ್ತಾರೆ. ಮಹಾತ್ಮ ಶಿಷ್ಟಾಚಾರಿಗಳು ಈ ಧರ್ಮವನ್ನು ಸುನಿಶ್ಚಿತ ಮಾಡಿಕೊಂಡು ಅಸೂಯೆ ಪಡೆಯುವುದಿಲ್ಲ. ಕಾಮಕ್ರೋಧವನ್ನು ಪರಿತ್ಯಜಿಸಿ, ಕ್ಷಮಾ, ಶಾಂತಿ, ಸಂತೋಷ, ಪ್ರಿಯವಾದಿ, ಶಿಷ್ಟಾಚಾರವನ್ನು ಪಾಲಿಸುತ್ತಾರೆ.
कर्मणा श्रुतसंपन्नं सतां मार्गमनुत्तमम्।
शिष्टाचारं निषेवन्ते नित्यं धर्मेष्वतन्द्रिताः॥03-198-092॥
ಧರ್ಮದಿಂದ ಆಯಾಸಗೊಳ್ಳದೇ ಇರುವವರು ಶಿಷ್ಟಾಚಾರಗಳಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೆ; ಮತ್ತು ಈ ಸಂತರ ಶ್ರುತಸಂಪನ್ನವಾದ ಅನುತ್ತಮ ಕರ್ಮ ಮಾರ್ಗವನ್ನು ಅನುಸರಿಸುತ್ತಾರೆ.
प्रज्ञाप्रासादमारुह्य मुह्यतो महतो जनान्।
प्रेक्षन्तो लोकवृत्तानि विविधानि द्विजोत्तम।
अतिपुण्यानि पापानि तानि द्विजवरोत्तम॥03-198-093॥
ದ್ವಿಜೋತ್ತಮ! ದ್ವಿಜವರೋತ್ತಮ! ಪ್ರಜ್ಞೆಯೆನ್ನುವ ಮಹಡಿಯನ್ನೇರಿ ಮಹಾ ಜನತೆಯು ಗೊಂದಲದಲ್ಲಿದ್ದುಕೊಂಡು ವಿವಿಧ ಲೋಕವೃತ್ತಿಗಳಲ್ಲಿ ತೊಡಗಿರುವುದನ್ನು, ಅತಿಯಾದ ಪುಣ್ಯಗಳನ್ನೂ ಪಾಪಗಳನ್ನೂ ನೋಡುತ್ತಿರುತ್ತಾರೆ.
एतत्ते सर्वमाख्यातं यथाप्रज्ञं यथाश्रुतम्।
शिष्टाचारगुणान्ब्रह्मन्पुरस्कृत्य द्विजर्षभ॥03-198-094॥
ಧ್ವಿಜರ್ಷಭ! ಬ್ರಹ್ಮನ್! ಇವೆಲ್ಲವೂ ಶಿಷ್ಟಾಚಾರರ ಮುಖ್ಯ ಗುಣಗಳೆಂದು ನನಗೆ ತಿಳಿದಷ್ಟನ್ನು, ಕೇಳಿದುದನ್ನು ಹೇಳಿದ್ದೇನೆ.””
मार्कण्डेय उवाच।
स तु विप्रमथोवाच धर्मव्याधो युधिष्ठिर।
यदहं ह्याचरे कर्म घोरमेतदसंशयम्॥03-199-001॥
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಆಗ ಧರ್ಮವ್ಯಾಧನು ವಿಪ್ರನಿಗೆ ಹೇಳಿದನು. “ನಾನು ಆಚರಿಸುತ್ತಿರುವ ಈ ಕರ್ಮವು ಘೋರವಾದುದು ಎನ್ನುವುದರಲ್ಲಿ ಸಂಶಯವೇ ಇಲ್ಲ.
विधिस्तु बलवान्ब्रह्मन्दुस्तरं हि पुराकृतम्।
पुराकृतस्य पापस्य कर्मदोषो भवत्ययम्।
दोषस्यैतस्य वै ब्रह्मन्विघाते यत्नवानहम्॥03-199-002॥
ಬ್ರಹ್ಮನ್! ಹಿಂದೆ ಮಾಡಿದ ಕರ್ಮಗಳ ವಿಧಿಯು ಬಲಶಾಲಿ ಮತ್ತು ದಾಟುವುದು ಕಷ್ಟ. ಇದು ನಾನು ಹಿಂದೆ ಮಾಡಿದ ಕರ್ಮದೋಷಗಳ ಫಲ. ಬ್ರಹ್ಮನ್! ಈ ದೋಷವನ್ನು ಕೊನೆಗೊಳಿಸಲು ನನಗಾದಷ್ಟು ಪ್ರಯತ್ನಿಸುತ್ತಿದ್ದೇನೆ.
विधिना विहिते पूर्वं निमित्तं घातको भवेत्।
निमित्तभूता हि वयं कर्मणोऽस्य द्विजोत्तम॥03-199-003॥
ದ್ವಿಜೋತ್ತಮ! ಹಿಂದೆಯೇ ವಿಧಿಯಿಂದ ವಿಹಿತವಾದುದಕ್ಕೆ ಘಾತಕನು ನಿಮಿತ್ತಮಾತ್ರವಾಗುತ್ತಾನೆ. ಆದುದರಿಂದ ನಾವು ಹಿಂದಿನ ಕರ್ಮಗಳ ನಿಮಿತ್ತಗಳಾಗಿರುತ್ತೇವೆ.
येषां हतानां मांसानि विक्रीणामो वयं द्विज।
तेषामपि भवेद्धर्म उपभोगेन भक्षणात्।
देवतातिथिभृत्यानां पितॄणां प्रतिपूजनात्॥03-199-004॥
ದ್ವಿಜ! ಯಾರಿಗೆ ನಾವು ಕೊಲ್ಲಲ್ಪಟ್ಟಿದುದರ ಮಾಂಸವನ್ನು ಮಾರುತ್ತೇವೋ ಅವರಿಗೂ ದೇವತೆ, ಅತಿಥಿ, ಸೇವಕರು ಮತ್ತು ಪಿತೃಗಳನ್ನು ಪೂಜಿಸಿದ ನಂತರ ಅದನ್ನು ತಿಂದು ಭೋಗಿಸುವ ಧರ್ಮವಿರುತ್ತದೆ.
ओषध्यो वीरुधश्चापि पशवो मृगपक्षिणः।
अन्नाद्यभूता लोकस्य इत्यपि श्रूयते श्रुतिः॥03-199-005॥
ಔಷಧಗಳು, ತೋಟದ ಹಸಿರುಗಳು, ಪಶುಗಳು, ಮೃಗಪಕ್ಷಿಗಳು ಲೋಕದ ಅನ್ನಗಳು ಎಂದು ಶ್ರುತಿಗಳು ತಿಳಿಸುತ್ತವೆ.
आत्ममांसप्रदानेन शिबिरौशीनरो नृपः।
स्वर्गं सुदुर्लभं प्राप्तः क्षमावान्द्विजसत्तम॥03-199-006॥
ದ್ವಿಜಸತ್ತಮ! ನೃಪ ಔಶೀನರ ಕ್ಷಮವಂತ ಶಿಬಿಯು ತನ್ನದೇ ಮಾಂಸವನ್ನು ನೀಡಿ ತುಂಬಾ ದುರ್ಲಭವಾದ ಸ್ವರ್ಗವನ್ನು ಪಡೆದನು.
राज्ञो महानसे पूर्वं रन्तिदेवस्य वै द्विज।
द्वे सहस्रे तु वध्येते पशूनामन्वहं तदा॥03-199-007॥
ದ್ವಿಜ! ಹಿಂದೆ ರಾಜ ರಂತಿದೇವನ ಅಡುಗೆಮನೆಯಲ್ಲಿ ದಿನವೂ ಎರಡು ಸಾವಿರ ಪಶುಗಳನ್ನು ವಧಿಸಲಾಗುತ್ತಿತ್ತು.
समांसं ददतो ह्यन्नं रन्तिदेवस्य नित्यशः।
अतुला कीर्तिरभवन्नृपस्य द्विजसत्तम।
चातुर्मास्येषु पशवो वध्यन्त इति नित्यशः॥03-199-008॥
ರಂತಿದೇವನು ದಿನವೂ ಮಾಂಸವನ್ನು ಕೂಡಿದ ಊಟವನ್ನು ಬಡಿಸುತ್ತಿದ್ದನು. ಆ ನೃಪನು ಅತುಲ ಕೀರ್ತಿಯನ್ನು ಹೊಂದಿದನು. ಚಾತುರ್ಮಾಸದಲ್ಲಿ ನಿತ್ಯವೂ ಪಶುಗಳ ವಧೆಯಾಗುತ್ತಿತ್ತು.
अग्नयो मांसकामाश्च इत्यपि श्रूयते श्रुतिः।
यज्ञेषु पशवो ब्रह्मन्वध्यन्ते सततं द्विजैः।
संस्कृताः किल मन्त्रैश्च तेऽपि स्वर्गमवाप्नुवन्॥03-199-009॥
ಅಗ್ನಿಗಳು ಮಾಂಸವನ್ನು ಬಯಸುತ್ತವೆ ಎಂದು ಶ್ರುತಿಗಳೂ ಹೇಳುತ್ತವೆ. ಬ್ರಹ್ಮನ್! ಯಜ್ಞಗಳಲ್ಲಿ ಸತತವೂ ದ್ವಿಜರು ಪಶುಗಳನ್ನು ವಧಿಸುತ್ತಾರೆ. ಮಂತ್ರಗಳಿಂದ ಸಂಸ್ಕೃತರಾಗಿ ಅವೂ ಸ್ವರ್ಗವನ್ನು ತಲುಪುತ್ತವೆ ಎನ್ನುವುದಿಲ್ಲವೇ?
यदि नैवाग्नयो ब्रह्मन्मांसकामाभवन्पुरा।
भक्ष्यं नैव भवेन्मांसं कस्यचिद्द्विजसत्तम॥03-199-010॥
ದ್ವಿಜಸತ್ತಮ! ಹಿಂದೆ ಅಗ್ನಿಗಳು ಮಾಂಸಕಾಮಿಗಳಾಗಿರದಿದ್ದರೆ ಈಗ ಯಾರೂ ಮಾಂಸವನ್ನು ತಿನ್ನುತ್ತಿರಲಿಲ್ಲ.
अत्रापि विधिरुक्तश्च मुनिभिर्मांसभक्षणे।
देवतानां पितॄणां च भुङ्क्ते दत्त्वा तु यः सदा।
यथाविधि यथाश्रद्धं न स दुष्यति भक्षणात्॥03-199-011॥
ಈಗಲೂ ಕೂಡ ಮುನಿಗಳು ಮಾಂಸಭಕ್ಷಣದ ವಿಷಯದಲ್ಲಿ ನಿಶ್ಚಯವನ್ನು ಹೇಳುತ್ತಾರೆ: ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದಿದುದರ ಪಾಪವನ್ನು ಪಡೆಯುವುದಿಲ್ಲ.
अमांसाशी भवत्येवमित्यपि श्रूयते श्रुतिः।
भार्यां गच्छन्ब्रह्मचारी ऋतौ भवति ब्राह्मणः॥03-199-012॥
ಹೇಗೆ ಋತುಮತಿಯಾಗಿದ್ದಾಗ ಪತ್ನಿಯನ್ನು ಕೂಡುವ ಬ್ರಾಹ್ಮಣನು ಬ್ರಹ್ಮಚಾರಿಯಾಗಿಯೇ ಇರುತ್ತಾನೋ ಹಾಗೆ ಇದರಿಂದ ಮಾಂಸಾಹಾರಿಯಾಗುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ.
सत्यानृते विनिश्चित्य अत्रापि विधिरुच्यते।
सौदासेन पुरा राज्ञा मानुषा भक्षिता द्विज।
शापाभिभूतेन भृशमत्र किं प्रतिभाति ते॥03-199-013॥
ಈಗಲೂ ಕೂಡ ಸತ್ಯ ಮತ್ತು ಸುಳ್ಳುಗಳನ್ನು ನಿಶ್ಚಯಿಸುವ ವಿಧಿಗಳನ್ನು ಹೇಳುತ್ತಾರೆ. ದ್ವಿಜ! ಹಿಂದೆ ಶಾಪದ ಮಹಾ ಪ್ರಭಾವಕ್ಕೆ ಸಿಲುಕಿದ ರಾಜ ಸೌದಾಸನು ನರಮಾಂಸವನ್ನು ಭಕ್ಷಿಸಿದನು[1]. ಇದರ ಕುರಿತು ನಿನಗೆ ಏನನ್ನಿಸುತ್ತದೆ?
स्वधर्म इति कृत्वा तु न त्यजामि द्विजोत्तम।
पुराकृतमिति ज्ञात्वा जीवाम्येतेन कर्मणा॥03-199-014॥
ದ್ವಿಜೋತ್ತಮ! ಇದು ನನ್ನ ಧರ್ಮವೆಂದು ಮಾಡುತ್ತೇನೆ. ಇದನ್ನು ಬಿಡುವುದಿಲ್ಲ. ಇದು ಹಿಂದೆ ಮಾಡಿದುದರಿಂದ ಎಂದು ತಿಳಿದು ಇದೇ ಕರ್ಮದಿಂದ ಜೀವಿಸುತ್ತೇನೆ.
स्वकर्म त्यजतो ब्रह्मन्नधर्म इह दृश्यते।
स्वकर्मनिरतो यस्तु स धर्म इति निश्चयः॥03-199-015॥
ಬ್ರಹ್ಮನ್! ಇಲ್ಲಿ ತನ್ನ ಕರ್ಮವನ್ನು ಬಿಡುವುದು ಅಧರ್ಮವೆಂದು ಕಾಣುತ್ತದೆ. ತನ್ನ ಕರ್ಮದಲ್ಲಿ ಯಾರು ನಿರತನಾಗಿರುತ್ತಾನೋ ಅದೇ ಧರ್ಮವೆಂದು ನಿಶ್ಚಿತಗೊಂಡಿದೆ.
पूर्वं हि विहितं कर्म देहिनं न विमुञ्चति।
धात्रा विधिरयं दृष्टो बहुधा कर्मनिर्णये॥03-199-016॥
ಏಕೆಂದರೆ, ಹಿಂದೆಯೇ ವಿಹಿತವಾಗಿರುವ ಕರ್ಮವು ದೇಹಿಯನ್ನು ಬಿಡುವುದಿಲ್ಲ. ಕರ್ಮವನ್ನು ನಿರ್ಣಯಿಸುವಾಗ ಧಾತ್ರುವು ಈ ವಿಧಿಯನ್ನು ಬಹುರೀತಿಗಳಲ್ಲಿ ನೋಡಿದನು.
द्रष्टव्यं तु भवेत्प्राज्ञ क्रूरे कर्मणि वर्तता।
कथं कर्म शुभं कुर्यां कथं मुच्ये पराभवात्।
कर्मणस्तस्य घोरस्य बहुधा निर्णयो भवेत्॥03-199-017॥
ಬ್ರಾಹ್ಮಣ! ಕ್ರೂರಕರ್ಮಗಳಲ್ಲಿ ತೊಡಗಿರುವವನು ಹೇಗೆ ಆ ಕರ್ಮವನ್ನು ಶುಭವನ್ನಾಗಿ ಮಾಡಬೇಕು ಮತ್ತು ಹೇಗೆ ಪರಾಭವದಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ನೋಡಬೇಕಾಗುತ್ತದೆ. ಈ ಘೋರ ಕರ್ಮಗಳ ಕುರಿತು ಬಹುರೀತಿಯ ನಿರ್ಣಯಗಳಾಗುತ್ತವೆ.
दाने च सत्यवाक्ये च गुरुशुश्रूषणे तथा।
द्विजातिपूजने चाहं धर्मे च निरतः सदा।
अतिवादातिमानाभ्यां निवृत्तोऽस्मि द्विजोत्तम॥03-199-018॥
ದ್ವಿಜೋತ್ತಮ! ನಾನು ಸದಾ ದಾನ, ಸತ್ಯವಾಕ್ಯ, ಗುರುಶುಶ್ರೂಷೆ, ದ್ವಿಜರ ಪೂಜೆ ಮತ್ತು ಧರ್ಮದಲ್ಲಿ ನಿರತನಾಗಿದ್ದೇನೆ. ನಾನು ಅತಿಯಾಗಿ ಮಾತನಾಡುವುದರಿಂದ ಮತ್ತು ಅತಿಯಾಗಿ ಜಂಬಕೊಚ್ಚಿಕೊಳ್ಳುವುದರಿಂದ ದೂರವಿರುತ್ತೇನೆ.
कृषिं साध्विति मन्यन्ते तत्र हिंसा परा स्मृता।
कर्षन्तो लाङ्गलैः पुंसो घ्नन्ति भूमिशयान्बहून्।
जीवानन्यांश्च बहुशस्तत्र किं प्रतिभाति ते॥03-199-019॥
ಕೃಷಿಯು ಒಳ್ಳೆಯದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲಿಯೂ ಬಹಳಷ್ಟು ಹಿಂಸೆಗಳಾಗುತ್ತದೆ ಎಂದು ತಿಳಿದಿದೆ. ನೇಗಿಲನ್ನು ಎಳೆದು ಹೂಳುವ ನರರು ಭೂಮಿಯೊಳಗೆ ಜೀವಿಸುವ ಬಹಳ ಜೀವಿಗಳನ್ನು ಮತ್ತು ಇತರ ಅನೇಕಗಳನ್ನು ಕೊಲ್ಲುತ್ತಾರೆ. ನಿನಗೇನನ್ನಿಸುತ್ತದೆ?
धान्यबीजानि यान्याहुर्व्रीह्यादीनि द्विजोत्तम।
सर्वाण्येतानि जीवानि तत्र किं प्रतिभाति ते॥03-199-020॥
ದ್ವಿಜೋತ್ತಮ! ಧಾನ್ಯಬೀಜಗಳೆಂದು ಕರೆಯಲ್ಪಡುವ ಭತ್ತ ಮೊದಲಾದವುಗಳೆಲ್ಲವೂ ಜೀವಿಗಳೇ. ನಿನಗೇನನ್ನಿಸುತ್ತದೆ?
अध्याक्रम्य पशूंश्चापि घ्नन्ति वै भक्षयन्ति च।
वृक्षानथौषधीश्चैव छिन्दन्ति पुरुषा द्विज॥03-199-021॥
ದ್ವಿಜ! ಪುರುಷನು ಪಶುಗಳನ್ನು ಅತಿಕ್ರಮಿಸಿ ಕೊಂದು ತಿನ್ನುತ್ತಾನೆ. ಮರ ಔಷಧಗಳನ್ನೂ ಕಡಿಯುತ್ತಾನೆ.
जीवा हि बहवो ब्रह्मन्वृक्षेषु च फलेषु च।
उदके बहवश्चापि तत्र किं प्रतिभाति ते॥03-199-022॥
ಬ್ರಹ್ಮನ್! ಮರಗಳಲ್ಲಿ ಮತ್ತು ಫಲಗಳಲ್ಲಿಯೂ ಬಹಳಷ್ಟು ಜೀವಿಗಳಿರುತ್ತವೆ. ನೀರಿನಲ್ಲಿಯೂ ಕೂಡ ಅನೇಕವಿವೆ. ಇದರ ಕುರಿತು ನಿನಗೇನನ್ನಿಸುತ್ತದೆ?
सर्वं व्याप्तमिदं ब्रह्मन्प्राणिभिः प्राणिजीवनैः।
मत्स्या ग्रसन्ते मत्स्यांश्च तत्र किं प्रतिभाति ते॥03-199-023॥
ಬ್ರಹ್ಮನ್! ಎಲ್ಲವೂ ಪ್ರಾಣವಿರುವವುಗಳಿಂದ ಪ್ರಾಣಿಜೀವಿಗಳಿಂದ ತುಂಬಿದೆ. ಮೀನುಗಳು ಮೀನುಗಳನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
सत्त्वैः सत्त्वानि जीवन्ति बहुधा द्विजसत्तम।
प्राणिनोऽन्योन्यभक्षाश्च तत्र किं प्रतिभाति ते॥03-199-024॥
ದ್ವಿಜಸತ್ತಮ! ಸತ್ವವುಳ್ಳವುಗಳು ಬಹಳಷ್ಟು ಸತ್ವವುಳ್ಳವುಗಳನ್ನು ಆಧರಿಸಿ ಜೀವಿಸುತ್ತವೆ. ಪ್ರಾಣಿಗಳು ಅನ್ಯೋನ್ಯರನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
चङ्क्रम्यमाणा जीवांश्च धरणीसंश्रितान्बहून्।
पद्भ्यां घ्नन्ति नरा विप्र तत्र किं प्रतिभाति ते॥03-199-025॥
ವಿಪ್ರ! ಕೇವಲ ನೆಲದ ಮೇಲೆ ನಡೆಯುವುದರಿಂದ ನರರು ನೆಲಕ್ಕೆ ಅಂಟಿಕೊಂಡಿರುವ ಅನೇಕ ಜೀವಿಗಳನ್ನು ಕಾಲಿನಿಂದ ತುಳಿಯುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?
उपविष्टाः शयानाश्च घ्नन्ति जीवाननेकशः।
ज्ञानविज्ञानवन्तश्च तत्र किं प्रतिभाति ते॥03-199-026॥
ಕುಳಿತಿರುವ, ಮಲಗಿರುವ, ಜ್ಞಾನ-ವಿವೇಕಗಳಿರುವ ಅನೇಕಾನೇಕ ಜೀವಿಗಳು ನಾಶಹೊಂದುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
जीवैर्ग्रस्तमिदं सर्वमाकाशं पृथिवी तथा।
अविज्ञानाच्च हिंसन्ति तत्र किं प्रतिभाति ते॥03-199-027॥
ತಿಳಿಯದೇ ಅವರು ಈ ಆಕಾಶ ಮತ್ತು ಭೂಮಿಯಲ್ಲಿ ತುಂಬಿರುವ ಎಲ್ಲ ಜೀವಗಳನ್ನು ಹಿಂಸಿಸುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?
अहिंसेति यदुक्तं हि पुरुषैर्विस्मितैः पुरा।
के न हिंसन्ति जीवान्वै लोकेऽस्मिन्द्विजसत्तम।
बहु संचिन्त्य इह वै नास्ति कश्चिदहिंसकः॥03-199-028॥
ದ್ವಿಜಸತ್ತಮ! ಹಿಂದೆ ಪುರುಷರು ವಿಸ್ಮಿತರಾಗಿ ಅಹಿಂಸೆ ಎಂದು ಹೇಳಿದ್ದರು. ಆದರೆ ಈ ಲೋಕದಲ್ಲಿ ಯಾರುತಾನೇ ಜೀವವಿರುವ ಯಾವುದನ್ನೂ ಹಿಂಸಿಸದೇ ಇದ್ದಾನೆ? ಬಹಳಷ್ಟು ಚಿಂತಿಸಿದರೂ ಇಲ್ಲಿ ಅಹಿಂಸಕನು ಯಾರೂ ಇಲ್ಲ.
अहिंसायां तु निरता यतयो द्विजसत्तम।
कुर्वन्त्येव हि हिंसां ते यत्नादल्पतरा भवेत्॥03-199-029॥
ದ್ವಿಜಸತ್ತಮ! ಅಹಿಂಸೆಯಲ್ಲಿ ನಿರತರಾದ ಯತಿಗಳೂ ಕೂಡ ಹಿಂಸೆಯನ್ನೆಸಗುತ್ತಾರೆ. ಆದರೆ ಅವರ ಪ್ರಯತ್ನದಿಂದ ಅವು ಕಡಿಮೆಯಾಗುತ್ತವೆ.
आलक्ष्याश्चैव पुरुषाः कुले जाता महागुणाः।
महाघोराणि कर्माणि कृत्वा लज्जन्ति वै न च॥03-199-030॥
ನಾವು ನೋಡುವಂತೆಯೇ ಮಹಾಗುಣಗಳ, ಉತ್ತಮ ಕುಲದಲ್ಲಿ ಜನಿಸಿದವರು ಮಹಾ ಘೋರ ಕರ್ಮಗಳನ್ನು ಮಾಡಿಯೂ ಅದರಿಂದ ನಾಚಿಕೆಪಟ್ಟುಕೊಂಡಿಲ್ಲ.
सुहृदः सुहृदोऽन्यांश्च दुर्हृदश्चापि दुर्हृदः।
सम्यक्प्रवृत्तान्पुरुषान्न सम्यगनुपश्यतः॥03-199-031॥
ಸ್ನೇಹಿತರು ಸ್ನೇಹಿತರನ್ನು, ವೈರಿಗಳು ವೈರಿಗಳನ್ನು, ಒಳ್ಳೆಯ ನಡತೆಯುಳ್ಳವರು ಒಳ್ಳೆಯ ನಡತೆಯಲ್ಲಿರುವವರನ್ನು ಸ್ವಾಗತಿಸುವುದಿಲ್ಲ.
समृद्धैश्च न नन्दन्ति बान्धवा बान्धवैरपि।
गुरूंश्चैव विनिन्दन्ति मूढाः पण्डितमानिनः॥03-199-032॥
ಬಾಂಧವರು ಶ್ರೀಮಂತ ಬಾಂಧವರನ್ನು ನೋಡಿ ಸಂತೋಷ ಪಡುವುದಿಲ್ಲ. ಪಂಡಿತರೆಂದು ತಿಳಿದುಕೊಂಡ ಮೂಢರು ಗುರುಗಳನ್ನೂ ನಿಂದಿಸುತ್ತಾರೆ.
बहु लोके विपर्यस्तं दृश्यते द्विजसत्तम।
धर्मयुक्तमधर्मं च तत्र किं प्रतिभाति ते॥03-199-033॥
ಲೋಕದಲ್ಲಿ ಧರ್ಮ ಮತ್ತು ಅಧರ್ಮಯುಕ್ತವಾದ ಬಹಳಷ್ಟು ವಿಪರ್ಯಾಸಗಳು ಕಾಣುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
वक्तुं बहुविधं शक्यं धर्माधर्मेषु कर्मसु।
स्वकर्मनिरतो यो हि स यशः प्राप्नुयान्महत्॥03-199-034॥
ಧರ್ಮ ಮತ್ತು ಅಧರ್ಮ ಕರ್ಮಗಳ ಕುರಿತು ಬಹಳಷ್ಟನ್ನು ಹೇಳಬಹುದು. ಆದರೆ ಸ್ವಕರ್ಮದಲ್ಲಿ ನಿರತನಾದವನು ಮಹಾ ಯಶಸ್ಸನ್ನು ಪಡೆಯುತ್ತಾನೆ.””
मार्कण्डेय उवाच।
धर्मव्याधस्तु निपुणं पुनरेव युधिष्ठिर।
विप्रर्षभमुवाचेदं सर्वधर्मभृतां वरः॥03-200-001॥
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಸರ್ವಧರ್ಮಗಳನ್ನು ಎತ್ತಿಹಿಡಿಯುವವರಲ್ಲಿ ಶ್ರೇಷ್ಠ ನಿಪುಣ ಧರ್ಮವ್ಯಾಧನು ಪುನಃ ವಿಪ್ರರ್ಷನನ್ನುದ್ದೇಶಿಸಿ ಇದನ್ನು ಹೇಳಿದನು.
श्रुतिप्रमाणो धर्मो हि वृद्धानामिति भाषितम्।
सूक्ष्मा गतिर्हि धर्मस्य बहुशाखा ह्यनन्तिका॥03-200-002॥
“ಶೃತಿಪ್ರಮಾಣವಾದುದೇ ಧರ್ಮವೆಂದು ವೃದ್ಧರು ಹೇಳುತ್ತಾರೆ. ಏಕೆಂದರೆ ಧರ್ಮದ ಗತಿಯು ಸೂಕ್ಷ್ಮವಾದುದು. ಅದಕ್ಕೆ ಹಲವಾರು ಕವಲುಗಳಿವೆ ಮತ್ತು ಕೊನೆಯೇ ಇಲ್ಲ.
प्राणात्यये विवाहे च वक्तव्यमनृतं भवेत्।
अनृतं च भवेत्सत्यं सत्यं चैवानृतं भवेत्॥03-200-003॥
ಮರಣಕಾಲದಲ್ಲಿ ಮತ್ತು ವಿವಾಹದಲ್ಲಿ ಸುಳ್ಳನ್ನು ಹೇಳಬಹುದು. ಆಗ ಸುಳ್ಳು ಸತ್ಯವಾಗಬಹುದು ಮತ್ತು ಸತ್ಯವು ಸುಳ್ಳಾಗಬಹುದು.
यद्भूतहितमत्यन्तं तत्सत्यमिति धारणा।
विपर्ययकृतोऽधर्मः पश्य धर्मस्य सूक्ष्मताम्॥03-200-004॥
ಇರುವವುಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದೂ, ಇದಕ್ಕೆ ವಿಪರ್ಯಾಸವಾದುದನ್ನು ಅಧರ್ಮವೆಂದೂ ಅಭಿಪ್ರಾಯಪಡುತ್ತಾರೆ. ಧರ್ಮದ ಸೂಕ್ಷ್ಮತೆಯನ್ನು ನೋಡು!
यत्करोत्यशुभं कर्म शुभं वा द्विजसत्तम।
अवश्यं तत्समाप्नोति पुरुषो नात्र संशयः॥03-200-005॥
ದ್ವಿಜಸತ್ತಮ! ಶುಭ ಅಥವಾ ಅಶುಭ ಯಾವುದೇ ಕರ್ಮವನ್ನು ಮಾಡಲಿ, ಅವಶ್ಯವಾಗಿ ಪುರುಷನು ಅದರ ಫಲವನ್ನು ಅನುಭವಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ.
विषमां च दशां प्राप्य देवान्गर्हति वै भृशम्।
आत्मनः कर्मदोषाणि न विजानात्यपण्डितः॥03-200-006॥
ಪಂಡಿತನಲ್ಲದವನು ವಿಷಮ ದಶೆಗಳನ್ನು ಹೊಂದಿ ದೇವತೆಗಳನ್ನು ಚೆನ್ನಾಗಿ ಬೈಯುತ್ತಾನೆ. ತನ್ನ ಕರ್ಮಗಳಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.
मूढो नैकृतिकश्चापि चपलश्च द्विजोत्तम।
सुखदुःखविपर्यासो यदा समुपपद्यते।
नैनं प्रज्ञा सुनीतं वा त्रायते नैव पौरुषम्॥03-200-007॥
ದ್ವಿಜೋತ್ತಮ! ಮೂಡನು, ಮೋಸಗಾರನು ಮತ್ತು ಚಪಲನು ಸುಖದುಃಖಗಳಲ್ಲಿ ವಿಪರ್ಯಾಸಗಳನ್ನು ಅನುಭವಿಸಿದಾಗ ಉತ್ತಮ ದಾರಿಗೆ ಕರೆದೊಯ್ಯುವ ಪ್ರಜ್ಞೆಯನ್ನಾಗಲೀ ತಮ್ಮನ್ನು ದಾಟಿಸಿಕೊಳ್ಳಲು ಪೌರುಷವನ್ನಾಗಲೀ ಹೊಂದಿರುವುದಿಲ್ಲ.
यो यमिच्छेद्यथा कामं तं तं कामं समश्नुयात्।
यदि स्यादपराधीनं पुरुषस्य क्रियाफलम्॥03-200-008॥
ಪುರುಷನ ಕ್ರಿಯಾಫಲವು ಬೇರೆಯಾವುದರ ಅದೀನದಲ್ಲಿಲ್ಲವಾದರೆ, ಅವನು ಯಾವ ಯಾವ ಕಾಮವನ್ನು ಬಯಸುತ್ತಾನೋ ಆ ಆ ಕಾಮವನ್ನು ಪಡೆಯುತ್ತಾನೆ.
संयताश्चापि दक्षाश्च मतिमन्तश्च मानवाः।
दृश्यन्ते निष्फलाः सन्तः प्रहीणाः सर्वकर्मभिः॥03-200-009॥
भूतानामपरः कश्चिद्धिंसायां सततोत्थितः।
वञ्चनायां च लोकस्य स सुखेनेह जीवति॥03-200-010॥
ಸಮ್ಯತ, ದಕ್ಷ, ಮತ್ತು ಮತಿಮಂತ ಮಾನವರು ನಿಷ್ಫಲರಾಗಿ ಸರ್ವ ಕರ್ಮಗಳನ್ನು ಕಳೆದುಕೊಂಡಿದುದನ್ನು ಮತ್ತು ಇರುವವುಗಳನ್ನು ಸದಾ ಹಿಂಸಿಸುವವರು ಲೋಕಕ್ಕೆ ಮೋಸಮಾಡಿಕೊಂಡು ಸುಖವಾಗಿ ಜೀವಿಸುತ್ತಾರೆ ಎನ್ನುವುದನ್ನೂ ಇನ್ನೂ ನೋಡಬೇಕಷ್ಟೆ.
अचेष्टमानमासीनं श्रीः कंचिदुपतिष्ठति।
कश्चित्कर्माणि कुर्वन्हि न प्राप्यमधिगच्छति॥03-200-011॥
ಏನನ್ನೂ ಮಾಡದೇ ಕುಳಿತುಕೊಂಡಿರುವವನಿಗೆ ಅದೃಷ್ಟವು ಒಲಿಯಬಹುದು. ಕೆಲವೊಮ್ಮೆ ಕರ್ಮಗಳನ್ನು ಮಾಡುವವನು ತನ್ನ ಗುರಿಯನ್ನು ತಲುಪದೇ ಇರಬಹುದು.
देवानिष्ट्वा तपस्तप्त्वा कृपणैः पुत्रगृद्धिभिः।
दशमासधृता गर्भे जायन्ते कुलपांसनाः॥03-200-012॥
ಪುತ್ರನನ್ನು ಬಯಸಿ ಕೃಪಣರಾದವರು ದೇವನಿಷ್ಟರಾಗಿ ತಪಸ್ಸನ್ನು ತಪಿಸಿ ಹತ್ತು ತಿಂಗಳು ಗರ್ಭವನ್ನು ಧರಿಸಿ ಕುಲಪಾಂಸಕರಿಗೆ ಜನ್ಮ ನೀಡಬಹುದು.
अपरे धनधान्यैश्च भोगैश्च पितृसंचितैः।
विपुलैरभिजायन्ते लब्धास्तैरेव मङ्गलैः॥03-200-013॥
ಇದೇ ಮಂಗಲ ವಿಧಗಳಿಂದ ಪಡೆದರೂ ಹುಟ್ಟಿದವರು ತಂದೆತಾಯಿಗಳು ಕೂಡಿಟ್ಟ ಧನ-ಧಾನ್ಯ-ಭೋಗಗಳನ್ನು ಪಡೆಯುವ ಆಸೆಯುಳ್ಳವರಾಗಿರಬಹುದು.
कर्मजा हि मनुष्याणां रोगा नास्त्यत्र संशयः।
आधिभिश्चैव बाध्यन्ते व्याधैः क्षुद्रमृगा इव॥03-200-014॥
ಮನುಷ್ಯರ ರೋಗಗಳು ಕರ್ಮದಿಂದಲೇ ಹುಟ್ಟುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬೇಟೆಯಲ್ಲಿ ಕ್ಷುದ್ರಮೃಗಗಳಂತೆ ಅವರು ವ್ಯಾಧಿಗಳ ಬಾಧೆಗೊಳಗಾಗುತ್ತಾರೆ.
ते चापि कुशलैर्वैद्यैर्निपुणैः संभृतौषधैः।
व्याधयो विनिवार्यन्ते मृगा व्याधैरिव द्विज॥03-200-015॥
ದ್ವಿಜ! ಕುಶಲ ನಿಪುಣ ವೈದ್ಯರು ಔಷಧಿಗಳನ್ನು ಸಂಗ್ರಹಿಸಿಕೊಂಡು ವ್ಯಾಧನು ಮೃಗಗಳನ್ನು ಬೆನ್ನಟ್ಟಿ ಹೋಗುವಂತೆ ವ್ಯಾಧಿಗಳ ಹಿಂದೆ ಹೋಗುತ್ತಾರೆ.
येषामस्ति च भोक्तव्यं ग्रहणीदोषपीडिताः।
न शक्नुवन्ति ते भोक्तुं पश्य धर्मभृतां वर॥03-200-016॥
ಧರ್ಮಭೃತರಲ್ಲಿ ಶ್ರೇಷ್ಠನೇ! ಭೋಗಿಸಲು ಎಷ್ಟೇ ಇದ್ದರೂ ಅಜೀರ್ಣದಿಂದ ಪೀಡಿತರಾದವರು ಅದನ್ನು ಭೋಗಿಸಲು ಅಶಕ್ತರಾಗಿರುತ್ತಾರೆ. ನೋಡು!
अपरे बाहुबलिनः क्लिश्यन्ते बहवो जनाः।
दुःखेन चाधिगच्छन्ति भोजनं द्विजसत्तम॥03-200-017॥
ದ್ವಿಜಸತ್ತಮ! ಬಾಹುಬಲವುಳ್ಳ ಇತರ ಬಹುಜನರು ದುಃಖದಿಂದ ಭೋಜನವನ್ನು ಕಂಡುಕೊಳ್ಳಲಾರರು.
इति लोकमनाक्रन्दं मोहशोकपरिप्लुतम्।
स्रोतसासकृदाक्षिप्तं ह्रियमाणं बलीयसा॥03-200-018॥
ಹೀಗೆ ಲೋಕವು ಆಕ್ರಂದದಿಂದ, ಮೋಹಶೋಕಗಳಿಂದ ತುಂಬಿ, ಯಾವಾಗಲೂ ಬಲಶಾಲಿ ಪ್ರವಾಹದಿಂದ ಕೊಚ್ಚಿಕೊಂಡು ಹೋಗುತ್ತದೆ.
न म्रियेयुर्न जीर्येयुः सर्वे स्युः सार्वकामिकाः।
नाप्रियं प्रतिपश्येयुर्वशित्वं यदि वै भवेत्॥03-200-019॥
ತಮ್ಮ ವಿಧಿಯ ಒಡೆಯರಾಗಿದ್ದರೆ ಯಾರೂ ಸಾಯುತ್ತಿರಲಿಲ್ಲ, ಯಾರೂ ವೃದ್ಧರಾಗುತ್ತಿರಲಿಲ್ಲ, ಎಲ್ಲರಿಗೂ ಬಯಸಿದುದೆಲ್ಲವೂ ದೊರೆಯುತ್ತಿದ್ದವು, ಯಾರೂ ಅಪ್ರಿಯವಾದುದನ್ನು ನೋಡುತ್ತಿರಲಿಲ್ಲ.
उपर्युपरि लोकस्य सर्वो गन्तुं समीहते।
यतते च यथाशक्ति न च तद्वर्तते तथा॥03-200-020॥
ಲೋಕದಲ್ಲಿ ಎಲ್ಲರೂ ಇತರರಿಗಿಂತ ಮೇಲೆ ಹೋಗಲು ಬಯಸುತ್ತಾರೆ, ಯಥಾಶಕ್ತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಅದು ಹಾಗಾಗುವುದಿಲ್ಲ.
बहवः संप्रदृश्यन्ते तुल्यनक्षत्रमङ्गलाः।
महच्च फलवैषम्यं दृश्यते कर्मसंधिषु॥03-200-021॥
ಬಹುಮಂದಿ ಒಂದೇ ನಕ್ಷತ್ರ ಮಂಗಲ ಕಾಲಗಳಲ್ಲಿ ಹುಟ್ಟಿದ್ದರೂ ಅವರ ಕರ್ಮಸಂಧಿಗಳಲ್ಲಿ ಪಡೆಯುವ ಫಲಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನೋಡುತ್ತೇವೆ.
न कश्चिदीशते ब्रह्मन्स्वयंग्राहस्य सत्तम।
कर्मणां प्राकृतानां वै इह सिद्धिः प्रदृश्यते॥03-200-022॥
ಬ್ರಾಹ್ಮಣಸತ್ತಮ! ಸ್ವಯಂ ಯಾರೂ ತಮ್ಮ ವಿಧಿಯ ಈಶರಲ್ಲ. ಪ್ರಾಕೃತವಾಗಿ ಕರ್ಮಗಳು ಸಿದ್ಧಿಯಾಗುವುದನ್ನೇ ನಾವು ಇಲ್ಲಿ ಕಾಣುತ್ತೇವೆ.
यथा श्रुतिरियं ब्रह्मञ्जीवः किल सनातनः।
शरीरमध्रुवं लोके सर्वेषां प्राणिनामिह॥03-200-023॥
ಬ್ರಾಹ್ಮಣ! ಇದು ಶ್ರುತಿಗಳು ಹೇಳಿದಂತೆ: ಜೀವವು ಸನಾತನವಾದುದು. ಈ ಲೋಕದ ಎಲ್ಲ ಪ್ರಾಣಿಗಳ ಶರೀರಗಳೂ ನಿರ್ದಿಷ್ಟವಾದವುಗಳಲ್ಲ.
वध्यमाने शरीरे तु देहनाशो भवत्युत।
जीवः संक्रमतेऽन्यत्र कर्मबन्धनिबन्धनः॥03-200-024॥
ಶರೀರವನ್ನು ಕೊಲ್ಲುವಾಗ ದೇಹನಾಶವಾಗುತ್ತದೆ. ಜೀವವು ಕರ್ಮಬಂಧಗಳ ಪ್ರಕಾರ ಬೇರೆ ಕಡೆ ವರ್ಗಾಯಿಸಲ್ಪಡುತ್ತದೆ.”
ब्राह्मण उवाच।
कथं धर्मभृतां श्रेष्ठ जीवो भवति शाश्वतः।
एतदिच्छाम्यहं ज्ञातुं तत्त्वेन वदतां वर॥03-200-025॥
ಬ್ರಾಹ್ಮಣನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠನೇ! ಮಾತನಾಡುವವರಲ್ಲಿ ಶ್ರೇಷ್ಠನೇ! ಜೀವವು ಹೇಗೆ ಶಾಶ್ವತವಾದುದು? ಇದನ್ನು ಇದ್ದಹಾಗೆ ಕೇಳಲು ಬಯಸುತ್ತೇನೆ.”
व्याध उवाच।
न जीवनाशोऽस्ति हि देहभेदे; मिथ्यैतदाहुर्म्रियतेति मूढाः।
जीवस्तु देहान्तरितः प्रयाति; दशार्धतैवास्य शरीरभेदः॥03-200-026॥
ವ್ಯಾಧನು ಹೇಳಿದನು: “ದೇಹಭೇದವಾದಾಗ ಜೀವವು ಸಾಯುವುದಿಲ್ಲ. ಆದರೆ ಮೂಡರು ಅದು ಕಳೆದುಹೋಗುತ್ತದೆ ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ದೇಹದೊಳಗಿರುವ ಜೀವವು ಮುಂದುವರೆದು ಹೋಗುತ್ತದೆ. ಬೇರೆಯಾದ ಶರೀರವು ಪಂಚಭೂತಗಳನ್ನು ಸೇರುತ್ತದೆ.
अन्यो हि नाश्नाति कृतं हि कर्म; स एव कर्ता सुखदुःखभागी।
यत्तेन किंचिद्धि कृतं हि कर्म; तदश्नुते नास्ति कृतस्य नाशः॥03-200-027॥
ಮಾಡಿದ ಕರ್ಮಗಳನ್ನು ಬೇರೆ ಯಾರೂ ಪಡೆಯುವುದಿಲ್ಲ. ಕರ್ತನು ಮಾತ್ರ ಅವುಗಳಿಂದುಂಟಾಗುವ ಸುಖ ದುಃಖಗಳ ಭಾಗಿಯಾಗುತ್ತಾನೆ. ಏನೇ ಕರ್ಮಗಳನ್ನು ಮಾಡಿದ್ದರೂ ಅವನೇ ಅದನ್ನು ಪಡೆಯುತ್ತಾನೆ. ಕೃತನ ನಾಶವಾಗುವುದಿಲ್ಲ.
अपुण्यशीलाश्च भवन्ति पुण्या; नरोत्तमाः पापकृतो भवन्ति।
नरोऽनुयातस्त्विह कर्मभिः स्वै;स्ततः समुत्पद्यति भावितस्तैः॥03-200-028॥
ಅಪುಣ್ಯಶೀಲರು ಪುಣ್ಯಶೀಲರಾಗುತ್ತಾರೆ. ನರೋತ್ತಮರು ಪಾಪಕೃತರಾಗುತ್ತಾರೆ. ಕರ್ಮಗಳು ನರನ ಬೆನ್ನುಹತ್ತಿ ಹೋಗುತ್ತವೆ. ಅವನೇನಾಗಬೇಕೆಂದು ನಿರ್ಧರಿಸುತ್ತವೆ ಮತ್ತು ಅನಂತರ ಅವನು ಹುಟ್ಟುತ್ತಾನೆ.”
ब्राह्मण उवाच।
कथं संभवते योनौ कथं वा पुण्यपापयोः।
जातीः पुण्या ह्यपुण्याश्च कथं गच्छति सत्तम॥03-200-029॥
ಬ್ರಾಹ್ಮಣನು ಹೇಳಿದನು: “ಸತ್ತಮ! ಅವನು ಹೇಗೆ ಯೋನಿಗಳಲ್ಲಿ ಹುಟ್ಟಿಕೊಳ್ಳುತ್ತಾನೆ? ಮತ್ತು ಪುಣ್ಯಪಾಪಗಳಿಂದ ಪುಣ್ಯನು ಪುಣ್ಯನಾಗಿಯೇ ಮತ್ತು ಪಾಪಿಯು ಪಾಪಿಯಾಗಿಯೇ ಹೇಗೆ ಹುಟ್ಟಿಕೊಳ್ಳುತ್ತಾನೆ? ಅವನು ಹೇಗೆ ಹೋಗುತ್ತಾನೆ?”
व्याध उवाच।
गर्भाधानसमायुक्तं कर्मेदं संप्रदृश्यते।
समासेन तु ते क्षिप्रं प्रवक्ष्यामि द्विजोत्तम॥03-200-030॥
ವ್ಯಾಧನು ಹೇಳಿದನು: “ಕರ್ಮವು ಗರ್ಭಾಧಾನದೊಂದಿಗೆ ಕೂಡಿರುತ್ತದೆಯೆಂದು ಕಾಣುತ್ತದೆ. ದ್ವಿಜೋತ್ತಮ! ಇದರ ಕುರಿತು ಬೇಗನೇ ಸಂಕ್ಷಿಪ್ತವಾಗಿ ಹೇಳುತ್ತೇನೆ.
यथा संभृतसंभारः पुनरेव प्रजायते।
शुभकृच्छुभयोनीषु पापकृत्पापयोनिषु॥03-200-031॥
ಒಟ್ಟುಹಾಕಿಕೊಂಡ ಸಂಭಾರ-ಸಾಮಾಗ್ರಿಗಳಿಗೆ ತಕ್ಕುದಾಗಿ ಶುಭಕಾರ್ಯಗಳನ್ನು ಮಾಡಿದವರು ಶುಭಯೋನಿಗಳಲ್ಲಿ ಮತ್ತು ಪಾಪಕಾರ್ಯಗಳನ್ನು ಮಾಡಿದವರು ಪಾಪಯೋನಿಗಳಲ್ಲಿ ಪುನಃ ಹುಟ್ಟುತ್ತಾರೆ.
शुभैः प्रयोगैर्देवत्वं व्यामिश्रैर्मानुषो भवेत्।
मोहनीयैर्वियोनीषु त्वधोगामी च किल्बिषैः॥03-200-032॥
ಶುಭಕರ್ಮಗಳಿಂದ ದೇವತ್ವವನ್ನು ಪಡೆಯುತ್ತಾರೆ. ಮಿಶ್ರಕರ್ಮಗಳಿಂದ ಮನುಷ್ಯನಾಗುತ್ತಾರೆ. ಮೋಹದಿಂದ ಪ್ರಾಣಿಯೋನಿಗಳಲ್ಲಿ, ಮತ್ತು ಕಿಲ್ಬಿಷಗಳಿಂದ ಅಧೋಯೋನಿಗಳಲ್ಲಿ ಹುಟ್ಟುತ್ತಾರೆ.
जातिमृत्युजरादुःखैः सततं समभिद्रुतः।
संसारे पच्यमानश्च दोषैरात्मकृतैर्नरः॥03-200-033॥
ಮನುಷ್ಯನು ತಾನೇ ಮಾಡಿದ ದೋಷಗಳಿಂದ ಸಂಸಾರದಲ್ಲಿ ಹುಟ್ಟು, ಮೃತ್ಯು, ವೃದ್ಧಾಪ್ಯಗಳಿಂದ ಸುಡಲ್ಪಡುತ್ತಾನೆ.
तिर्यग्योनिसहस्राणि गत्वा नरकमेव च।
जीवाः संपरिवर्तन्ते कर्मबन्धनिबन्धनाः॥03-200-034॥
ಕರ್ಮಬಂಧನ ನಿಬಂಧನೆಗಳಿಗೆ ಸಿಲುಕಿ ಜೀವಗಳು ನರಕಕ್ಕೂ ಹೋಗಿ ಸಹಸ್ರಾರು ಕೀಳು ಯೋನಿಗಳಲ್ಲಿ ತಿರುಗುತ್ತಿರುತ್ತವೆ.
जन्तुस्तु कर्मभिस्तैस्तैः स्वकृतैः प्रेत्य दुःखितः।
तद्दुःखप्रतिघातार्थमपुण्यां योनिमश्नुते॥03-200-035॥
ತಾವೇ ಮಾಡುವ ಕರ್ಮಗಳಿಂದ ಮತ್ತು ದುಃಖಗಳಿಗೆ ನೀಡುವ ಪ್ರತಿಕ್ರಿಯೆಗಳಿಂದ ಜಂತುಗಳು ಅಪುಣ್ಯ ಯೋನಿಗಳನ್ನು ಹೊಂದುತ್ತವೆ.
ततः कर्म समादत्ते पुनरन्यन्नवं बहु।
पच्यते तु पुनस्तेन भुक्त्वापथ्यमिवातुरः॥03-200-036॥
ಅಲ್ಲಿ ಪುನಃ ಅನ್ಯ ಹೊಸಕರ್ಮಗಳನ್ನು ಒಟ್ಟುಹಾಕಿಕೊಂಡು ಪುನಃ, ರೋಗಿಯು ಅಪಥ್ಯ ಆಹಾರವನ್ನು ಸೇವಿಸಿದರೆ ಹೇಗೋ ಹಾಗೆ, ದುಃಖವನ್ನು ಅನುಭವಿಸುತ್ತವೆ.
अजस्रमेव दुःखार्तोऽदुःखितः सुखसंज्ञितः।
ततोऽनिवृत्तबन्धत्वात्कर्मणामुदयादपि।
परिक्रामति संसारे चक्रवद्बहुवेदनः॥03-200-037॥
ಆಗ ದುಃಖಾರ್ತರಾಗಿದ್ದರೂ ಅದುಃಖಿತರಾಗಿದ್ದೇವೆ ಸುಖವಾಗಿದ್ದೇವೆ ಎಂದು ತಪ್ಪು ತಿಳಿದುಕೊಂಡು ತಮ್ಮ ಸರಪಳಿಗಳನ್ನು ಕಳಚಿಕೊಳ್ಳದೇ ಹೊಸ ಕರ್ಮಗಳಿಂದ ಬಂಧನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗೆ ಬಹುವೇದನೆಯ ಸಂಸಾರಚಕ್ರದಲ್ಲಿ ತಿರುಗುತ್ತಿರುತ್ತವೆ.
स चेन्निवृत्तबन्धस्तु विशुद्धश्चापि कर्मभिः।
प्राप्नोति सुकृताँल्लोकान्यत्र गत्वा न शोचति॥03-200-038॥
ವಿಶುದ್ಧ ಕರ್ಮಗಳ ಮೂಲಕ ಈ ಬಂಧನದಿಂದ ನಿವೃತ್ತನಾದವನು ಎಲ್ಲಿಗೆ ಹೋದರೆ ದುಃಖವಿಲ್ಲವೋ ಆ ಸುಕೃತ ಲೋಕಗಳನ್ನು ಪಡೆಯುತ್ತಾನೆ.
पापं कुर्वन्पापवृत्तः पापस्यान्तं न गच्छति।
तस्मात्पुण्यं यतेत्कर्तुं वर्जयेत च पातकम्॥03-200-039॥
ಪಾಪದಲ್ಲಿ ನಿರತನಾದವನು ಪಾಪವನ್ನೇ ಮಾಡಿಕೊಂಡು ಪಾಪದ ಅಂತ್ಯವನ್ನು ಪಡೆಯುವುದೇ ಇಲ್ಲ. ಆದುದರಿಂದ ಪಾತಕ ಕರ್ಮವನ್ನು ವರ್ಜಿಸಿ ಪುಣ್ಯವನ್ನು ಮಾಡಬೇಕು.
अनसूयुः कृतज्ञश्च कल्याणान्येव सेवते।
सुखानि धर्ममर्थं च स्वर्गं च लभते नरः॥03-200-040॥
ಅನಸೂಯನಾಗಿ, ಕೃತಜ್ಞನಾಗಿದ್ದುಕೊಂಡು ಕಲ್ಯಾಣಕರ ಸೇವೆಸಲ್ಲಿಸುವ ನರನು ಸುಖ-ಧರ್ಮ-ಅರ್ಥ-ಸ್ವರ್ಗಗಳನ್ನು ಪಡೆಯುತ್ತಾನೆ.
संस्कृतस्य हि दान्तस्य नियतस्य यतात्मनः।
प्राज्ञस्यानन्तरा वृत्तिरिह लोके परत्र च॥03-200-041॥
ಉತ್ತಮ ನಡತೆಯುಳ್ಳವನು, ತಾಳ್ಮೆಯುಳ್ಳವನು, ನಿಯತನಾದವನು, ಮತ್ತು ಯತಾತ್ಮನು ನಿರಂತರ ಸುಖವನ್ನು ಇಲ್ಲಿಯೂ ಇದರ ನಂತರವೂ ಪಡೆಯುತ್ತಾನೆ.
सतां धर्मेण वर्तेत क्रियां शिष्टवदाचरेत्।
असंक्लेशेन लोकस्य वृत्तिं लिप्सेत वै द्विज॥03-200-042॥
ದ್ವಿಜ! ಮನುಷ್ಯನು ಉತ್ತಮರ ಧರ್ಮದಂತೆ ನಡೆದುಕೊಳ್ಳಬೇಕು ಮತ್ತು ಶಿಷ್ಟರಂತೆ ಕ್ರಿಯೆಗಳನ್ನು ಆಚರಿಸಬೇಕು. ಲೋಕದ ವೃತ್ತಿಯನ್ನು ಅನುಸರಿಸುವುದರಿಂದ ಸಂಕ್ಲೇಶಗಳುಂಟಾಗುವುದಿಲ್ಲ.
सन्ति ह्यागतविज्ञानाः शिष्टाः शास्त्रविचक्षणाः।
स्वधर्मेण क्रिया लोके कर्मणः सोऽप्यसंकरः॥03-200-043॥
ವಿಜ್ಞಾನಿಗಳೂ, ಶಾಸ್ತ್ರಗಳನ್ನು ಕಂಡುಕೊಂಡವರೂ, ಶಿಷ್ಟರೂ ಇದ್ದಾರೆ. ಸ್ವಧರ್ಮದಂತೆ ಕ್ರಿಯೆಯಲ್ಲಿ ತೊಡಗಿರುವುದರಿಂದ ಲೋಕದಲ್ಲಿ ಕರ್ಮಸಂಕರವು ಆಗುವುದಿಲ್ಲ.
प्राज्ञो धर्मेण रमते धर्मं चैवोपजीवति।
तस्य धर्मादवाप्तेषु धनेषु द्विजसत्तम।
तस्यैव सिञ्चते मूलं गुणान्पश्यति यत्र वै॥03-200-044॥
ಪ್ರಾಜ್ಞರು ಧರ್ಮದಂತೆ ನಡೆದುಕೊಳ್ಳುವುದರಲ್ಲಿ ಸಂತೋಷವನ್ನು ಪಡೆಯುತ್ತಾರೆ. ಧರ್ಮದಿಂದ ಜೀವನವನ್ನು ನಡೆಸುತ್ತಾರೆ. ದ್ವಿಜಸತ್ತಮ! ಅವನು ಧರ್ಮದಿಂದ ಧನವನ್ನು ಗಳಿಸುತ್ತಾನೆ. ಅದರಿಂದಲೇ ಬೇರಿಗೆ ನೀರನ್ನು ಹಾಕುತ್ತಾನೆ ಮತ್ತು ಎಲ್ಲಿಯೂ ಗುಣಗಳನ್ನು ಕಾಣುತ್ತಾನೆ.
धर्मात्मा भवति ह्येवं चित्तं चास्य प्रसीदति।
स मैत्रजनसंतुष्ट इह प्रेत्य च नन्दति॥03-200-045॥
ಅಂಥವನು ಧರ್ಮಾತ್ಮನಾಗಿರುತ್ತಾನೆ. ಅವನ ಚಿತ್ತವು ಸದಾ ಸಂತೃಪ್ತವಾಗಿರುತ್ತದೆ. ಅವನು ಮಿತ್ರಜನರೊಡನೆ ಸಂತುಷ್ಟನಾಗಿ ಇಲ್ಲಿಯೂ ಮತ್ತು ನಂತರದಲ್ಲಿಯೂ ಆನಂದಿಸುತ್ತಾನೆ.
शब्दं स्पर्शं तथा रूपं गन्धानिष्टांश्च सत्तम।
प्रभुत्वं लभते चापि धर्मस्यैतत्फलं विदुः॥03-200-046॥
ಸತ್ತಮ! ಧರ್ಮದಲ್ಲಿರುವವರು ಸುಖವನ್ನು ನೀಡುವ ಶಬ್ಧ, ಸ್ಪರ್ಶ, ರೂಪ, ಗಂಧಗಳ ಮೇಲೆ ಪ್ರಭುತ್ವವನ್ನು ಪಡೆಯುತ್ತಾರೆ. ಇವು ಧರ್ಮದ ಫಲವೆಂದು ತಿಳಿಯಲ್ಪಟ್ಟಿವೆ.
धर्मस्य च फलं लब्ध्वा न तृप्यति महाद्विज।
अतृप्यमाणो निर्वेदमादत्ते ज्ञानचक्षुषा॥03-200-047॥
ಮಹಾದ್ವಿಜ! ಜ್ಞಾನಚಕ್ಷುಷಿಯು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಅವನು ನೋವು ಸುಖಗಳಿಗೆ ನಿರ್ವೇದನಾಗುತ್ತಾನೆ.
प्रज्ञाचक्षुर्नर इह दोषं नैवानुरुध्यते।
विरज्यति यथाकामं न च धर्मं विमुञ्चति॥03-200-048॥
ಪ್ರಜ್ಞಾಚಕ್ಷು ನರನನ್ನು ಇಲ್ಲಿಯ ದೋಷಗಳು ತಾಗುವುದಿಲ್ಲ. ತಾನೇ ಬಯಸಿ ವೈರಾಗ್ಯನಾಗುತ್ತಾನೆ. ಆದರೆ ಧರ್ಮವನ್ನು ಬಿಡುವುದಿಲ್ಲ.
सर्वत्यागे च यतते दृष्ट्वा लोकं क्षयात्मकम्।
ततो मोक्षे प्रयतते नानुपायादुपायतः॥03-200-049॥
ಲೋಕ ಮತ್ತು ತಾನೂ ಕ್ಷಯವಾಗುವವೆನ್ನುವುದನ್ನು ಕಂಡುಕೊಂಡು ಎಲ್ಲವನ್ನೂ ತ್ಯಜಿಸಲು ಪ್ರಯತ್ನಿಸುತ್ತಾನೆ. ಇನ್ನೂ ಉಪಾಯಗಳನ್ನು ಹುಡುಕಿಕೊಳ್ಳುತ್ತಾ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ.
एवं निर्वेदमादत्ते पापं कर्म जहाति च।
धार्मिकश्चापि भवति मोक्षं च लभते परम्॥03-200-050॥
ಹೀಗೆ ನಿರ್ವೇದಭಾವವನ್ನು ತಳೆದು ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ. ಧಾರ್ಮಿಕನಾಗಿದ್ದುಕೊಂಡು ಪರಮ ಮೋಕ್ಷವನ್ನು ಪಡೆಯುತ್ತಾನೆ.
तपो निःश्रेयसं जन्तोस्तस्य मूलं शमो दमः।
तेन सर्वानवाप्नोति कामान्यान्मनसेच्छति॥03-200-051॥
ತಪಸ್ಸು ಜಂತುವಿನ ಶ್ರೇಯಸ್ಸಿಗೆ ಕಾರಣ ಮತ್ತು ಅದರ ಮೂಲವು ಶಮ ಮತ್ತು ದಮ. ಇವುಗಳ ಮೂಲಕ ಅವನ ಮನಸ್ಸು ಬಯಸಿದ ಕಾಮಗಳೆಲ್ಲವನ್ನೂ ಪಡೆಯುತ್ತಾನೆ.
इन्द्रियाणां निरोधेन सत्येन च दमेन च।
ब्रह्मणः पदमाप्नोति यत्परं द्विजसत्तम॥03-200-052॥
ದ್ವಿಜಸತ್ತಮ! ಇಂದ್ರಿಯಗಳ ನಿರೋಧ, ಸತ್ಯ ಮತ್ತು ದಮಗಳ ಮೂಲಕ ಶ್ರೇಷ್ಠ ಬ್ರಹ್ಮಪದವನ್ನು ಪಡೆಯುತ್ತಾನೆ.”
ब्राह्मण उवाच।
इन्द्रियाणि तु यान्याहुः कानि तानि यतव्रत।
निग्रहश्च कथं कार्यो निग्रहस्य च किं फलम्॥03-200-053॥
ಬ್ರಾಹ್ಮಣನು ಹೇಳಿದನು: “ಯತವ್ರತ! ಇಂದ್ರಿಯಗಳೆಂದು ನೀನು ಹೇಳಿದೆಯಲ್ಲ ಅವು ಏನು? ಅವುಗಳ ನಿಗ್ರಹವನ್ನು ಹೇಗೆ ಮಾಡಬೇಕು ಮತ್ತು ನಿಗ್ರಹದ ಫಲವೇನು?
कथं च फलमाप्नोति तेषां धर्मभृतां वर।
एतदिच्छामि तत्त्वेन धर्मं ज्ञातुं सुधार्मिक॥03-200-054॥
ಧರ್ಮಭೃತರಲ್ಲಿ ಶ್ರೇಷ್ಠ! ಸುಧಾರ್ಮಿಕ! ಇವುಗಳ ಫಲವನ್ನು ಹೇಗೆ ಪಡೆಯಬೇಕು? ತತ್ವದಿಂದ ಈ ಧರ್ಮವನ್ನು ತಿಳಿಯಲು ಬಯಸುತ್ತೇನೆ.””
मार्कण्डेय उवाच।
एवमुक्तस्तु विप्रेण धर्मव्याधो युधिष्ठिर।
प्रत्युवाच यथा विप्रं तच्छृणुष्व नराधिप॥03-201-001॥
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ನರಾಧಿಪ! ವಿಪ್ರನ ಈ ಮಾತುಗಳಿಗೆ ಧರ್ಮವ್ಯಾಧನು ಹೇಗೆ ವಿಪ್ರನಿಗೆ ಉತ್ತರಿಸಿದನು ಎನ್ನುವುದನ್ನು ಕೇಳು.
व्याध उवाच।
विज्ञानार्थं मनुष्याणां मनः पूर्वं प्रवर्तते।
तत्प्राप्य कामं भजते क्रोधं च द्विजसत्तम॥03-201-002॥
ವ್ಯಾಧನು ಹೇಳಿದನು: “ದ್ವಿಜಸತ್ತಮ! ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರಲ್ಲಿ ಮೊದಲು ಮನಸ್ಸು ಕಾರ್ಯಗತವಾಗುತ್ತದೆ. ಅದನ್ನು ಪಡೆದನಂತರ ಕಾಮ, ಪ್ರೇಮ, ಕ್ರೋಧಗಳುಂಟಾಗುತ್ತವೆ.
ततस्तदर्थं यतते कर्म चारभते महत्।
इष्टानां रूपगन्धानामभ्यासं च निषेवते॥03-201-003॥
ಅದನ್ನು ತೃಪ್ತಿಗೊಳಿಸಲು ಮಹಾ ಕರ್ಮಗಳನ್ನು ಮಾಡಲಾಗುತ್ತದೆ. ಇಷ್ಟವಾದ ರೂಪಗಂಧಗಳನ್ನು ಅಭ್ಯಾಸಬಲದಿಂದ ಸೇವಿಸಲಾಗುತ್ತದೆ.
ततो रागः प्रभवति द्वेषश्च तदनन्तरम्।
ततो लोभः प्रभवति मोहश्च तदनन्तरम्॥03-201-004॥
ಆಗ ರಾಗವು ಹುಟ್ಟುತ್ತದೆ ಮತ್ತು ಅದರ ನಂತರ ದ್ವೇಷ. ಅನಂತರ ಲೋಭವು ಹುಟ್ಟುತ್ತದೆ ಮತ್ತು ಅದರ ನಂತರ ಮೋಹ.
तस्य लोभाभिभूतस्य रागद्वेषहतस्य च।
न धर्मे जायते बुद्धिर्व्याजाद्धर्मं करोति च॥03-201-005॥
ಲೋಭದಿಂದ ಆಳಲ್ಪಡುತ್ತಾನೆ, ರಾಗದ್ವೇಷಗಳಿಂದ ಪೆಟ್ಟು ತಿನ್ನುತ್ತಾನೆ. ಬುದ್ಧಿಯು ಧರ್ಮದ ಕಡೆ ಹೋಗುವುದಿಲ್ಲ. ಧರ್ಮದಲ್ಲಿರುವಂತೆ ನಟಿಸುತ್ತಾನೆ.
व्याजेन चरते धर्ममर्थं व्याजेन रोचते।
व्याजेन सिध्यमानेषु धनेषु द्विजसत्तम।
तत्रैव रमते बुद्धिस्ततः पापं चिकीर्षति॥03-201-006॥
ಕಪಟ ಧರ್ಮದಲ್ಲಿ ನಡೆಯುತ್ತಾನೆ. ಕಪಟನಾಗಿ ಸಂಪತ್ತನ್ನು ಬಯಸುತ್ತಾನೆ. ದ್ವಿಜಸತ್ತಮ! ಕಪಟತನದಲ್ಲಿ ಸಂಪತ್ತನ್ನು ಗಳಿಸುತ್ತಾನೆ. ಆಗ ಬುದ್ಧಿಯು ಅದರಲ್ಲಿಯೇ ರಮಿಸಿ ಪಾಪವನ್ನೆಸಗುತ್ತಾನೆ.
सुहृद्भिर्वार्यमाणश्च पण्डितैश्च द्विजोत्तम।
उत्तरं श्रुतिसंबद्धं ब्रवीति श्रुतियोजितम्॥03-201-007॥
ದ್ವಿಜೋತ್ತಮ! ಸ್ನೇಹಿತರು ಮತ್ತು ಪಂಡಿತರು ಅವನನ್ನು ತಡೆದರೂ ಅವನು ಶ್ರುತಿಸಂಬದ್ಧವಾದ ಶ್ರುತಿಯೋಜಿತವಾದ ಉತ್ತರವನ್ನೇ ಅವರಿಗೆ ಹೇಳುತ್ತಾನೆ.
अधर्मस्त्रिविधस्तस्य वर्धते रागदोषतः।
पापं चिन्तयते चापि ब्रवीति च करोति च॥03-201-008॥
ರಾಗ ದೋಷದಿಂದ ಅವನ ಅಧರ್ಮವು ಮೂರುವಿಧಗಳಲ್ಲಿ ಹೆಚ್ಚಾಗುತ್ತದೆ; ಪಾಪವನ್ನು ಯೋಚಿಸುತ್ತಾನೆ, ಮಾತನಾಡುತ್ತಾನೆ ಮತ್ತು ಮಾಡುತ್ತಾನೆ ಕೂಡ.
तस्याधर्मप्रवृत्तस्य गुणा नश्यन्ति साधवः।
एकशीलाश्च मित्रत्वं भजन्ते पापकर्मिणः॥03-201-009॥
ಅವನ ಅಧರ್ಮಪ್ರವೃತ್ತಿಯಿಂದ ಒಳ್ಳೆಯ ಗುಣಗಳು ನಾಶವಾಗುತ್ತವೆ. ಅದೇ ನಡತೆಯ ಪಾಪಕರ್ಮಿಗಳು ಅವನ ಮಿತ್ರತ್ವವನ್ನು ಬಯಸುತ್ತಾರೆ.
स तेनासुखमाप्नोति परत्र च विहन्यते।
पापात्मा भवति ह्येवं धर्मलाभं तु मे शृणु॥03-201-010॥
ಅವನು ಅಸುಖವನ್ನೇ ಹೊಂದುತ್ತಾನೆ ಮತ್ತು ನಂತರದಲ್ಲಿ ನಾಶಹೊಂದುತ್ತಾನೆ. ಪಾಪಾತ್ಮನು ಹೀಗೆಯೇ ಆಗುತ್ತಾನೆ. ಈಗ ಧರ್ಮಲಾಭದ ಕುರಿತು ನನ್ನಿಂದ ಕೇಳು.
यस्त्वेतान्प्रज्ञया दोषान्पूर्वमेवानुपश्यति।
कुशलः सुखदुःखेषु साधूंश्चाप्युपसेवते।
तस्य साधुसमारम्भाद्बुद्धिर्धर्मेषु जायते॥03-201-011॥
ಯಾರು ತನ್ನ ಪ್ರಜ್ಞೆಯ ಮೂಲಕ ಈ ದೋಷಗಳನ್ನು ಮೊದಲೇ ಕಂಡುಕೊಳ್ಳುತ್ತಾನೋ ಮತ್ತು ಸುಖ ದುಃಖಗಳೇನೆಂದು ತಿಳಿದಿರುವನೋ ಅವನು ಒಳ್ಳೆಯ ಜನರೊಡನೆ ಒಡನಾಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಿದುದರಿಂದ ಅವನ ಬುದ್ಧಿಯು ಧರ್ಮದ ಕಡೆ ನಡೆಯುತ್ತದೆ.”
ब्राह्मण उवाच।
ब्रवीषि सूनृतं धर्मं यस्य वक्ता न विद्यते।
दिव्यप्रभावः सुमहानृषिरेव मतोऽसि मे॥03-201-012॥
ಬ್ರಾಹ್ಮಣನು ಹೇಳಿದನು: “ವಕ್ತಾರನೇ ಇಲ್ಲದ ಸುಖಕರವಾದ ಧರ್ಮದ ಕುರಿತು ನೀನು ಹೇಳುತ್ತಿರುವೆ. ನೀನು ಓರ್ವ ದಿವ್ಯದೃಷ್ಟಿಯ ಮಹಾ ಋಷಿಯೆಂದೇ ನನಗನ್ನಿಸುತ್ತದೆ.”
व्याध उवाच।
ब्राह्मणा वै महाभागाः पितरोऽग्रभुजः सदा।
तेषां सर्वात्मना कार्यं प्रियं लोके मनीषिणा॥03-201-013॥
ವ್ಯಾಧನು ಹೇಳಿದನು: “ಪಿತೃಗಳಂತೆ ಮಹಾಭಾಗ ಬ್ರಾಹ್ಮಣರೂ ಸದಾ ಮೊದಲು ಆಹಾರಕ್ಕೆ ಅರ್ಹರು. ಈ ಲೋಕದಲ್ಲಿ ತಿಳಿದವನು ಅವರಿಗೆ ತೃಪ್ತಿಕೊಡುವ ಕಾರ್ಯವನ್ನು ಕೈಗೊಳ್ಳಬೇಕು.
यत्तेषां च प्रियं तत्ते वक्ष्यामि द्विजसत्तम।
नमस्कृत्वा ब्राह्मणेभ्यो ब्राह्मीं विद्यां निबोध मे॥03-201-014॥
ದ್ವಿಜಸತ್ತಮ! ಅವರಿಗೆ ಪ್ರಿಯವಾದುದು ಏನೆಂದು ಹೇಳುತ್ತೇನೆ. ಬ್ರಾಹ್ಮಣರಿಗೆ ನಮಸ್ಕರಿಸಿ, ಬ್ರಾಹ್ಮೀ ವಿದ್ಯೆಯನ್ನು ನನ್ನಿಂದ ಕೇಳು.
इदं विश्वं जगत्सर्वमजय्यं चापि सर्वशः।
महाभूतात्मकं ब्रह्मन्नातः परतरं भवेत्॥03-201-015॥
ಬ್ರಹ್ಮನ್! ಯಾವುದರಿಂದಲೂ ಅಜೇಯವಾಗಿರುವ, ಈ ಸರ್ವ ವಿಶ್ವ, ಜಗತ್ತೂ, ಮಹಾಭೂತಗಳಿಂದ ಕೂಡಿದೆ. ಅವುಗಳಿಗೂ ಮಿಗಿಲಾದುದು ಬೇರೊಂದಿಲ್ಲ.
महाभूतानि खं वायुरग्निरापस्तथा च भूः।
शब्दः स्पर्शश्च रूपं च रसो गन्धश्च तद्गुणाः॥03-201-016॥
ಈ ಮಹಾಭೂತಗಳು – ಆಕಾಶ, ವಾಯು, ಅಗ್ನಿ, ನೀರು, ಮತ್ತು ಭೂಮಿ. ಅವುಗಳ ಗುಣಗಳು – ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ.
तेषामपि गुणाः सर्वे गुणवृत्तिः परस्परम्।
पूर्वपूर्वगुणाः सर्वे क्रमशो गुणिषु त्रिषु॥03-201-017॥
ಅವೆಲ್ಲವುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಗುಣಗಳಿದ್ದರೂ, ಅವು ಪರಸ್ಪರರ ಗುಣಗಳನ್ನೂ ಹೊಂದಿವೆ. ಕ್ರಮವಾಗಿ ಪ್ರತಿಯೊಂದರಲ್ಲಿಯೂ ಅದರ ಹಿಂದಿನ ಮೂರು ಭೂತಗಳ ಗುಣಗಳೂ ಸೇರಿವೆ.
षष्ठस्तु चेतना नाम मन इत्यभिधीयते।
सप्तमी तु भवेद्बुद्धिरहंकारस्ततः परम्॥03-201-018॥
ಆರನೆಯದು ಚೇತನ. ಇದನ್ನು ಮನಸ್ಸು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಳನೆಯದು ಬುದ್ಧಿ. ಅಹಂಕಾರವು ಅದರ ನಂತರದ್ದು.
इन्द्रियाणि च पञ्चैव रजः सत्त्वं तमस्तथा।
इत्येष सप्तदशको राशिरव्यक्तसंज्ञकः॥03-201-019॥
ಇಂದ್ರಿಯಗಳು ಐದು. ರಜ, ಸತ್ವ ಮತ್ತು ತಮಗಳು ಕೂಡ. ಈ ಹದಿನೇಳರ ಗುಂಪು ಅವ್ಯಕ್ತ ಎಂದು ತಿಳಿಯಲ್ಪಟ್ಟಿದೆ.
सर्वैरिहेन्द्रियार्थैस्तु व्यक्ताव्यक्तैः सुसंवृतः।
चतुर्विंशक इत्येष व्यक्ताव्यक्तमयो गुणः।
एतत्ते सर्वमाख्यातं किं भूयो श्रोतुमिच्छसि॥03-201-020॥
ಎಲ್ಲ ಇಂದ್ರಿಯ ವಸ್ತುಗಳಲ್ಲಿ, ಮನಸ್ಸು ಮತ್ತು ಬುದ್ಧಿಗಳಲ್ಲಿ ಹುದುಗಿರುವ ವ್ಯಕ್ತ ಮತ್ತು ಅವ್ಯಕ್ತಗಳನ್ನೂ ಸೇರಿ ಇಪ್ಪತ್ನಾಲ್ಕು ವ್ಯಕ್ತ-ಅವ್ಯಕ್ತ ಗುಣಗಳೆಂದು ಕರೆಯಲ್ಪಟ್ಟಿದೆ. ಈ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನು ಏನನ್ನು ಕೇಳ ಬಯಸುತ್ತೀಯೆ?””
मार्कण्डेय उवाच।
एवमुक्तः स विप्रस्तु धर्मव्याधेन भारत।
कथामकथयद्भूयो मनसः प्रीतिवर्धनीम्॥03-202-001॥
ಮಾರ್ಕಂಡೇಯನು ಹೇಳಿದನು: “ಭಾರತ! ಧರ್ಮವ್ಯಾಧನು ಹೀಗೆ ಹೇಳಲು, ವಿಪ್ರನು ಮನಸ್ಸಿಗೆ ಸುಖವನ್ನು ನೀಡುವ ಈ ಮಾತುಕತೆಯನ್ನು ಮುಂದುವರೆಸಿದನು.”
ब्राह्मण।
महाभूतानि यान्याहुः पञ्च धर्मविदां वर।
एकैकस्य गुणान्सम्यक्पञ्चानामपि मे वद॥03-202-002॥
ಬ್ರಾಹ್ಮಣನು ಹೇಳಿದನು: “ಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠನೇ! ಐದು ಮಹಾಭೂತಗಳಿವೆಯೆಂದು ಹೇಳುತ್ತಾರೆ. ಈ ಐದರಲ್ಲಿ ಪ್ರತಿಯೊಂದರ ಗುಣಗಳನ್ನು ಸರಿಯಾಗಿ ನನಗೆ ತಿಳಿಸಿ ಹೇಳು.”
व्याध उवाच।
भूमिरापस्तथा ज्योतिर्वायुराकाशमेव च।
गुणोत्तराणि सर्वाणि तेषां वक्ष्यामि ते गुणान्॥03-202-003॥
ವ್ಯಾಧನು ಹೇಳಿದನು: “ಭೂಮಿ, ನೀರು, ಜ್ಯೋತಿ, ವಾಯು, ಆಕಾಶಗಳಿವೆ. ಅವೆಲ್ಲವುಗಳಲ್ಲಿ ಪ್ರತಿಯೊಂದರ ಗುಣಗಳನ್ನು ನಿನಗೆ ಹೇಳುತ್ತೇನೆ.
भूमिः पञ्चगुणा ब्रह्मन्नुदकं च चतुर्गुणम्।
गुणास्त्रयस्तेजसि च त्रयश्चाकाशवातयोः॥03-202-004॥
ಬ್ರಹ್ಮನ್! ಭೂಮಿಯು ಐದು ಗುಣಗಳನ್ನು ಮತ್ತು ಉದಕವು ನಾಲ್ಕು ಗುಣಗಳನ್ನು ಹೊಂದಿವೆ. ತೇಜಕ್ಕೆ ಮೂರು ಗುಣಗಳಿವೆ ಮತ್ತು ಆಕಾಶ ವಾತಗಳ ಮಧ್ಯೆ ಮೂರು ಗುಣಗಳಿವೆ.
शब्दः स्पर्शश्च रूपं च रसो गन्धश्च पञ्चमः।
एते गुणाः पञ्च भूमेः सर्वेभ्यो गुणवत्तराः॥03-202-005॥
ಎಲ್ಲಕ್ಕಿಂತಲೂ ಹೆಚ್ಚು ಗುಣಗಳನ್ನುಳ್ಳ ಭೂಮಿಯು ಈ ಐದು ಗುಣಗಳನ್ನು ಹೊಂದಿದೆ: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ.
शब्दः स्पर्शश्च रूपं च रसश्चापि द्विजोत्तम।
अपामेते गुणा ब्रह्मन्कीर्तितास्तव सुव्रत॥03-202-006॥
ದ್ವಿಜೋತ್ತಮ! ಸುವ್ರತ! ಬ್ರಹ್ಮನ್! ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ನೀರಿನ ಗುಣಗಳೆಂದು ಹೇಳುತ್ತಾರೆ.
शब्दः स्पर्शश्च रूपं च तेजसोऽथ गुणास्त्रयः।
शब्दः स्पर्शश्च वायौ तु शब्द आकाश एव च॥03-202-007॥
ಶಬ್ದ, ಸ್ಪರ್ಶ ಮತ್ತು ರೂಪ ಇವು ತೇಜಸ್ಸಿನ ಮೂರು ಗುಣಗಳು. ಗಾಳಿಯು ಶಬ್ದ ಸ್ಪರ್ಶಗಳನ್ನು ಹೊಂದಿದೆ ಮತ್ತು ಆಕಾಶಕ್ಕೆ ಶಬ್ದವು ಮಾತ್ರ.
एते पञ्चदश ब्रह्मन्गुणा भूतेषु पञ्चसु।
वर्तन्ते सर्वभूतेषु येषु लोकाः प्रतिष्ठिताः।
अन्योन्यं नातिवर्तन्ते संपच्च भवति द्विज॥03-202-008॥
ಬ್ರಹ್ಮನ್! ಈ ಹದಿನೈದು ಗುಣಗಳು ಐದು ಭೂತಗಳಲ್ಲಿವೆ. ಮತ್ತು ಇವು ಲೋಕಗಳ ಆಧಾರವಾದ ಎಲ್ಲ ಭೂತಗಳಲ್ಲಿ ನಡೆಯುತ್ತವೆ. ದ್ವಿಜ! ಅವು ಅನ್ಯೋನ್ಯವನ್ನು ಅತಿಕ್ರಮಿಸುವುದಿಲ್ಲ; ಅವು ಒಂದಾಗಿರುತ್ತವೆ.
यदा तु विषमीभावमाचरन्ति चराचराः।
तदा देही देहमन्यं व्यतिरोहति कालतः॥03-202-009॥
ಆದರೆ ಚರಾಚರಗಳಲ್ಲಿ ಇವುಗಳ ವೈಷಮ್ಯವುಂಟಾದಾಗ, ಸಮಯದಲ್ಲಿ ದೇಹಿಯು ಅನ್ಯ ದೇಹವನ್ನು ಪ್ರವೇಶಿಸುತ್ತಾನೆ.
आनुपूर्व्या विनश्यन्ति जायन्ते चानुपूर्वशः।
तत्र तत्र हि दृश्यन्ते धातवः पाञ्चभौतिकाः।
यैरावृतमिदं सर्वं जगत्स्थावरजङ्गमम्॥03-202-010॥
ಧಾತುಗಳು ಒಂದರ ನಂತರ ಒಂದರಂತೆ ನಾಶಹೊಂದುತ್ತವೆ ಮತ್ತು ಒಂದರ ನಂತರ ಒಂದರಂತೆ ಹುಟ್ಟುತ್ತವೆ. ಪ್ರತಿ ಕ್ಷಣದಲ್ಲಿಯೂ ಪಂಚಭೌತಿಕಗಳ ಧಾತುಗಳು ಕಾಣಿಸಿಕೊಳ್ಳುತ್ತವೆ. ಅವು ಈ ಜಗತ್ತಿನ ಸ್ಥಾವರ ಜಂಗಮಗಳೆಲ್ಲವನ್ನೂ ಆವರಿಸಿವೆ.
इन्द्रियैः सृज्यते यद्यत्तत्तद्व्यक्तमिति स्मृतम्।
अव्यक्तमिति विज्ञेयं लिङ्गग्राह्यमतीन्द्रियम्॥03-202-011॥
ಇಂದ್ರಿಯಗಳಿಂದ ಸೃಷ್ಟಿಸಿದವುಗಳನ್ನು ವ್ಯಕ್ತವೆಂದು ಹೇಳುತ್ತಾರೆ. ಅತೀಂದ್ರಿಯವಾದವುಗಳನ್ನು, ಲಿಂಗವೆಂದು ತಿಳಿಯಬೇಕಾದುದನ್ನು ಅವ್ಯಕ್ತವೆಂದು ಹೇಳುತ್ತಾರೆ[1].
यथास्वं ग्राहकान्येषां शब्दादीनामिमानि तु।
इन्द्रियाणि यदा देही धारयन्निह तप्यते॥03-202-012॥
ಶಬ್ದಾದಿಗಳನ್ನು ಯಾವುದರಿಂದ ಗ್ರಹಿಸುತ್ತಾನೋ ಆ ಇಂದ್ರಿಯಗಳು ತನ್ನವು ಎಂಬ ತಿಳುವಳಿಕೆಯಿಂದ ಇರುವಾಗ ದೇಹಿಯು ಪರಿತಪಿಸುತ್ತಾನೆ.
लोके विततमात्मानं लोकं चात्मनि पश्यति।
परावरज्ञः सक्तः सन्सर्वभूतानि पश्यति॥03-202-013॥
ಆತ್ಮವನ್ನು ಮುಂದುವರಿಸಿ ಲೋಕವನ್ನೂ, ಲೋಕದಲ್ಲಿ ಆತ್ಮವನ್ನೂ ಕಾಣುವವನು ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ತಿಳಿದುಕೊಂಡು, ಅಂಟಿಕೊಂಡಿದ್ದರೂ ಸರ್ವಭೂತಗಳನ್ನು ಕಾಣುತ್ತಾನೆ.
पश्यतः सर्वभूतानि सर्वावस्थासु सर्वदा।
ब्रह्मभूतस्य संयोगो नाशुभेनोपपद्यते॥03-202-014॥
ಸರ್ವದಾ ಸರ್ವ ಭೂತಗಳ ಸರ್ವಾವಸ್ಥೆಗಳನ್ನು ನೋಡುವವನು ಬ್ರಹ್ಮನಾಗುತ್ತಾನೆ. ಅವನು ಎಂದೂ ಅಶುಭದೊಂದಿಗೆ ಕೂಡುವುದಿಲ್ಲ.
ज्ञानमूलात्मकं क्लेशमतिवृत्तस्य मोहजम्।
लोको बुद्धिप्रकाशेन ज्ञेयमार्गेण दृश्यते॥03-202-015॥
ಮೋಹದಿಂದ ಉಂಟಾಗುವ ಅತಿಕ್ಲೇಶದ ನಡತೆಯನ್ನು ಜ್ಞಾನದ ಮೂಲದಿಂದ ತೆಗೆಯಬಹುದು. ಜ್ಞಾನಮಾರ್ಗದ ಬುದ್ಧಿಪ್ರಕಾಶದಿಂದ ಲೋಕವು ಕಾಣುತ್ತದೆ.
अनादिनिधनं जन्तुमात्मयोनिं सदाव्ययम्।
अनौपम्यममूर्तं च भगवानाह बुद्धिमान्।
तपोमूलमिदं सर्वं यन्मां विप्रानुपृच्छसि॥03-202-016॥
ಅಂಥವನು ಅನಾದಿನಿಧನ, ಸದಾ ಅವ್ಯಯನಾಗಿರುವ, ಅನೌಪಮ, ಅಮುಹೂರ್ತ, ಬುದ್ಧಿವಂತ ಪ್ರಾಣಿಯೋನಿಯಲ್ಲಿ ಹುಟ್ಟುತ್ತಾನೆ. ವಿಪ್ರ! ನೀನು ಏನು ನನ್ನನ್ನು ಕೇಳುತ್ತಿದ್ದೀಯೋ ಇವೆಲ್ಲವುಗಳ ಮೂಲವೂ ತಪಸ್ಸು.
इन्द्रियाण्येव तत्सर्वं यत्स्वर्गनरकावुभौ।
निगृहीतविसृष्टानि स्वर्गाय नरकाय च॥03-202-017॥
ಇಂದ್ರಿಯಗಳಿಂದಲೇ ಸ್ವರ್ಗ ನರಕಗಳೆರಡೂ ಇವೆ. ಅವುಗಳನ್ನು ನಿಗ್ರಹದಲ್ಲಿಟ್ಟುಕೊಂಡರೆ ಸ್ವರ್ಗ, ಸ್ವಚ್ಛಂದವಾಗಿ ಬಿಟ್ಟರೆ ನರಕ.
एष योगविधिः कृत्स्नो यावदिन्द्रियधारणम्।
एतन्मूलं हि तपसः कृत्स्नस्य नरकस्य च॥03-202-018॥
ಈ ಇಂದ್ರಿಯ ಧಾರಣೆಯೇ ಸಂಪೂರ್ಣ ಯೋಗವಿಧಿ. ಇಂದ್ರಿಯಗಳೇ ನಮ್ಮ ತಪಸ್ಸಿನ ಅಥವಾ ನರಕದ ಮೂಲ.
इन्द्रियाणां प्रसङ्गेन दोषमृच्छत्यसंशयम्।
संनियम्य तु तान्येव ततः सिद्धिमवाप्नुते॥03-202-019॥
ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನೇ ಸಂಯಮದಲ್ಲಿಟ್ಟುಕೊಂಡರೆ ಸಿದ್ಧಿಯನ್ನು ಹೊಂದುತ್ತೇವೆ.
षण्णामात्मनि नित्यानामैश्वर्यं योऽधिगच्छति।
न स पापैः कुतोऽनर्थैर्युज्यते विजितेन्द्रियः॥03-202-020॥
ನಮ್ಮಲ್ಲಿರುವ ಆರು ಇಂದ್ರಿಯಗಳ ಮೇಲೆ ಅಧಿಕಾರವನ್ನು ಸಾಧಿಸುವ ಜಿಂತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ಅನರ್ಥವು ಎಲ್ಲಿಂದ?
रथः शरीरं पुरुषस्य दृष्ट;मात्मा नियन्तेन्द्रियाण्याहुरश्वान्।
तैरप्रमत्तः कुशली सदश्वै;र्दान्तैः सुखं याति रथीव धीरः॥03-202-021॥
ಪುರುಷನ ಶರೀರವನ್ನು ರಥಕ್ಕೆ, ಆತ್ಮವನ್ನು ಸಾರಥಿಗೆ ಮತ್ತು ಇಂದ್ರಿಯಗಳನ್ನು ರಥಕ್ಕೆ ಕಟ್ಟಿದ ಕುದುರೆಗಳಿಗೆ ಹೋಲಿಸುತ್ತಾರೆ. ಕುಶಲ ಸಾರಥಿಯು ಅಪ್ರಮತ್ತನಾಗಿ ಅಶ್ವಗಳನ್ನು ನಡೆಸುತ್ತಾನೆ. ಮತ್ತು ಧೀರ ರಥಿಕನಿಗೆ ನಿಯಂತ್ರಣದ ಮೂಲಕ ಸುಖವನ್ನು ತರುತ್ತಾನೆ.
षण्णामात्मनि नित्यानामिन्द्रियाणां प्रमाथिनाम्।
यो धीरो धारयेद्रश्मीन्स स्यात्परमसारथिः॥03-202-022॥
ಅಶ್ವಗಳಂತಿರುವ ನಮ್ಮಲ್ಲಿರುವ ಆರು ಇಂದ್ರಿಯಗಳನ್ನು (ಪಂಚೇಂದ್ರಿಯಗಳು ಮತ್ತು ಮನಸ್ಸು) ಯಾರು ತಾಳ್ಮೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೋ ಆ ಧೀರನೇ ಪರಮ ಸಾರಥಿ.
इन्द्रियाणां प्रसृष्टानां हयानामिव वर्त्मसु।
धृतिं कुर्वीत सारथ्ये धृत्या तानि जयेद्ध्रुवम्॥03-202-023॥
ಹೆದ್ದಾರಿಯಲ್ಲಿ ಹೋಗುತ್ತಿರುವ ಕುದುರೆಗಳನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಂಡಿರಬೇಕೋ ಹಾಗೆ ಸಾರಥಿಯು ಧೃತನಾಗಿದ್ದರೆ ಜಯವು ನಿರ್ಧಿಷ್ಟ.
इन्द्रियाणां हि चरतां यन्मनोऽनुविधीयते।
तदस्य हरते बुद्धिं नावं वायुरिवाम्भसि॥03-202-024॥
ಯಾರ ಇಂದ್ರಿಯವು ಮನಸ್ಸಿನ ಮೇಲೆ ಅತಿಯಾದ ನಿಯಂತ್ರಣವನ್ನು ಹಾಕುತ್ತದೆಯೋ ಅಂಥವನ ಬುದ್ಧಿಯು ಸಮುದ್ರದಲ್ಲಿ ಗಾಳಿಗೆ ಸಿಲುಕಿದ ನಾವೆಯಂತೆ ಕಳೆದುಹೋಗುತ್ತದೆ.
येषु विप्रतिपद्यन्ते षट्सु मोहात्फलागमे।
तेष्वध्यवसिताध्यायी विन्दते ध्यानजं फलम्॥03-202-025॥
ಈ ಆರು ಇಂದ್ರಿಯಗಳ ಫಲಗಳ ಆಸೆಯಿಂದ ಜನರು ಮೋಹಿತರಾಗುತ್ತಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವವನು ಧ್ಯಾನದ ಮೂಲಕವೇ ಅವುಗಳ ಫಲವನ್ನು ಅನುಭವಿಸುತ್ತಾನೆ.””
मार्कण्डेय उवाच।
एवं तु सूक्ष्मे कथिते धर्मव्याधेन भारत।
ब्राह्मणः स पुनः सूक्ष्मं पप्रच्छ सुसमाहितः॥03-203-001॥
ಮಾರ್ಕಂಡೇಯನು ಹೇಳಿದನು: “ಭಾರತ! ಈ ರೀತಿ ಸೂಕ್ಷ್ಮವಾದ ವಿಚಾರಗಳನ್ನು ಧರ್ಮವ್ಯಾಧನು ಹೇಳಲು ಬ್ರಾಹ್ಮಣನು ಪುನಃ ಸುಸಮಾಹಿತನಾಗಿ ಸೂಕ್ಷ್ಮ ವಿಷಯದ ಕುರಿತು ಕೇಳಿದನು.
ब्राह्मण उवाच।
सत्त्वस्य रजसश्चैव तमसश्च यथातथम्।
गुणांस्तत्त्वेन मे ब्रूहि यथावदिह पृच्छतः॥03-203-002॥
ಬ್ರಾಹ್ಮಣನು ಹೇಳಿದನು: “ಸತ್ವ, ರಜಸ್ ಮತ್ತು ತಮೋಗುಣಗಳ ತತ್ವಗಳನ್ನು ಯಥಾವತ್ತಾಗಿ ಕೇಳಿದುದಕ್ಕೆ ಇದ್ದಹಾಗೆ ಹೇಳು.”
व्याध उवाच।
हन्त ते कथयिष्यामि यन्मां त्वं परिपृच्छसि।
एषां गुणान्पृथक्त्वेन निबोध गदतो मम॥03-203-003॥
ವ್ಯಾಧನು ಹೇಳಿದನು: “ನೀನು ನನಗೆ ಕೇಳಿದ್ದುದನ್ನು ನಿನಗೆ ಹೇಳುತ್ತೇನೆ. ಈ ಗುಣಗಳ ಕುರಿತು ಒಂದೊಂದಾಗಿ ಹೇಳುತ್ತೇನೆ. ಕೇಳು.
मोहात्मकं तमस्तेषां रज एषां प्रवर्तकम्।
प्रकाशबहुलत्वाच्च सत्त्वं ज्याय इहोच्यते॥03-203-004॥
ಅವುಗಳಲ್ಲಿ ತಮಸ್ಸು ಮೋಹಾತ್ಮಕವು. ಅವುಗಳಲ್ಲಿ ರಜಸ್ಸು ಪ್ರವರ್ತಕ. ಸತ್ವವು ಕತ್ತಲೆಗೆ ಪ್ರಕಾಶವನ್ನು ನೀಡುವುದು. ಆದುದರಿಂದ ಅದನ್ನು ಅತ್ಯುತ್ತಮವೆಂದು ಹೇಳುತ್ತಾರೆ.
अविद्याबहुलो मूढः स्वप्नशीलो विचेतनः।
दुर्दृशीकस्तमोध्वस्तः सक्रोधस्तामसोऽलसः॥03-203-005॥
ಅವಿದ್ಯ, ಬಹಳ ಮೂಢ, ಸ್ವಪ್ನಶೀಲ, ವಿಚೇತನ, ಸೋಮಾರಿ, ಉತ್ಸಾಹವಿಲ್ಲದವನು, ಸಿಟ್ಟು ಮತ್ತು ಸೊಕ್ಕಿಗೆ ಸದಾ ಸಿಲುಕುವವನು ತಾಮಸನೆಂದು ಹೇಳುತ್ತಾರೆ.
प्रवृत्तवाक्यो मन्त्री च योऽनुराग्यभ्यसूयकः।
विवित्समानो विप्रर्षे स्तब्धो मानी स राजसः॥03-203-006॥
ವಿಪ್ರರ್ಷೇ! ಉತ್ತಮ ಮಾತನಾಡುವವನು, ಚೆನ್ನಾಗಿ ಯೋಚಿಸುವ, ಅನುರಾಗವುಳ್ಳ, ಅಸೂಯೆಪಡದ, ಫಲಿತಾಂಶವನ್ನು ಬಯಸಿ ಕಾರ್ಯಶೀಲನಾಗಿರುವ ಮತ್ತು ಸ್ನೇಹಭಾವದಿಂದಿರುವವನು ರಾಜಸನೆಂದು ತಿಳಿಯಬೇಕು.
प्रकाशबहुलो धीरो निर्विवित्सोऽनसूयकः।
अक्रोधनो नरो धीमान्दान्तश्चैव स सात्त्विकः॥03-203-007॥
ಅಚಲನಾಗಿರುವ, ಧೀರನಾಗಿರುವ, ಫಲಿತಾಂಶಕ್ಕೆ ಮಾತ್ರ ಕಾರ್ಯನಿರತನಾಗಿರದ, ತಾಳ್ಮೆಯನ್ನಿಟ್ಟುಕೊಂಡಿರುವ, ಅಸೂಯೆಪಡದ, ಸಿಟ್ಟಿಗೇಳದ, ಧೀಮಾನ್, ನರನು ಸಾತ್ವಿಕ.
सात्त्विकस्त्वथ संबुद्धो लोकवृत्तेन क्लिश्यते।
यदा बुध्यति बोद्धव्यं लोकवृत्तं जुगुप्सते॥03-203-008॥
ಸಾತ್ವಿಕನು ಲೋಕವೃತ್ತಿಯಲ್ಲಿ ಸಿಲುಕಿದಾಗ ಕಷ್ಟವನ್ನು ಅನುಭವಿಸುತ್ತಾನೆ. ತಿಳುವಳಿಕೆಯು ಬಂದಾಗ ಲೋಕವೃತ್ತಿಯ ಕುರಿತು ಜಿಗುಪ್ಸೆಯನ್ನು ತಾಳುತ್ತಾನೆ.
वैराग्यस्य हि रूपं तु पूर्वमेव प्रवर्तते।
मृदुर्भवत्यहंकारः प्रसीदत्यार्जवं च यत्॥03-203-009॥
ವೈರಾಗ್ಯದ ರೂಪವನ್ನು ಈ ಮೊದಲೇ ಹೇಳಿಯಾಗಿದೆ. ಅವನ ಅಹಂಕಾರವು ಕಡಿಮೆಯಾಗುತ್ತದೆ. ಮತ್ತು ಆರ್ಜವವು ಹೆಚ್ಚಾಗುತ್ತದೆ.
ततोऽस्य सर्वद्वंद्वानि प्रशाम्यन्ति परस्परम्।
न चास्य संयमो नाम क्वचिद्भवति कश्चन॥03-203-010॥
ಆಗ ಅವನ ಎಲ್ಲ ದ್ವಂದ್ವಗಳೂ ಪರಸ್ಪರ ನಾಶಗೊಳ್ಳುತ್ತವೆ. ಆಗ ಅವನಿಗೆ ಸಂಯಮ ಎನ್ನುವುದು ಎಂದೂ ಬೇಕಾಗುವುದಿಲ್ಲ.
शूद्रयोनौ हि जातस्य सद्गुणानुपतिष्ठतः।
वैश्यत्वं भवति ब्रह्मन्क्षत्रियत्वं तथैव च॥03-203-011॥
ಬ್ರಹ್ಮನ್! ಶೂದ್ರಯೋನಿಯಲ್ಲಿ ಹುಟ್ಟಿದ್ದರೂ ಕೂಡ ಸದ್ಗುಣಗಳಿದ್ದರೆ ವೈಶ್ಯತ್ವವನ್ನು ಪಡೆಯಬಹುದು ಅಥವಾ ಕ್ಷತ್ರಿಯತ್ವವನ್ನೂ ಪಡೆಯಬಹುದು.
आर्जवे वर्तमानस्य ब्राह्मण्यमभिजायते।
गुणास्ते कीर्तिताः सर्वे किं भूयः श्रोतुमिच्छसि॥03-203-012॥
ನಡತೆಯಲ್ಲಿ ಆರ್ಜವವಿದ್ದರೆ ಬ್ರಾಹ್ಮಣ್ಯತ್ವವನ್ನೂ ಪಡೆಯಬಹುದು. ಗುಣಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
ब्राह्मण उवाच।
पार्थिवं धातुमासाद्य शारीरोऽग्निः कथं भवेत्।
अवकाशविशेषेण कथं वर्तयतेऽनिलः॥03-203-013॥
ಬ್ರಾಹ್ಮಣನು ಹೇಳಿದನು: “ಪಾರ್ಥಿವವು ಧಾತುವನ್ನು ಸೇರಿ ಹೇಗೆ ಶರೀರೋಗ್ನಿಯಾಗುತ್ತದೆ? ಗಾಳಿಯು ಅವಕಾಶ ವಿಶೇಷದಿಂದ ಜೀವಿಯನ್ನು ಹೇಗೆ ನಡೆಸುತ್ತದೆ?””
मार्कण्डेय उवाच।
प्रश्नमेतं समुद्दिष्टं ब्राह्मणेन युधिष्ठिर।
व्याधः स कथयामास ब्राह्मणाय महात्मने॥03-203-014॥
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣನಿಟ್ಟ ಈ ಪ್ರಶ್ನೆಗೆ ವ್ಯಾಧನು ಮಹಾತ್ಮ ಬ್ರಾಹ್ಮಣನಿಗೆ ಹೇಳಿದನು.
व्याध उवाच।
मूर्धानमाश्रितो वह्निः शरीरं परिपालयन्।
प्राणो मूर्धनि चाग्नौ च वर्तमानो विचेष्टते।
भूतं भव्यं भविष्यच्च सर्वं प्राणे प्रतिष्ठितम्॥03-203-015॥
ವ್ಯಾಧನು ಹೇಳಿದನು: “ಮೂರ್ಧನಿಯಲ್ಲಿ ಆಶ್ರಿತನಾಗಿರುವ ವಹ್ನಿಯು ಶರೀರವನ್ನು ಪರಿಪಾಲಿಸುತ್ತಾನೆ. ಪ್ರಾಣ ಮತ್ತು ಮೂರ್ಧನಿಗಳಲ್ಲಿರುವ ಅಗ್ನಿಗಳೆರಡೂ ಕ್ರಿಯೆಗಳನ್ನುಂಟುಮಾಡುತ್ತವೆ. ಭೂತ, ವರ್ತಮಾನ, ಭವಿಷ್ಯಗಳೆಲ್ಲವುಗಳಲ್ಲಿ ಪ್ರಾಣವು ಪ್ರತಿಷ್ಠಿತವಾಗಿರುತ್ತದೆ.
श्रेष्ठं तदेव भूतानां ब्रह्मज्योतिरुपास्महे।
स जन्तुः सर्वभूतात्मा पुरुषः स सनातनः।
मनो बुद्धिरहंकारो भूतानां विषयश्च सः॥03-203-016॥
ಇದೇ ಜೀವಿಗಳಿಗೆ ಶ್ರೇಷ್ಠವಾದುದು; ಬ್ರಹ್ಮಜ್ಯೋತಿಯೆಂದು ಉಪಾಸನೆಗೊಳ್ಳುವುದು. ಇದೇ ಎಲ್ಲ ಜಂತುಗಳ ಭೂತಾತ್ಮ, ಪುರುಷ, ಸನಾತನ. ಭೂತಗಳ ಮನಸ್ಸು, ಬುದ್ಧಿ, ಅಹಂಕಾರ ಮತ್ತು ವಿಷಯ.
एवं त्विह स सर्वत्र प्राणेन परिपाल्यते।
पृष्ठतस्तु समानेन स्वां स्वां गतिमुपाश्रितः॥03-203-017॥
ಇಲ್ಲಿದ್ದುಕೊಂಡು ಪ್ರಾಣವು ಎಲ್ಲಕಡೆಯಿಂದಲೂ ಪರಿಪಾಲಿಸುತ್ತದೆ. ಮುಂದೆ ಅದು ಸಮಾನವಾಗಿ ಬೇರೆ ಬೇರೆ ದಾರಿಗಳಲ್ಲಿ ಮುಂದುವರೆಯುತ್ತದೆ.
बस्तिमूले गुदे चैव पावकः समुपाश्रितः।
वहन्मूत्रं पुरीषं चाप्यपानः परिवर्तते॥03-203-018॥
ಹೊಟ್ಟೆಯಲ್ಲಿ ಪಾವಕನೊಂದಿರುವ ಇದು (ಈ ಪ್ರಾಣವು) ಅಪಾನವಾಗಿ ಪರಿವರ್ತನೆಗೊಂಡು ಪಚನಮಾಡಿ ಮೂತ್ರ ಪುರೀಷಗಳನ್ನು ಕೊಂಡೊಯ್ದು ಗುದದಲ್ಲಿ ಹೊರಬರುತ್ತದೆ.
प्रयत्ने कर्मणि बले य एकस्त्रिषु वर्तते।
उदान इति तं प्राहुरध्यात्मविदुषो जनाः॥03-203-019॥
ಇದೇ ಪ್ರಯತ್ನ, ಕೆಲಸ ಮತ್ತು ಬಲ ಈ ಮೂರರಲ್ಲಿ ಒಂದಾಗಿರುತ್ತದೆ. ಇದನ್ನು ಉದಾನ ಎಂದು ಆಧ್ಯಾತ್ಮ ವಿದುಷೀ ಜನರು ಹೇಳುತ್ತಾರೆ.
संधौ संधौ संनिविष्टः सर्वेष्वपि तथानिलः।
शरीरेषु मनुष्याणां व्यान इत्युपदिष्यते॥03-203-020॥
ಮನುಷ್ಯರ ಶರೀರಗಳ ಎಲ್ಲ ಸಂಧಿ ಸಂಧಿಗಳಲ್ಲಿ ಸಮಾವೇಶಗೊಂಡು ಇರುವ ಅನಿಲಕ್ಕೆ ವ್ಯಾನವೆಂದು ಕರೆಯುತ್ತಾರೆ.
धातुष्वग्निस्तु विततः स तु वायुसमीरितः।
रसान्धातूंश्च दोषांश्च वर्तयन्परिधावति॥03-203-021॥
ಧಾತುಗಳಲ್ಲಿರುವ ಅಗ್ನಿ ಮತ್ತು ಒಳಗಿರುವ ವಾಯು ಸೇರಿಕೊಂಡು ನಮ್ಮ ಆಹಾರವನ್ನು, ಧಾತುಗಳನ್ನು, ಮತ್ತು ದೋಷಗಳನ್ನು ಪರಿವರ್ತಿಸುತ್ತವೆ.
प्राणानां संनिपातात्तु संनिपातः प्रजायते।
ऊष्मा चाग्निरिति ज्ञेयो योऽन्नं पचति देहिनाम्॥03-203-022॥
ಈ ಪ್ರಾಣಗಳ ಮಿಲನದಿಂದ ಪ್ರತಿಕ್ರಿಯೆಗಳುಂಟಾಗಿ ಅದರಿಂದ ಉಂಟಾದ ಒಳಗಿನ ಅಗ್ನಿಯೇ ನಮ್ಮ ದೇಹದ ಅನ್ನವನ್ನು ಪಚನಗೊಳಿಸುತ್ತದೆ.
अपानोदानयोर्मध्ये प्राणव्यानौ समाहितौ।
समन्वितस्त्वधिष्ठानं सम्यक्पचति पावकः॥03-203-023॥
ಅಪಾನ ಉದಾನಗಳ ಮಧ್ಯೆ ಪ್ರಾಣ ವ್ಯಾನಗಳು ಸೇರಿಕೊಂಡಿವೆ. ಅವುಗಳ ಸಮನ್ವಯದಿಂದುಂಟಾದ ಅಗ್ನಿಯು ಚೆನ್ನಾಗಿ ಪಚನ ಮಾಡಿಸುತ್ತದೆ.
तस्यापि पायुपर्यन्तस्तथा स्याद्गुदसंज्ञितः।
स्रोतांसि तस्माज्जायन्ते सर्वप्राणेषु देहिनाम्॥03-203-024॥
ಅದರ ಸ್ಥಾನದಿಂದ ಗುದದ ವರೆಗಿನ ಭಾಗವನ್ನು ಅಪಾನವೆಂದು ಕರೆಯುತ್ತಾರೆ. ಅದರಿಂದ ದೇಹಿಗಳ ಸರ್ವಪ್ರಾಣಗಳು ಹುಟ್ಟುತ್ತವೆ.
अग्निवेगवहः प्राणो गुदान्ते प्रतिहन्यते।
स ऊर्ध्वमागम्य पुनः समुत्क्षिपति पावकम्॥03-203-025॥
ಅಗ್ನಿವೇಗದಿಂದ ಹರಿಯುವ ಪ್ರಾಣವು ಗುದದ ಕೊನೆಯಲ್ಲಿ ಹಿಂದಿರುಗುತ್ತದೆ. ಅದು ಮೇಲೆ ಬಂದು ಪುನಃ ಅಗ್ನಿಯನ್ನು ಉರಿಸಿ ಎಬ್ಬಿಸುತ್ತದೆ.
पक्वाशयस्त्वधो नाभ्या ऊर्ध्वमामाशयः स्थितः।
नाभिमध्ये शरीरस्य प्राणाः सर्वे प्रतिष्ठिताः॥03-203-026॥
ನಾಭಿಯ ಮೇಲೆ ಪಚನವಾಗದ ಆಹಾರದ ಭಾಗವಿದೆ. ಕೆಳಗಿರುವುದು ಪಚನವಾದ ಆಹಾರದ ಭಾಗ. ನಾಭಿಮಧ್ಯದಲ್ಲಿ ಶರೀರದ ಎಲ್ಲ ಪ್ರಾಣಗಳೂ ಪ್ರತಿಷ್ಠಿತವಾಗಿವೆ.
प्रवृत्ता हृदयात्सर्वास्तिर्यगूर्ध्वमधस्तथा।
वहन्त्यन्नरसान्नाड्यो दश प्राणप्रचोदिताः॥03-203-027॥
ಹೃದಯದಿಂದ ಹೊರಟ ನಾಡಿಗಳು ಮೇಲೆ ಕೆಳಗೆ ಮತ್ತು ಅಡ್ಡವಾಗಿ ಅನ್ನರಸಗಳನ್ನು ಹತ್ತು ಪ್ರಾಣಗಳಿಂದ[1] ಪ್ರಚೋದಿತವಾಗಿ ಕೊಂಡೊಯ್ಯುತ್ತವೆ.
योगिनामेष मार्गस्तु येन गच्छन्ति तत्परम्।
जितक्लमासना धीरा मूर्धन्यात्मानमादधुः।
एवं सर्वेषु विततौ प्राणापानौ हि देहिषु॥03-203-028॥
ಮೂರ್ಧನಿಯಲ್ಲಿರುವ ಆತ್ಮದಿಂದ ಎಲ್ಲವನ್ನೂ ಸಮನಾಗಿ ಕಾಣುವ, ದುಃಖಗಳನ್ನು ಜಯಿಸಿದ, ಧೀರ ಯೋಗಿಗಳು ಈ ಮಾರ್ಗದಲ್ಲಿಯೇ ಆ ತತ್ಪರವನ್ನು ಸೇರುತ್ತಾರೆ. ಹೀಗೆ ಎಲ್ಲ ದೇಹಿಗಳಲ್ಲಿ ಪ್ರಾಣಾಪಾನಗಳು ಸಂಚರಿಸುತ್ತಿರುತ್ತವೆ.
एकादशविकारात्मा कलासंभारसंभृतः।
मूर्तिमन्तं हि तं विद्धि नित्यं कर्मजितात्मकम्॥03-203-029॥
ಹನ್ನೊಂದು (ಪ್ರಾಣ, ಇಂದ್ರಿಯ ಮೊದಲಾದ) ವಿಕಾರಗಳನ್ನು ಹೊಂದಿ, ಕಲಾಸಂಭಾರಸಂಭೃತನಾಗಿ[2] ಕರ್ಮಜಿತಾತ್ಮಕನು ಮೂರ್ತಿಮಂತನಾಗಿ ನಿತ್ಯವೂ ಇರುತ್ತಾನೆಂದು ತಿಳಿ.
तस्मिन्यः संस्थितो ह्यग्निर्नित्यं स्थाल्यामिवाहितः।
आत्मानं तं विजानीहि नित्यं योगजितात्मकम्॥03-203-030॥
ಪಾತ್ರೆಯಲ್ಲಿ ಇಡಲ್ಪಟ್ಟ ಅಗ್ನಿಯಂತೆ ಈ ಶರೀರಮಧ್ಯದಲ್ಲಿ ಜೀವವೆಂಬ ಅಗ್ನಿಯು ಉರಿಯುತ್ತಿರುತ್ತದೆ. ಯೋಗಜಿತಾತ್ಮಕನಾದ ಅವನನ್ನೇ ನಿತ್ಯ-ಆತ್ಮನೆಂದು ತಿಳಿ.
देवो यः संस्थितस्तस्मिन्नब्बिन्दुरिव पुष्करे।
क्षेत्रज्ञं तं विजानीहि नित्यं त्यागजितात्मकम्॥03-203-031॥
ದೇಹದಲ್ಲಿ ಸಂಸ್ಥಿತವಾಗಿರುವ ಆ ದೇವನು ತಾವರೆಯ ಮೇಲಿರುವ ನೀರಿನ ಬಿಂದುವಿನಂತೆ. ಅವನೇ ತ್ಯಾಗಜಿತಾತ್ಮಕನಾದ ಆ ನಿತ್ಯ-ಕ್ಷೇತ್ರಜ್ಞನೆಂದು ತಿಳಿ.
जीवात्मकानि जानीहि रजः सत्त्वं तमस्तथा।
जीवमात्मगुणं विद्धि तथात्मानं परात्मकम्॥03-203-032॥
ರಜ, ಸತ್ವ ಮತ್ತು ತಮಗಳಿಗೂ ಇವನು ಜೀವಾತ್ಮಕನೆಂದು ತಿಳಿ. ಜೀವವು ಆತ್ಮಗುಣವೆಂದೂ ಆತ್ಮವು ಪರಾತ್ಮಕವೆಂದೂ ತಿಳಿ.
सचेतनं जीवगुणं वदन्ति; स चेष्टते चेष्टयते च सर्वम्।
ततः परं क्षेत्रविदो वदन्ति; प्राकल्पयद्यो भुवनानि सप्त॥03-203-033॥
ಸಚೇತನವು ಜೀವಗುಣವೆಂದು ಹೇಳುತ್ತಾರೆ. ಅದು ಎಲ್ಲವನ್ನೂ ಚೇಷ್ಟೆಗೊಳಪಡಿಸುತ್ತದೆ ಮತ್ತು ಚೇಷ್ಟೆಗೊಳಗಾಗುತ್ತದೆ. ಅದರ ನಂತರದ್ದನ್ನು, ಈ ಏಳು ಭುವನಗಳನ್ನೂ ನಡೆಸುವ ಕ್ಷೇತ್ರವಿದುವೆಂದು ಹೇಳುತ್ತಾರೆ.
एवं सर्वेषु भूतेषु भूतात्मा न प्रकाशते।
दृश्यते त्वग्र्यया बुद्ध्या सूक्ष्मया ज्ञानवेदिभिः॥03-203-034॥
ಹೀಗೆ ಎಲ್ಲ ಭೂತಗಳಲ್ಲಿ ಭೂತಾತ್ಮನು ಪ್ರಕಾಶಿಸುತ್ತಾನೆ. ಜ್ಞಾನವೇದಿಗಳು ಅವನನ್ನು ಸೂಕ್ಷ್ಮ ಬುದ್ಧಿಯಿಂದ ನೋಡುತ್ತಾರೆ.
चित्तस्य हि प्रसादेन हन्ति कर्म शुभाशुभम्।
प्रसन्नात्मात्मनि स्थित्वा सुखमानन्त्यमश्नुते॥03-203-035॥
ಚಿತ್ತದ ಪ್ರಸಾದದಿಂದಲೇ ಶುಭಾಶುಭಕರ್ಮಗಳನ್ನು ನಾಶಗೊಳಿಸಬಹುದು. ಆತ್ಮವನ್ನು ಆತ್ಮನಲ್ಲಿ ಪ್ರಸನ್ನವಾಗಿಟ್ಟುಕೊಂಡರೆ ಅನಂತ ಸುಖವು ದೊರೆಯುತ್ತದೆ.
लक्षणं तु प्रसादस्य यथा तृप्तः सुखं स्वपेत्।
निवाते वा यथा दीपो दीप्येत्कुशलदीपितः॥03-203-036॥
ಆ ಪ್ರಸಾದದ ಲಕ್ಷಣವನ್ನು ಸುಖವಾಗಿ ನಿದ್ರಿಸುವ ತೃಪ್ತನಿಗೂ ಕುಶಲತೆಯಿಂದ ಬತ್ತಿಯ ಕರಿಯನ್ನು ಉದುರಿಸಿ ಉರಿಸುವ ದೀಪದ ಬೆಳಕಿಗೂ ಹೋಲಿಸಬಹುದು.
पूर्वरात्रे परे चैव युञ्जानः सततं मनः।
लघ्वाहारो विशुद्धात्मा पश्यन्नात्मानमात्मनि॥03-203-037॥
ಸಾಯಂಕಾಲ ಮುಂಜಾನೆಯ ಸಮಯಗಳಲ್ಲಿ ಸತತವಾಗಿ ಮನಸ್ಸನ್ನಿಟ್ಟು, ಲಘು‌ ಆಹಾರದಲ್ಲಿದ್ದುಕೊಂಡ ವಿಶುದ್ಧಾತ್ಮನು ತನ್ನಲ್ಲಿಯೇ ಆತ್ಮನನ್ನು ಕಂಡುಕೊಳ್ಳುತ್ತಾನೆ.
प्रदीप्तेनेव दीपेन मनोदीपेन पश्यति।
दृष्ट्वात्मानं निरात्मानं तदा स तु विमुच्यते॥03-203-038॥
ಚೆನ್ನಾಗಿ ಉರಿಯುತ್ತಿರುವ ದೀಪದಂತಿರುವ ಮನೋದೀಪದಲ್ಲಿಯೇ ಅವನು ನಿರಾತ್ಮನಾದ ಆತ್ಮನನ್ನು ಕಾಣುತ್ತಾನೆ ಮತ್ತು ಮುಕ್ತಿಯನ್ನು ಹೊಂದುತ್ತಾನೆ.
सर्वोपायैस्तु लोभस्य क्रोधस्य च विनिग्रहः।
एतत्पवित्रं यज्ञानां तपो वै संक्रमो मतः॥03-203-039॥
ಸರ್ವೋಪಾಯಗಳಿಂದ ಲೋಭ ಕ್ರೋಧಗಳನ್ನು ನಿಗ್ರಹಿಸಬೇಕು. ಏಕೆಂದರೆ ಇದು ದಾಟಿಸಬಲ್ಲದೆಂದು ತಿಳಿಯಲ್ಪಟ್ಟ ಯಜ್ಞಗಳಲ್ಲಿಯೇ ಪವಿತ್ರವಾದ ತಪಸ್ಸು.
नित्यं क्रोधात्तपो रक्षेच्छ्रियं रक्षेत मत्सरात्।
विद्यां मानापमानाभ्यामात्मानं तु प्रमादतः॥03-203-040॥
ನಿತ್ಯವೂ ತಪಸ್ಸನ್ನು ಕ್ರೋಧದಿಂದ, ಸಂಪತ್ತನ್ನು ಮತ್ಸರದಿಂದ, ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ಆತ್ಮವನ್ನು ಭ್ರಮೆಯಿಂದ ರಕ್ಷಿಸಿಕೊಳ್ಳಬೇಕು.
आनृशंस्यं परो धर्मः क्षमा च परमं बलम्।
आत्मज्ञानं परं ज्ञानं परं सत्यव्रतं व्रतम्॥03-203-041॥
ಸುಳ್ಳು ಹೇಳದೇ ಇರುವುದು ಪರಮ ಧರ್ಮ, ಕ್ಷಮೆಯು ಪರಮ ಬಲ, ಆತ್ಮಜ್ಞಾನವು ಪರಮಜ್ಞಾನ ಮತ್ತು ಸತ್ಯನಡತೆಯು ಪರಮ ವ್ರತ.
सत्यस्य वचनं श्रेयः सत्यं ज्ञानं हितं भवेत्।
यद्भूतहितमत्यन्तं तद्वै सत्यं परं मतम्॥03-203-042॥
ಸತ್ಯವಚನವು ಶ್ರೇಯಸ್ಕರವು; ಸತ್ಯ ಜ್ಞಾನವು ಹಿತವೆನಿಸುತ್ತದೆ. ಆದರೆ ಹೆಚ್ಚಿನ ಭೂತಗಳಿಗೆ ಹಿತವಾದುದೇ ಪರಮ ಸತ್ಯವೆಂದು ಮತವಿದೆ.
यस्य सर्वे समारम्भाः निराशीर्बन्धनाः सदा।
त्यागे यस्य हुतं सर्वं स त्यागी स च बुद्धिमान्॥03-203-043॥
ಯಾರ ಎಲ್ಲ ಕಾರ್ಯಗಳೂ ಆಸೆಗಳಿಲ್ಲದೇ ಬಂಧನಗಳಿಲ್ಲದೇ ಸದಾ ಇರುತ್ತವೆಯೋ ಮತ್ತು ಎಲ್ಲವನ್ನೂ ಯಾರು ತ್ಯಾಗದಿಂದ ತೊರೆದಿದ್ದಾನೋ ಅವನೇ ತ್ಯಾಗೀ ಮತ್ತು ಬುದ್ಧಿವಂತ.
यतो न गुरुरप्येनं च्यावयेदुपपादयन्।
तं विद्याद्ब्रह्मणो योगं वियोगं योगसंज्ञितम्॥03-203-044॥
ಬ್ರಹ್ಮನೊಡನೆ ಸೇರುವ ವಿದ್ಯೆಯನ್ನು ಗುರುವೂ ಕೂಡ ನೀಡಲು ಸಾಧ್ಯವಿಲ್ಲ. ಆದುದರಿಂದ ವಿಯೋಗವೇ ಯೋಗವೆಂದು ತಿಳಿಯಲ್ಪಟ್ಟಿದೆ.
न हिंस्यात्सर्वभूतानि मैत्रायणगतश्चरेत्।
नेदं जीवितमासाद्य वैरं कुर्वीत केनचित्॥03-203-045॥
ಎಲ್ಲ ಭೂತಗಳ ಮೇಲೂ ಹಿಂಸೆಯನ್ನು ಮಾಡಬಾರದು; ಎಲ್ಲದರೊಡನೆ ಮಿತ್ರತ್ವದಿಂದ ನಡೆದುಕೊಳ್ಳಬೇಕು. ಈ ಜೀವಿತದಲ್ಲಿ ಯಾರೊಂದಿಗೂ ವೈರತ್ವವನ್ನು ಸಾಧಿಸಬಾರದು.
आकिंचन्यं सुसंतोषो निराशित्वमचापलम्।
एतदेव परं ज्ञानं सदात्मज्ञानमुत्तमम्॥03-203-046॥
ಅನ್ಯರನ್ನು ಕೀಳಾಗಿ ಕಾಣದೇ ಇರುವುದು, ಸಂತೋಷವಾಗಿರುವುದು, ಆಸೆಗಳನ್ನಿಟ್ಟುಕೊಳ್ಳದೇ ಇರುವುದು, ಚಪಲನಾಗದೇ ಇರುವುದು ಇವುಗಳಿಂದಲೇ ಪರಮ ಜ್ಞಾನವನ್ನು ಪಡೆಯಬಹುದು. ಸದಾತ್ಮಜ್ಞಾನವೇ ಉತ್ತಮವಾದುದು.
परिग्रहं परित्यज्य भव बुद्ध्या यतव्रतः।
अशोकं स्थानमातिष्ठेन्निश्चलं प्रेत्य चेह च॥03-203-047॥
ಹಿಡಿದಿಟ್ಟುಕೊಂಡಿದ್ದುದನ್ನು ಬಿಟ್ಟು ಬುದ್ಧಿಯಿಂದ ಯತವ್ರತನಾಗಿದ್ದರೆ, ಸ್ಥಾನದಲ್ಲಿ ನಿಶ್ಚಲನಾಗಿದ್ದರೆ ಇಲ್ಲಿಯೂ ಮತ್ತು ನಂತರದಲ್ಲಿಯೂ ಶೋಕವಿರುವುದಿಲ್ಲ.
तपोनित्येन दान्तेन मुनिना संयतात्मना।
अजितं जेतुकामेन भाव्यं सङ्गेष्वसङ्गिना॥03-203-048॥
ಗಳಿಸಲಾಗದ ಭಾವವನ್ನು ಗಳಿಸಲು ಬಯಸುವ ಮುನಿಯು ನಿತ್ಯವೂ ತಪೋನಿರತನಾಗಿದ್ದು, ತಾಳ್ಮೆ, ಆತ್ಮನಲ್ಲಿ ಸಮತೆ ಮತ್ತು ಸಂಗಗಳಲ್ಲಿ ಅಸಂಗನಾಗಿರಬೇಕು.
गुणागुणमनासङ्गमेककार्यमनन्तरम्।
एतद्ब्राह्मण ते वृत्तमाहुरेकपदं सुखम्॥03-203-049॥
ಬ್ರಾಹ್ಮಣ! ಅಂಥಹವನಲ್ಲಿ ಗುಣಗಳು ಅಗುಣಗಳಾಗುತ್ತವೆ. ಅವನು ಅಸಂಗನಾಗಿರುತ್ತಾನೆ. ಅವನ ಈ ನಡತೆಯೇ ಸುಖಕ್ಕಿರುವ ಒಂದೇ ದಾರಿಯೆಂದು ಹೇಳುತ್ತಾರೆ.
परित्यजति यो दुःखं सुखं चाप्युभयं नरः।
ब्रह्म प्राप्नोति सोऽत्यन्तमसङ्गेन च गच्छति॥03-203-050॥
ದುಃಖ ಸುಖಗಳೆರಡನ್ನೂ ಯಾರು ತ್ಯಜಿಸುತ್ತಾನೋ ಅವನು ಬ್ರಹ್ಮನನ್ನು ಪಡೆಯುತ್ತಾನೆ ಮತ್ತು ಅತ್ಯಂತ ಅಸಂಗತ್ವದಿಂದ ನಡೆಯುತ್ತಾನೆ.
यथाश्रुतमिदं सर्वं समासेन द्विजोत्तम।
एतत्ते सर्वमाख्यातं किं भूयः श्रोतुमिच्छसि॥03-203-051॥
ದ್ವಿಜೋತ್ತಮ! ನಾನು ಕೇಳಿದುದೆಲ್ಲವನ್ನೂ ನಿನಗೆ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇನ್ನೂ ಏನನ್ನು ಕೇಳ ಬಯಸುತ್ತೀಯೆ?””
मार्कण्डेय उवाच।
एवं संकथिते कृत्स्ने मोक्षधर्मे युधिष्ठिर।
दृढं प्रीतमना विप्रो धर्मव्याधमुवाच ह॥03-204-001॥
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಈ ರೀತಿ ಮೋಕ್ಷಧರ್ಮದ ಕುರಿತು ವಿವರಿಸಿ ಹೇಳಲು ನಿಶ್ಚಯವಾಗಿಯೂ ಸಂತೋಷಗೊಂಡ ವಿಪ್ರನು ಧರ್ಮವ್ಯಾಧನಿಗೆ ಹೇಳಿದನು:
न्याययुक्तमिदं सर्वं भवता परिकीर्तितम्।
न तेऽस्त्यविदितं किंचिद्धर्मेष्विह हि दृश्यते॥03-204-002॥
“ನೀನು ಹೇಳಿದುದೆಲ್ಲವೂ ನ್ಯಾಯಯುಕ್ತವಾಗಿವೆ. ಧರ್ಮದ ಕುರಿತು ನಿನಗೆ ತಿಳಿಯದೇ ಇರುವುದು ಏನೂ ಇಲ್ಲವೆಂದು ಕಾಣುತ್ತದೆ.”
व्याध उवाच।
प्रत्यक्षं मम यो धर्मस्तं पश्य द्विजसत्तम।
येन सिद्धिरियं प्राप्ता मया ब्राह्मणपुंगव॥03-204-003॥
ವ್ಯಾಧನು ಹೇಳಿದನು: “ದ್ವಿಜಸತ್ತಮ! ಬ್ರಾಹ್ಮಣ ಪುಂಗವ! ನನ್ನ ಧರ್ಮವೇನೆನ್ನುವುದನ್ನು ಮತ್ತು ಯಾವುದರಿಂದ ನಾನು ಈ ಸಿದ್ಧಿಯನ್ನು ಪಡೆದಿದ್ದೇನೆ ಎನ್ನುವುದನ್ನು ನೀನು ಪ್ರತ್ಯಕ್ಷವಾಗಿ ನೋಡು!
उत्तिष्ठ भगवन्क्षिप्रं प्रविश्याभ्यन्तरं गृहम्।
द्रष्टुमर्हसि धर्मज्ञ मातरं पितरं च मे॥03-204-004॥
ಭಗವನ್! ಧರ್ಮಜ್ಞ! ಕೂಡಲೇ ಏಳು! ಮನೆಯ ಒಳಗೆ ಪ್ರವೇಶಿಸು. ನನ್ನ ತಾಯಿ-ತಂದೆಯರನ್ನು ನೀನು ನೋಡಬೇಕು.””
मार्कण्डेय उवाच।
इत्युक्तः स प्रविश्याथ ददर्श परमार्चितम्।
सौधं हृद्यं चतुःशालमतीव च मनोहरम्॥03-204-005॥
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಲು ಅವನು ಒಳಗೆ ಪ್ರವೇಶಿಸಿ ಸುಂದರವಾದ ಮನೆಯನ್ನು ನೋಡಿದನು. ಅದು ನಾಲ್ಕು ಕೋಣೆಗಳಿಂದ ಕೂಡಿತ್ತು. ಅತೀವ ಮನೋಹರವಾಗಿತ್ತು.
देवतागृहसंकाशं दैवतैश्च सुपूजितम्।
शयनासनसंबाधं गन्धैश्च परमैर्युतम्॥03-204-006॥
ದೇವತೆಗಳಿಂದ ಸುಪೂಜಿತವಾದ ದೇವತೆಗಳ ಮನೆಯಂತಿದ್ದ ಅದು ಸುಂದರ ಆಸನ ಹಾಸಿಗೆಗಳಿಂದ ಕೂಡಿತ್ತು. ಪರಮ ಸುಗಂಧದಿಂದ ಸೂಸುತ್ತಿತ್ತು.
तत्र शुक्लाम्बरधरौ पितरावस्य पूजितौ।
कृताहारौ सुतुष्टौ तावुपविष्टौ वरासने।
धर्मव्याधस्तु तौ दृष्ट्वा पादेषु शिरसापतत्॥03-204-007॥
ಅಲ್ಲಿ ಬಿಳಿಯ ವಸ್ತ್ರಗಳನ್ನು ಧರಿಸಿದ್ದ ಸುಪೂಜಿತರಾದ, ಊಟಮಾಡಿ ತುಷ್ಟರಾಗಿ ವರಾಸನದಲ್ಲಿ ಕುಳಿತಿದ್ದ ಅವನ ತಂದೆತಾಯಿಯರನ್ನು ಧರ್ಮವ್ಯಾಧನು ನೋಡಿ ಅವರ ಪಾದಗಳಲ್ಲಿ ತನ್ನ ಶಿರವನ್ನಿಟ್ಟನು.
वृद्धावूचतुः।
उत्तिष्ठोत्तिष्ठ धर्मज्ञ धर्मस्त्वामभिरक्षतु।
प्रीतौ स्वस्तव शौचेन दीर्घमायुरवाप्नुहि।
सत्पुत्रेण त्वया पुत्र नित्यकालं सुपूजितौ॥03-204-008॥
ವೃದ್ಧರು ಹೇಳಿದರು: “ಧರ್ಮಜ್ಞ! ಮೇಲೇಳು! ಧರ್ಮವು ನಿನ್ನನ್ನು ರಕ್ಷಿಸಲಿ. ನಿನ್ನ ಶುಚಿತ್ವದಿಂದ ಪ್ರೀತರಾಗಿದ್ದೇವೆ. ದೀರ್ಘ ಆಯುಸ್ಸನ್ನು ಹೊಂದುತ್ತೀಯೆ. ಪುತ್ರ! ಸತ್ಪುತ್ರನಾದ ನಿನ್ನಿಂದ ನಿತ್ಯಕಾಲವೂ ನಾವು ಸುಪೂಜಿತರಾಗಿದ್ದೇವೆ.
न तेऽन्यद्दैवतं किंचिद्दैवतेष्वपि वर्तते।
प्रयतत्वाद्द्विजातीनां दमेनासि समन्वितः॥03-204-009॥
ದೇವತೆಗಳಲ್ಲಿಯೂ ಕೂಡ ನಿನಗೆ ಅನ್ಯ ದೇವತೆಗಳಿಲ್ಲ. ಪ್ರಯತ್ನಪಟ್ಟು ನೀನು ದ್ವಿಜಾತಿಯವರ ದಮಗಳಿಂದ ಸಮನ್ವಿತನಾಗಿದ್ದೀಯೆ.
पितुः पितामहा ये च तथैव प्रपितामहाः।
प्रीतास्ते सततं पुत्र दमेनावां च पूजया॥03-204-010॥
ಪುತ್ರ! ನಿನ್ನ ಈ ದಮ ಮತ್ತು ಪೂಜನೆಯಿಂದ ಪಿತ ಪಿತಾಮಹರು ಮತ್ತು ಪ್ರಪಿತಾಮಹರೂ ಪ್ರೀತರಾಗಿದ್ದಾರೆ.
मनसा कर्मणा वाचा शुश्रूषा नैव हीयते।
न चान्या वितथा बुद्धिर्दृश्यते सांप्रतं तव॥03-204-011॥
ಮನಸಾ, ಕರ್ಮಣಾ, ವಾಚಾ ನೀನು ನಮ್ಮ ಶುಶ್ರೂಷೆಯನ್ನು ಕಡೆಗಣಿಸಿಲ್ಲ. ಈಗಲೂ ಕೂಡ ನಿನ್ನ ಬುದ್ಧಿಯಲ್ಲಿ ಬೇರೆ ಏನೂ ಕಾಣುತ್ತಿಲ್ಲವೆಂದು ನಮಗನ್ನಿಸುತ್ತದೆ.
जामदग्न्येन रामेण यथा वृद्धौ सुपूजितौ।
तथा त्वया कृतं सर्वं तद्विशिष्टं च पुत्रक॥03-204-012॥
ಪುತ್ರಕ! ಜಾಮದಗ್ನ್ಯ ರಾಮನಿಂದ ವೃದ್ಧರು ಹೇಗೆ ಸುಪೂಜಿತರಾಗಿದ್ದರೋ ಹಾಗೆ ನೀನೂ ಕೂಡ ಎಲ್ಲ ವಿಶಿಷ್ಟಗಳನ್ನೂ ಮಾಡಿದ್ದೀಯೆ.””
मार्कण्डेय उवाच।
ततस्तं ब्राह्मणं ताभ्यां धर्मव्याधो न्यवेदयत्।
तौ स्वागतेन तं विप्रमर्चयामासतुस्तदा॥03-204-013॥
ಮಾರ್ಕಂಡೇಯನು ಹೇಳಿದನು: “ಆಗ ಧರ್ಮವ್ಯಾಧನು ಆ ಬ್ರಾಹ್ಮಣನನ್ನು ಅವರಿಬ್ಬರಿಗೆ ಪರಿಚಯಿಸಿದನು. ಅವರಿಬ್ಬರೂ ಅವನನ್ನು ಸ್ವಾಗತಿಸಲು ವಿಪ್ರನೂ ಅವರನ್ನು ಗೌರವಿಸಿದನು.
प्रतिगृह्य च तां पूजां द्विजः पप्रच्छ तावुभौ।
सपुत्राभ्यां सभृत्याभ्यां कच्चिद्वां कुशलं गृहे।
अनामयं च वां कच्चित्सदैवेह शरीरयोः॥03-204-014॥
ಅವರ ಪೂಜೆಯನ್ನು ಸ್ವೀಕರಿಸಿ ದ್ವಿಜನು ಅವರಿಬ್ಬರನ್ನೂ ಪುತ್ರರೊಂದಿಗೆ, ಸೇವಕರೊಂದಿಗೆ ಮತ್ತು ಮನೆಯಲ್ಲಿ ಉಳಿದವರೆಲ್ಲರೊಂದಿಗೆ ಅವರು ಕುಶಲವಾಗಿದ್ದಾರೆಯೇ ಮತ್ತು ಸದೈವ ಶರೀರಗಳಲ್ಲಿ ಅನಾಮಯರಾಗಿದ್ದಾರೆಯೇ ಎಂದು ಕೇಳಿದನು.
वृद्धावूचतुः।
कुशलं नो गृहे विप्र भृत्यवर्गे च सर्वशः।
कच्चित्त्वमप्यविघ्नेन संप्राप्तो भगवन्निह॥03-204-015॥
ವೃದ್ಧರು ಹೇಳಿದರು: “ವಿಪ್ರ! ಮನೆಯಲ್ಲಿ ಎಲ್ಲರೂ, ಸೇವಕ ವರ್ಗವೂ ಕುಶಲರಾಗಿದ್ದಾರೆ. ನೀನೂ ಕೂಡ ನಿರ್ವಿಘ್ನವಾಗಿ ಇಲ್ಲಿಗೆ ಬಂದಿರುವೆಯಾ?””
मार्कण्डेय उवाच।
बाढमित्येव तौ विप्रः प्रत्युवाच मुदान्वितः।
धर्मव्याधस्तु तं विप्रमर्थवद्वाक्यमब्रवीत्॥03-204-016॥
ಮಾರ್ಕಂಡೇಯನು ಹೇಳಿದನು: “ಸಂತೋಷಗೊಂಡ ವಿಪ್ರನು “ಚೆನ್ನಾಗಿದ್ದೇನೆ” ಎಂದು ಅವರಿಬ್ಬರಿಗೆ ಉತ್ತರಿಸಿದನು. ಧರ್ಮವ್ಯಾಧನು ವಿಪ್ರನಿಗೆ ಅರ್ಥವತ್ತಾದ ಈ ಮಾತುಗಳನ್ನಾಡಿದನು:
पिता माता च भगवन्नेतौ मे दैवतं परम्।
यद्दैवतेभ्यः कर्तव्यं तदेताभ्यां करोम्यहम्॥03-204-017॥
“ಭಗವನ್! ತಂದೆ ಮತ್ತು ತಾಯಿ ಇವರೇ ನನ್ನ ಪರಮ ದೇವರು. ದೇವತೆಗಳಿಗೆ ಮಾಡಬೇಕಾದುದನ್ನು ಇವರಿಬ್ಬರಿಗೆ ನಾನು ಮಾಡುತ್ತೇನೆ.
त्रयस्त्रिंशद्यथा देवाः सर्वे शक्रपुरोगमाः।
संपूज्याः सर्वलोकस्य तथा वृद्धाविमौ मम॥03-204-018॥
ಇಂದ್ರನ ನಾಯಕತ್ವದಲ್ಲಿರುವ ಮೂವತ್ತುಮೂರು ದೇವತೆಗಳೆಲ್ಲರನ್ನೂ[1] ಸರ್ವಲೋಕವು ಹೇಗೆ ಪೂಜಿಸುತ್ತದೆಯೋ ಹಾಗೆ ಈ ವೃದ್ಧರೀರ್ವರನ್ನು ನಾನು ಪೂಜಿಸುತ್ತೇನೆ.
उपहारानाहरन्तो देवतानां यथा द्विजाः।
कुर्वते तद्वदेताभ्यां करोम्यहमतन्द्रितः॥03-204-019॥
ದ್ವಿಜರು ದೇವತೆಗಳ ನೈವೇದ್ಯಕ್ಕೆ ಆಹಾರವನ್ನು ಹೇಗೆ ಶ್ರಮಪಟ್ಟು ತಯಾರಿಸುತ್ತಾರೋ ಹಾಗೆ ನಾನೂ ಕೂಡ ಇವರಿಬ್ಬರಿಗೆ ಮಾಡುತ್ತೇನೆ.
एतौ मे परमं ब्रह्मन्पिता माता च दैवतम्।
एतौ पुष्पैः फलै रत्नैस्तोषयामि सदा द्विज॥03-204-020॥
ಬ್ರಹ್ಮನ್! ಈ ತಂದೆತಾಯಿಯರಿಬ್ಬರೂ ನನ್ನ ಪರಮ ದೇವರುಗಳು. ದ್ವಿಜ! ಇವರನ್ನು ನಾನು ಪುಷ್ಪ, ಫಲ ರತ್ನಗಳಿಂದ ಸಂತುಷ್ಟಗೊಳಿಸುತ್ತೇನೆ.
एतावेवाग्नयो मह्यं यान्वदन्ति मनीषिणः।
यज्ञा वेदाश्च चत्वारः सर्वमेतौ मम द्विज॥03-204-021॥
ಮನೀಷಿಣರು ಹೇಳುವ ಮೂರು ಅಗ್ನಿಗಳು (ದಕ್ಷಿಣಾಗ್ನಿ, ಗಾರ್ಹಪತ್ಯ ಮತ್ತು ಆಹವನೀಯ) ನನಗೆ ಇವರೇ. ದ್ವಿಜ! ಇವರೇ ನನಗೆ ಯಜ್ಞ ಮತ್ತು ನಾಲ್ಕು ವೇದಗಳು ಮತ್ತು ಸರ್ವಸ್ವವೂ.
एतदर्थं मम प्राणा भार्या पुत्राः सुहृज्जनाः।
सपुत्रदारः शुश्रूषां नित्यमेव करोम्यहम्॥03-204-022॥
ನನ್ನ ಪ್ರಾಣಗಳಾದ ಪತ್ನಿ, ಪುತ್ರರು ಮತ್ತು ಸುಪುತ್ರರು ಇವರಿಗಾಗಿಯೇ ಇದ್ದಾರೆ. ಪುತ್ರ ಮತ್ತು ಪತ್ನಿಯೊಂದಿಗೆ ನಾನು ನಿತ್ಯವೂ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
स्वयं च स्नापयाम्येतौ तथा पादौ प्रधावये।
आहारं संप्रयच्छामि स्वयं च द्विजसत्तम॥03-204-023॥
ದ್ವಿಜಸತ್ತಮ! ಸ್ವಯಂ ನಾನೇ ಇವರಿಗೆ ಸ್ನಾನಮಾಡಿಸುತ್ತೇನೆ, ಪಾದಗಳನ್ನು ತೊಳೆಯುತ್ತೇನೆ, ಮತ್ತು ನಾನೇ ಅವರಿಗೆ ಆಹಾರವನ್ನು ಉಣಿಸುತ್ತೇನೆ.
अनुकूलाः कथा वच्मि विप्रियं परिवर्जयन्।
अधर्मेणापि संयुक्तं प्रियमाभ्यां करोम्यहम्॥03-204-024॥
ವಿಪ್ರಿಯವಾದುದನ್ನು ವರ್ಜಿಸಿ ಅನುಕೂಲವಾದುದನ್ನೇ ಅವರಿಗೆ ಹೇಳುತ್ತೇನೆ. ಅಧರ್ಮವಾಗಿದ್ದರೂ ನಾನು ಇವರಿಬ್ಬರಿಗೆ ಪ್ರಿಯವಾದುದನ್ನು ನಿಜವಾಗಿಯೂ ಮಾಡುತ್ತೇನೆ.
धर्ममेव गुरुं ज्ञात्वा करोमि द्विजसत्तम।
अतन्द्रितः सदा विप्र शुश्रूषां वै करोम्यहम्॥03-204-025॥
ದ್ವಿಜಸತ್ತಮ! ವಿಪ್ರ! ಧರ್ಮವೇ ಗುರುವೆಂದು ತಿಳಿದು ಮಾಡುತ್ತೇನೆ. ಆಯಾಸಗೊಳ್ಳದೇ ಸದಾ ಇವರ ಶುಶ್ರೂಷೆಯನ್ನು ಮಾಡುತ್ತೇನೆ.
पञ्चैव गुरवो ब्रह्मन्पुरुषस्य बुभूषतः।
पिता माताग्निरात्मा च गुरुश्च द्विजसत्तम॥03-204-026॥
ಬ್ರಹ್ಮನ್! ದ್ವಿಜಸತ್ತಮ! ಪುರುಷನಿಗೆ ಐದೇ ಗುರುಗಳಿದ್ದಾರೆಂದು ಹೇಳುತ್ತಾರೆ: ತಂದೆ, ತಾಯಿ, ಅಗ್ನಿ, ಆತ್ಮ ಮತ್ತು ಗುರು.
एतेषु यस्तु वर्तेत सम्यगेव द्विजोत्तम।
भवेयुरग्नयस्तस्य परिचीर्णास्तु नित्यशः।
गार्हस्थ्ये वर्तमानस्य धर्म एष सनातनः॥03-204-027॥
ದ್ವಿಜೋತ್ತಮ! ಒಳ್ಳೆಯದನ್ನು ಬಯಸುವವರು ಇವರೊಂದಿಗೆ ಸರಿಯಾಗಿ ನಡೆದುಕೊಳ್ಳಬೇಕು. ಅವರನ್ನು ಸರಿಯಾಗಿ ಪೂಜಿಸುವುದು ಗಾರ್ಹಪತ್ಯ ಅಗ್ನಿಯನ್ನು ಕಾದಿರಿಸಿಕೊಂಡ ಹಾಗೆ. ಇದು ಸನಾತನ ಧರ್ಮ.””
मार्कण्डेय उवाच।
गुरू निवेद्य विप्राय तौ मातापितरावुभौ।
पुनरेव स धर्मात्मा व्याधो ब्राह्मणमब्रवीत्॥03-205-001॥
ಮಾರ್ಕಂಡೇಯನು ಹೇಳಿದನು: “ಹಿರಿಯರಾದ ತಂದೆ ತಾಯಂದಿರಿಬ್ಬರನ್ನೂ ವಿಪ್ರನಿಗೆ ಪರಿಚಯ ಮಾಡಿಸಿಕೊಟ್ಟು ಆ ಧರ್ಮಾತ್ಮ ವ್ಯಾಧನು ಬ್ರಾಹ್ಮಣನಿಗೆ ಪುನಃ ಹೇಳಿದನು:
प्रवृत्तचक्षुर्जातोऽस्मि संपश्य तपसो बलम्।
यदर्थमुक्तोऽसि तया गच्छस्व मिथिलामिति॥03-205-002॥
पतिशुश्रूषपरया दान्तया सत्यशीलया।
मिथिलायां वसन्व्याधः स ते धर्मान्प्रवक्ष्यति॥03-205-003॥
“ಅಂತರ್ಗತ ದೃಷ್ಟಿಯನ್ನು ನೀಡಿರುವ ನನ್ನ ತಪಸ್ಸಿನ ಬಲವನ್ನು ನೋಡು. ಆದುದರಿಂದಲೇ ತಾಳ್ಮೆಯಿಂದ ಮತ್ತು ಸತ್ಯಶೀಲತೆಯಿಂದ ಪತಿಶುಶ್ರೂಷಣೆಯಲ್ಲಿ ನಿರತಳಾಗಿರುವ ಅವಳು ನಿನಗೆ “ಮಿಥಿಲೆಗೆ ಹೋಗು! ಮಿಥಿಲೆಯಲ್ಲಿ ವಾಸಿಸುವ ವ್ಯಾಧನು ನಿನಗೆ ಧರ್ಮಗಳ ಕುರಿತು ಹೇಳುತ್ತಾನೆ” ಎಂದು ಹೇಳಿದಳು.”
ब्राह्मण उवाच।
पतिव्रतायाः सत्यायाः शीलाढ्याया यतव्रत।
संस्मृत्य वाक्यं धर्मज्ञ गुणवानसि मे मतः॥03-205-004॥
ಬ್ರಾಹ್ಮಣನು ಹೇಳಿದನು: “ಧರ್ಮಜ್ಞ! ಯತವ್ರತ! ಆ ಪತಿವ್ರತೆ, ಸತ್ಯೆ, ಶೀಲಾಧ್ಯೆಯು ತಿಳಿದೇ ಹೇಳಿರಬೇಕು. ಏಕೆಂದರೆ ಅವೆಲ್ಲ ಗುಣಗಳೂ ನಿನ್ನಲ್ಲಿವೆ ಎಂದು ನನಗನ್ನಿಸುತ್ತದೆ.”
व्याध उवाच।
यत्तदा त्वं द्विजश्रेष्ठ तयोक्तो मां प्रति प्रभो।
दृष्टमेतत्तया सम्यगेकपत्न्या न संशयः॥03-205-005॥
ವ್ಯಾಧನು ಹೇಳಿದನು: “ದ್ವಿಜಶ್ರೇಷ್ಠ! ಪ್ರಭೋ! ನನ್ನ ಕುರಿತು ಅವಳು ನಿನಗೆ ಏನು ಹೇಳಿದ್ದಾಳೋ ಅದನ್ನು ಅವಳು ಎಲ್ಲವನ್ನು ನೋಡಿಯೇ ಹೇಳಿದ್ದಾಳೆ ಎನ್ನುವುದರಲ್ಲಿ ಸಂಶಯವಿಲ್ಲ.
त्वदनुग्रहबुद्ध्या तु विप्रैतद्दर्शितं मया।
वाक्यं च शृणु मे तात यत्ते वक्ष्ये हितं द्विज॥03-205-006॥
ವಿಪ್ರ! ದ್ವಿಜ! ಮಿತ್ರ! ಅನುಗ್ರಹಿಸಲೆಂದೇ ನಾನು ನಿನಗೆ ಇವೆಲ್ಲವನ್ನೂ ತಿಳಿಸಿದ್ದೇನೆ. ಈಗ ಕೇಳು. ನಿನಗೆ ಹಿತವಾದುದು ಏನೆಂದು ಹೇಳುತ್ತೇನೆ.
त्वया विनिकृता माता पिता च द्विजसत्तम।
अनिसृष्टोऽसि निष्क्रान्तो गृहात्ताभ्यामनिन्दित।
वेदोच्चारणकार्यार्थमयुक्तं तत्त्वया कृतम्॥03-205-007॥
ದ್ವಿಜಸತ್ತಮ! ನೀನು ನಿನ್ನ ತಾಯಿ-ತಂದೆಯರೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಅನಿಂದಿತ! ಅವರಿಗೆ ಹೇಳದೇ ನೀನು ವೇದೋಚ್ಛಾರಣಕ್ಕೆಂದು ಮನೆಯಿಂದ ಹೊರಗೆ ಹೋದೆ.
तव शोकेन वृद्धौ तावन्धौ जातौ तपस्विनौ।
तौ प्रसादयितुं गच्छ मा त्वा धर्मोऽत्यगान्महान्॥03-205-008॥
ನಿನ್ನ ಶೋಕದಿಂದ ಆ ವೃದ್ಧ ತಪಸ್ವಿಗಳು ಕುರುಡರಾಗಿದ್ದಾರೆ. ಅವರನ್ನು ಸಂತವಿಸಲು ಹೋಗು. ನೀನು ಈ ಮಹಾ ಧರ್ಮದ ಮಾರ್ಗವನ್ನು ತಪ್ಪದಿರು.
तपस्वी त्वं महात्मा च धर्मे च निरतः सदा।
सर्वमेतदपार्थं ते क्षिप्रं तौ संप्रसादय॥03-205-009॥
ಮಹಾತ್ಮಾ! ನೀನು ತಪಸ್ವಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವೆ. ಆದರೆ ಇವೆಲ್ಲವೂ ನಿನಗೆ ಅಪಾರ್ಥಗಳಾಗಿವೆ. ತ್ವರೆಮಾಡಿ ಅವರೀರ್ವರನ್ನು ಸಂತವಿಸು.
श्रद्दधस्व मम ब्रह्मन्नान्यथा कर्तुमर्हसि।
गम्यतामद्य विप्रर्षे श्रेयस्ते कथयाम्यहम्॥03-205-010॥
ಬ್ರಹ್ಮನ್! ನನ್ನಲ್ಲಿ ಶ್ರದ್ಧೆಯನ್ನಿಡು. ಅನ್ಯಥಾ ಮಾಡಬೇಡ! ವಿಪ್ರರ್ಷೇ! ಇಂದೇ ಹೋಗು. ನಿನಗೆ ಒಳ್ಳೆಯದಾಗುತ್ತದೆಯೆಂದು ನಾನು ಹೇಳುತ್ತೇನೆ.”
ब्राह्मण उवाच।
यदेतदुक्तं भवता सर्वं सत्यमसंशयम्।
प्रीतोऽस्मि तव धर्मज्ञ साध्वाचार गुणान्वित॥03-205-011॥
ಬ್ರಾಹ್ಮಣನು ಹೇಳಿದನು: “ನೀನು ಹೇಳುವುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮಜ್ಞ! ಸಾಧ್ವಾಚಾರ ಗುಣಾನ್ವಿತ! ನಿನ್ನಿಂದ ನಾನು ಸಂತೋಷಗೊಂಡಿದ್ದೇನೆ.”
व्याध उवाच।
दैवतप्रतिमो हि त्वं यस्त्वं धर्ममनुव्रतः।
पुराणं शाश्वतं दिव्यं दुष्प्रापमकृतात्मभिः॥03-205-012॥
ವ್ಯಾಧನು ಹೇಳಿದನು: “ನೀನು ದೈವತ ಪ್ರತಿಮೆಯಾಗಿದ್ದೀಯೆ. ನೀನು ಅನುಸರಿಸುವ ಧರ್ಮವು ಪುರಾಣವು, ಶಾಶ್ವತವು, ದಿವ್ಯವು. ಮತ್ತು ಕೃತಾತ್ಮರಿಗೂ ಕಷ್ಟಸಾಧ್ಯವಾದುದು.
अतन्द्रितः कुरु क्षिप्रं मातापित्रोर्हि पूजनम्।
अतः परमहं धर्मं नान्यं पश्यामि कंचन॥03-205-013॥
ಆದರೆ ಬೇಗನೆ ಹೋಗಿ ನೀನು ನಿನ್ನ ಮಾತಾಪಿತೃಗಳ ಪೂಜನೆಯನ್ನು ಮಾಡು. ಇದಕ್ಕಿಂತ ಹೆಚ್ಚಿನ ಧರ್ಮವನ್ನು ನಾನು ಬೇರೆ ಯಾವುದರಲ್ಲಿಯೂ ಕಾಣುವುದಿಲ್ಲ.”
ब्राह्मण उवाच।
इहाहमागतो दिष्ट्या दिष्ट्या मे संगतं त्वया।
ईदृशा दुर्लभा लोके नरा धर्मप्रदर्शकाः॥03-205-014॥
ಬ್ರಾಹ್ಮಣನು ಹೇಳಿದನು: “ನಾನು ಇಲ್ಲಿಗೆ ಬಂದುದು ಒಳ್ಳೆಯದಾಯಿತು. ನಿನ್ನನ್ನು ಭೇಟಿಮಾಡಿದೆನೆಂದು ಒಳ್ಳೆಯದಾಯಿತು. ಈ ರೀತಿಯ ಧರ್ಮಪ್ರದರ್ಶಕ ನರರು ಲೋಕದಲ್ಲಿ ದುರ್ಲಭ.
एको नरसहस्रेषु धर्मविद्विद्यते न वा।
प्रीतोऽस्मि तव सत्येन भद्रं ते पुरुषोत्तम॥03-205-015॥
ಸಾವಿರರಲ್ಲಿ ಒಬ್ಬ ನರನು ಧರ್ಮವನ್ನು ತಿಳಿದಿರಬಹುದು. ಪುರುಷೋತ್ತಮ! ನಿನ್ನ ಸತ್ಯದಿಂದ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ!
पतमानो हि नरके भवतास्मि समुद्धृतः।
भवितव्यमथैवं च यद्दृष्टोऽसि मयानघ॥03-205-016॥
ನರಕದಲ್ಲಿ ಬೀಳುತ್ತಿದ್ದ ನನ್ನನ್ನು ನೀನು ಮೇಲಕ್ಕೆತ್ತಿದ್ದೀಯೆ. ಅನಘ! ನೀನು ನನ್ನ ದಾರಿಯಲ್ಲಿ ದೊರೆಯಬೇಕೆಂದು ಮೊದಲೇ ನಿರ್ಧಿತವಾಗಿರಬೇಕು.
राजा ययातिर्दौहित्रैः पतितस्तारितो यथा।
सद्भिः पुरुषशार्दूल तथाहं भवता त्विह॥03-205-017॥
ಪುರುಷಶಾರ್ದೂಲ! ರಾಜಾ ಯಯಾತಿಯು ಕೆಳಗೆ ಬೀಳುತ್ತಿರುವಾಗ ಹೇಗೆ ಅವನ ಉತ್ತಮ ಮಗಳ ಮಕ್ಕಳಿಂದ ಪಾರುಗೊಳಿಸಲ್ಪಟ್ಟನೋ[1] ಹಾಗೆ ನಿನ್ನಿಂದ ನಾನು ಪಾರುಗೊಂಡೆ.
मातापितृभ्यां शुश्रूषां करिष्ये वचनात्तव।
नाकृतात्मा वेदयति धर्माधर्मविनिश्चयम्॥03-205-018॥
ನಿನ್ನ ಮಾತಿನಂತೆ ಮಾತಾಪಿತೃಗಳ ಶುಶ್ರೂಷೆಯನ್ನು ಮಾಡುತ್ತೇನೆ. ಏಕೆಂದರೆ ಅಕೃತಾತ್ಮನು ಧರ್ಮಾಧರ್ಮ ವಿನಿಶ್ಚಿಯವನ್ನು ತಿಳಿದಿರಲಾರ.
दुर्ज्ञेयः शाश्वतो धर्मः शूद्रयोनौ हि वर्तता।
न त्वां शूद्रमहं मन्ये भवितव्यं हि कारणम्।
येन कर्मविपाकेन प्राप्तेयं शूद्रता त्वया॥03-205-019॥
ಶೂದ್ರಯೋನಿಯಲ್ಲಿ ಜನಿಸಿದವನಿಗೆ ಶಾಶ್ವತ ಧರ್ಮವನ್ನು ಅರಿತಿರುವುದು ಅಸಾಧ್ಯವಾದುದರಿಂದ ನಾನು ನಿನ್ನನ್ನು ಶೂದ್ರನೆಂದು ಪರಿಗಣಿಸುವುದಿಲ್ಲ. ನೀನು ಯಾವ ಕರ್ಮವಿಪಾಕದಿಂದ ಈ ಶೂದ್ರತ್ವವನ್ನು ಪಡೆದಿರುವೆಯೋ ಅದೂ ಕೂಡ ಭವಿತವ್ಯದ ಕಾರಣದಿಂದಿರಬಹುದು.
एतदिच्छामि विज्ञातुं तत्त्वेन हि महामते।
कामया ब्रूहि मे तथ्यं सर्वं त्वं प्रयतात्मवान्॥03-205-020॥
ಮಹಾಮತೇ! ಇದನ್ನು ತಿಳಿಯಲು ಬಯಸುತ್ತೇನೆ. ಪ್ರಯತಾತ್ಮವಾನ್! ಇದರ ತತ್ವವನ್ನು ನಿನಗಿಷ್ಟವಾದರೆ ಎಲ್ಲವನ್ನೂ ಇದ್ದಹಾಗೆ ನನಗೆ ಹೇಳುವವನಾಗು.”
व्याध उवाच।
अनतिक्रमणीया हि ब्राह्मणा वै द्विजोत्तम।
शृणु सर्वमिदं वृत्तं पूर्वदेहे ममानघ॥03-205-021॥
ವ್ಯಾಧನು ಹೇಳಿದನು: “ದ್ವಿಜೋತ್ತಮ! ಬ್ರಾಹ್ಮಣರು ಅನತಿಕ್ರಮಣೀಯರಲ್ಲವೇ? ಅನಘ! ನನ್ನ ಪೂರ್ವದೇಹದ ಎಲ್ಲ ಈ ವೃತ್ತಾಂತವನ್ನೂ ಕೇಳು.
अहं हि ब्राह्मणः पूर्वमासं द्विजवरात्मज।
वेदाध्यायी सुकुशलो वेदाङ्गानां च पारगः।
आत्मदोषकृतैर्ब्रह्मन्नवस्थां प्राप्तवानिमाम्॥03-205-022॥
ದ್ವಿಜವರಾತ್ಮಜ! ಹಿಂದೆ ನಾನೂ ಕೂಡ ವಿದ್ಯಾಧ್ಯಾಯೀ, ಸುಕುಶಲ, ವೇದಾಂಗಗಳ ಪಾರಂಗತ ಬ್ರಾಹ್ಮಣನಾಗಿದ್ದೆ. ಬ್ರಹ್ಮನ್! ನಾನೇ ಮಾಡಿದ ದೋಷದಿಂದ ಈ ಅವಸ್ಥೆಯನ್ನು ಪಡೆದಿದ್ದೇನೆ.
कश्चिद्राजा मम सखा धनुर्वेदपरायणः।
संसर्गाद्धनुषि श्रेष्ठस्ततोऽहमभवं द्विज॥03-205-023॥
ದ್ವಿಜ! ಯಾರೋ ಒಬ್ಬ ಧನುರ್ವೇದಪರಾಯಣ ರಾಜನು ನನ್ನ ಸಖನಾಗಿದ್ದನು. ಅವನ ಸಂಸರ್ಗದಿಂದ ನಾನೂ ಕೂಡ ಶ್ರೇಷ್ಠ ಧನುಷಿಯಾದೆ.
एतस्मिन्नेव काले तु मृगयां निर्गतो नृपः।
सहितो योधमुख्यैश्च मन्त्रिभिश्च सुसंवृतः।
ततोऽभ्यहन्मृगांस्तत्र सुबहूनाश्रमं प्रति॥03-205-024॥
ಹೀಗಿರುವಾಗ ಒಮ್ಮೆ ನೃಪನು ಸೇನಾಪತಿಗಳೊಂದಿಗೆ ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟು ಬೇಟೆಗೆ ಹೊರಟನು. ಒಂದು ಆಶ್ರಮದ ಬಳಿ ಬಹಳಷ್ಟು ಜಿಂಕೆಗಳನ್ನು ಅವನು ಬೇಟೆಯಾಡಿದನು.
अथ क्षिप्तः शरो घोरो मयापि द्विजसत्तम।
ताडितश्च मुनिस्तेन शरेणानतपर्वणा॥03-205-025॥
ದ್ವಿಜಸತ್ತಮ! ಆಗ ನಾನೂ ಕೂಡ ಘೋರವಾದ ಬಾಣವನ್ನು ಬಿಟ್ಟೆನು. ಆ ಶರವು ಒಂದು ಮುನಿಯನ್ನು ಹೊಡೆದು ಮೊಂಡಾಯಿತು.
भूमौ निपतितो ब्रह्मन्नुवाच प्रतिनादयन्।
नापराध्याम्यहं किंचित्केन पापमिदं कृतम्॥03-205-026॥
ಭೂಮಿಯಲ್ಲಿ ಬಿದ್ದ ಬ್ರಾಹ್ಮಣನು ಜೋರಾಗಿ ಹೇಳಿದನು: “ನಾನು ಏನೂ ಅಪರಾಧವನ್ನು ಮಾಡಲಿಲ್ಲ. ಈ ಪಾಪವನ್ನು ಮಾಡಿದವನು ಯಾರು?”
मन्वानस्तं मृगं चाहं संप्राप्तः सहसा मुनिम्।
अपश्यं तमृषिं विद्धं शरेणानतपर्वणा।
तमुग्रतपसं विप्रं निष्टनन्तं महीतले॥03-205-027॥
अकार्यकरणाच्चापि भृशं मे व्यथितं मनः।
अजानता कृतमिदं मयेत्यथ तमब्रुवम्।
क्षन्तुमर्हसि मे ब्रह्मन्निति चोक्तो मया मुनिः॥03-205-028॥
ಅದು ಮೃಗವೆಂದು ತಿಳಿದು ನಾನು ಒಮ್ಮೆಲೇ ಮುನಿಯ ಬಳಿಸಾರಿ ಆ ಋಷಿಯ ದೇಹವನ್ನು ನನ್ನ ಬಾಣವು ಸೀಳಿದ್ದುದನ್ನು ನೋಡಿದೆ. ನನ್ನ ಈ ಕೆಟ್ಟ ಕೆಲಸದಿಂದ ಮನಸ್ಸು ತುಂಬಾ ವ್ಯಥಿತಗೊಂಡಿತು. ಆಗ ನೆಲದಮೇಲೆ ಬಿದ್ದು ನರಳುತ್ತಿದ್ದ ಆ ಉಗ್ರತಪಸ್ವಿಗೆ ಹೇಳಿದೆನು. “ಬ್ರಹ್ಮನ್! ತಿಳಿಯದೇ ಈ ಕೆಲಸವನ್ನು ನಾನು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಬೇಕು” ಎಂದು ಮುನಿಗೆ ಹೇಳಿದೆನು.
ततः प्रत्यब्रवीद्वाक्यमृषिर्मां क्रोधमूर्छितः।
व्याधस्त्वं भविता क्रूर शूद्रयोनाविति द्विज॥03-205-029॥
ಆಗ ಕ್ರೋಧಮೂರ್ಛಿತನಾದ ಋಷಿಯು ನನಗೆ ಉತ್ತರಿಸಿದನು: “ಕ್ರೂರ! ದ್ವಿಜ! ನೀನು ಶೂದ್ರ ವ್ಯಾಧನಾಗುತ್ತೀಯೆ!””
व्याध उवाच।
एवं शप्तोऽहमृषिणा तदा द्विजवरोत्तम।
अभिप्रसादयमृषिं गिरा वाक्यविशारदम्॥03-206-001॥
अजानता मयाकार्यमिदमद्य कृतं मुने।
क्षन्तुमर्हसि तत्सर्वं प्रसीद भगवन्निति॥03-206-002॥
ವ್ಯಾಧನು ಹೇಳಿದನು: “ದ್ವಿಜವರೋತ್ತಮ! ಈ ರೀತಿ ಆ ಋಷಿಯಿಂದ ಶಪಿತನಾದ ನಾನು ಅವನನ್ನು ಪ್ರಸೀದಗೊಳಿಸಲು ಈ ವಾಕ್ಯವಿಶಾರದ ಮಾತುಗಳನ್ನು ಆ ಋಷಿಗೆ ಹೇಳಿದೆನು: “ಮುನೇ! ತಿಳಿಯದೇ ಇಂದು ನನ್ನಿಂದ ಈ ಕಾರ್ಯವು ನಡೆದುಹೋಯಿತು. ಅವೆಲ್ಲವನ್ನೂ ನೀನು ಕ್ಷಮಿಸಬೇಕು. ಭಗವನ್! ಕರುಣೆತೋರು!”
ऋषिरुवाच।
नान्यथा भविता शाप एवमेतदसंशयम्।
आनृशंस्यादहं किंचित्कर्तानुग्रहमद्य ते॥03-206-003॥
ಋಷಿಯು ಹೇಳಿದನು: “ಶಾಪವು ಅನ್ಯಥಾ ಆಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ. ಆದರೆ ನಿನಗೆ ಅನುಗ್ರಹಿಸಲು ನಾನು ಕೊಂಚ ಸುಳ್ಳಾಗಿಸುತ್ತೇನೆ.
शूद्रयोनौ वर्तमानो धर्मज्ञो भविता ह्यसि।
मातापित्रोश्च शुश्रूषां करिष्यसि न संशयः॥03-206-004॥
ಶೂದ್ರಯೋನಿಯಲ್ಲಿ ಹುಟ್ಟಿದರೂ ಧರ್ಮಜ್ಞನಾಗಿ ನಡೆಯುತ್ತೀಯೆ. ಮಾತಾಪಿತೃಗಳ ಶುಶ್ರೂಷೆಯನ್ನೂ ಮಾಡುತ್ತೀಯೆ. ಸಂಶಯವಿಲ್ಲ.
तया शुश्रूषया सिद्धिं महतीं समवाप्स्यसि।
जातिस्मरश्च भविता स्वर्गं चैव गमिष्यसि।
शापक्षयान्ते निर्वृत्ते भवितासि पुनर्द्विजः॥03-206-005॥
ನಿನ್ನ ಶುಶ್ರೂಷೆಯಿಂದ ಮಹಾ ಸಿದ್ಧಿಯನ್ನು ಪಡೆಯುತ್ತೀಯೆ. ನಿನ್ನ ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುತ್ತೀಯೆ ಮತ್ತು ಸ್ವರ್ಗಕ್ಕೆ ಹೋಗುತ್ತೀಯೆ. ಶಾಪವು ಮುಗಿದನಂತರ ಪುನಃ ದ್ವಿಜನಾಗಿ ಹುಟ್ಟುತ್ತೀಯೆ.””
व्याध उवाच।
एवं शप्तः पुरा तेन ऋषिणास्म्युग्रतेजसा।
प्रसादश्च कृतस्तेन ममैवं द्विपदां वर॥03-206-006॥
ವ್ಯಾಧನು ಹೇಳಿದನು: “ದ್ವಿಪದರಲ್ಲಿ ಶ್ರೇಷ್ಠನೇ! ಹಿಂದೆ ಹೀಗೆ ಆ ಉಗ್ರತೇಜಸ್ವಿ ಋಷಿಯಿಂದ ಶಪಿತನಾಗಿ, ಅವನಿಂದ ಕರುಣೆಯನ್ನೂ ಪಡೆದೆ.
शरं चोद्धृतवानस्मि तस्य वै द्विजसत्तम।
आश्रमं च मया नीतो न च प्राणैर्व्ययुज्यत॥03-206-007॥
ದ್ವಿಜಸತ್ತಮ! ಅವನ ಶರೀರದಿಂದ ಆ ಬಾಣವನ್ನು ಕಿತ್ತೆ, ಅವನನ್ನು ಆಶ್ರಮಕ್ಕೆ ಕರೆದೊಯ್ದೆ. ಆದರೆ ಅವನು ಪ್ರಾಣದಿಂದ ವಂಚಿತನಾದನು.
एतत्ते सर्वमाख्यातं यथा मम पुराभवत्।
अभितश्चापि गन्तव्यं मया स्वर्गं द्विजोत्तम॥03-206-008॥
ದ್ವಿಜೋತ್ತಮ! ನನಗೆ ಹಿಂದೆ ಏನೆಲ್ಲ ಆಯಿತೋ ಅವೆಲ್ಲವನ್ನೂ ಮತ್ತು ಇಲ್ಲಿಂದ ನಾನು ಸ್ವರ್ಗಕ್ಕೆ ಹೋಗುವವನಿದ್ದೇನೆ ಎನ್ನುವುದನ್ನೂ ನಿನಗೆ ಹೇಳಿದ್ದೇನೆ.”
ब्राह्मण उवाच।
एवमेतानि पुरुषा दुःखानि च सुखानि च।
प्राप्नुवन्ति महाबुद्धे नोत्कण्ठां कर्तुमर्हसि।
दुष्करं हि कृतं तात जानता जातिमात्मनः॥03-206-009॥
ಬ್ರಾಹ್ಮಣನು ಹೇಳಿದನು: “ಮಹಾಬುದ್ಧೇ! ಹೀಗೆ ಪುರುಷರು ದುಃಖ ಮತ್ತು ಸಖಗಳನ್ನು ಪಡೆಯುತ್ತಾರೆ. ಅದರಲ್ಲಿ ಶಂಕೆಯನ್ನು ಮಾಡಬಾರದು. ಮಿತ್ರ! ನಿನ್ನ ಹುಟ್ಟಿನ ಕುರಿತು ತಿಳಿದು ನೀನು ದುಷ್ಕರವಾದುದನ್ನೇ ಮಾಡಿದ್ದೀಯೆ.
कर्मदोषश्च वै विद्वन्नात्मजातिकृतेन वै।
कंचित्कालं मृष्यतां वै ततोऽसि भविता द्विजः।
सांप्रतं च मतो मेऽसि ब्राह्मणो नात्र संशयः॥03-206-010॥
ವಿದ್ವನ್! ನಿನ್ನ ಜಾತಿಯ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನಲ್ಲಿ ಕರ್ಮದೋಷವುಂಟಾಗುವುದಿಲ್ಲ. ಕೆಲವು ಕಾಲ ಹೀಗಿದ್ದುಕೊಂಡು ನಂತರ ನೀನು ದ್ವಿಜನಾಗುತ್ತೀಯೆ. ಈಗಲೂ ನೀನು ನನ್ನ ಅಭಿಪ್ರಾಯದಲ್ಲಿ ಬ್ರಾಹ್ಮಣನೇ! ಅದರಲ್ಲಿ ಸಂಶಯವಿಲ್ಲ.
ब्राह्मणः पतनीयेषु वर्तमानो विकर्मसु।
दाम्भिको दुष्कृतप्रायः शूद्रेण सदृशो भवेत्॥03-206-011॥
ಕೀಳುರೀತಿಯಲ್ಲಿ ನಡೆದುಕೊಳ್ಳುವ, ಕೆಟ್ಟಕೆಲಸಗಳಲ್ಲಿ ನಿರತನಾಗಿರುವ, ಢಾಂಬಿಕ, ದುಷ್ಕೃತಪ್ರಾಯ ಬ್ರಾಹ್ಮಣನು ಶೂದ್ರನಂತೆಯೇ.
यस्तु शूद्रो दमे सत्ये धर्मे च सततोत्थितः।
तं ब्राह्मणमहं मन्ये वृत्तेन हि भवेद्द्विजः॥03-206-012॥
ಯಾವ ಶೂದ್ರನು ದಮ, ಸತ್ಯ, ಮತ್ತು ಧರ್ಮಗಳಲ್ಲಿ ಸತತವೂ ನಿರತನಾಗಿರುತ್ತಾನೋ ಅವನನ್ನು ನಾನು ಬ್ರಾಹ್ಮಣನೆಂದು ಮನ್ನಿಸುತ್ತೇನೆ. ನಡತೆಯಿಂದಲೇ ದ್ವಿಜನಾಗುತ್ತಾನೆ ತಾನೇ?
कर्मदोषेण विषमां गतिमाप्नोति दारुणाम्।
क्षीणदोषमहं मन्ये चाभितस्त्वां नरोत्तम॥03-206-013॥
ತನ್ನದೇ ಕರ್ಮದೋಷಗಳಿಂದ ವಿಷಮ ದಾರುಣ ಗತಿಯನ್ನು ಹೊಂದುತ್ತಾನೆ. ನರೋತ್ತಮ! ನಿನ್ನ ದೋಷಗಳು ಕಡಿಮೆಯಾಗಿವೆ ಎಂದು ನನಗನ್ನಿಸುತ್ತದೆ.
कर्तुमर्हसि नोत्कण्ठां त्वद्विधा ह्यविषादिनः।
लोकवृत्तान्तवृत्तज्ञा नित्यं धर्मपरायणाः॥03-206-014॥
ಇದಕ್ಕೆ ನೀನು ಶೋಕಿಸಬೇಕಾದುದಿಲ್ಲ. ಲೋಕದ ಆಗುಹೋಗುಗಳ, ನಡವಳಿಕೆಗಳ ಜ್ಞಾನವಿರುವ ಮತ್ತು ನಿತ್ಯವೂ ಧರ್ಮ ಪರಾಯಣನಾಗಿರುವ ನೀನು ಶೋಕಿಸಲು ಕಾರಣವಿಲ್ಲ.”
व्याध उवाच।
प्रज्ञया मानसं दुःखं हन्याच्छारीरमौषधैः।
एतद्विज्ञानसामर्थ्यं न बालैः समतां व्रजेत्॥03-206-015॥
ವ್ಯಾಧನು ಹೇಳಿದನು: “ಪ್ರಜ್ಞೆಯಿಂದ ಮನಸ್ಸಿನ ದುಃಖವನ್ನು, ಔಷಧಗಳಿಂದ ಶಾರೀರಿಕ ದುಃಖವನ್ನು ಹನನಮಾಡಿಕೊಳ್ಳಬೇಕು. ಇದು ವಿಜ್ಞಾನದ ಸಾಮರ್ಥ್ಯ. ಇದನ್ನು ತಿಳಿದವನು ಬಾಲಕನಂತೆ ನಡೆದುಕೊಳ್ಳುವುದನ್ನು ಬಿಟ್ಟುಬಿಡಬೇಕು.
अनिष्टसंप्रयोगाच्च विप्रयोगात्प्रियस्य च।
मानुषा मानसैर्दुःखैर्युज्यन्ते अल्पबुद्धयः॥03-206-016॥
ಅಲ್ಪಬುದ್ಧಿಯ ಮನುಷ್ಯರು ತಮಗೆ ಪ್ರಿಯವಾಗದೇ ಇದ್ದ ಅನಿಷ್ಟ ಸಂಗತಿಗಳಾದಾಗ ಮಾನಸಿಕ ದುಃಖಗಳಿಂದ ಬಳಲುತ್ತಾರೆ.
गुणैर्भूतानि युज्यन्ते वियुज्यन्ते तथैव च।
सर्वाणि नैतदेकस्य शोकस्थानं हि विद्यते॥03-206-017॥
ಎಲ್ಲ ಭೂತಗಳೂ ಈ ಗುಣವನ್ನು ಹೊಂದಿರುತ್ತವೆ. ಯಾವುದೋ ಒಂದೇ ಈ ಶೋಕವನ್ನು ಪಡೆಯುತ್ತದೆ ಎನ್ನುವುದಿಲ್ಲ.
अनिष्टेनान्वितं पश्यंस्तथा क्षिप्रं विरज्यते।
ततश्च प्रतिकुर्वन्ति यदि पश्यन्त्युपक्रमम्।
शोचतो न भवेत्किंचित्केवलं परितप्यते॥03-206-018॥
ಈ ಅನಿಷ್ಟವನ್ನು ನೋಡಿ, ಜನರು ಬೇಗನೇ ತಮ್ಮ ರೀತಿಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅದು ಬರುತ್ತಿರುವುದನ್ನು ಮೊದಲೇ ತಿಳಿದುಕೊಂಡಿದ್ದರೆ ಅದನ್ನು ನಿವಾರಿಸಲು ಸುಲಭವಾಗುತ್ತದೆ. ಇದರ ಕುರಿತು ಶೋಕಿಸುವವನು ತನ್ನನ್ನು ಕೇವಲ ಪರಿತಪಿಸಿಕೊಳ್ಳುತ್ತಾನೆ.
परित्यजन्ति ये दुःखं सुखं वाप्युभयं नराः।
त एव सुखमेधन्ते ज्ञानतृप्ता मनीषिणः॥03-206-019॥
ಜ್ಞಾನದಿಂದ ತೃಪ್ತರಾದ ಮತ್ತು ಸುಖವನ್ನು ಹೊಂದಿದ ತಿಳುವಳಿಕೆಯಿದ್ದ ನರರು ಮಾತ್ರ ಈ ಸುಖ ದುಃಖಗಳೆರಡನ್ನೂ ತೊರೆದು ನಿಜವಾಗಿಯೂ ಸುಖಿಗಳಾಗಿರುತ್ತಾರೆ.
असंतोषपरा मूढाः संतोषं यान्ति पण्डिताः।
असंतोषस्य नास्त्यन्तस्तुष्टिस्तु परमं सुखम्।
न शोचन्ति गताध्वानः पश्यन्तः परमां गतिम्॥03-206-020॥
ಮೂಢರು ಯಾವಾಗಲೂ ಅಸಂತೋಷದಲ್ಲಿರುತ್ತಾರೆ ಮತ್ತು ಪಂಡಿತರು ಸಂತೋಷವನ್ನು ಹೊಂದಿರುತ್ತಾರೆ. ಅಸಂತೋಷಕ್ಕೆ ಅಂತ್ಯವೇ ಇಲ್ಲ. ತುಷ್ಟಿಯೇ ಪರಮ ಸುಖ. ಸರಿಯಾದ ಗತಿಯನ್ನು ಹೊಂದಿದವರು ಪರಮ ಗತಿಯನ್ನು ಕಂಡುಕೊಂಡು ದುಃಖಿಸುವುದಿಲ್ಲ.
न विषादे मनः कार्यं विषादो विषमुत्तमम्।
मारयत्यकृतप्रज्ञं बालं क्रुद्ध इवोरगः॥03-206-021॥
ಮನಸ್ಸನ್ನು ವಿಷಾದಕ್ಕೆ ಒಳಪಡಿಸಬಾರದು. ವಿಷಾದವು ಉತ್ತಮ ವಿಷದಂತೆ. ಪ್ರಜ್ಞೆಯು ಬೆಳೆದಿರುವವನನ್ನು ಅದು ಬಾಲಕನನ್ನು ಒಂದು ಕೃದ್ಧ ಸರ್ಪದಂತೆ ಕೊಲ್ಲುತ್ತದೆ.
यं विषादोऽभिभवति विषमे समुपस्थिते।
तेजसा तस्य हीनस्य पुरुषार्थो न विद्यते॥03-206-022॥
ವಿಷಮ ಪರಿಸ್ಥಿತಿಯಲ್ಲಿ ವಿಷಾದಪಡುವವನಲ್ಲಿ, ತನ್ನ ತೇಜಸ್ಸನ್ನು ಕಳೆದುಕೊಂಡವನಲ್ಲಿ ಪುರುಷಾರ್ಥವೇ ಇಲ್ಲ ಎಂದು ತಿಳಿಯಬೇಕು.
अवश्यं क्रियमाणस्य कर्मणो दृश्यते फलम्।
न हि निर्वेदमागम्य किंचित्प्राप्नोति शोभनम्॥03-206-023॥
ನಾವು ಮಾಡುವ ಕರ್ಮಗಳಿಗೆ ಅವಶ್ಯವಾಗಿಯೂ ಫಲವನ್ನು ಕಾಣುತ್ತೇವೆ. ಏನನ್ನೂ ಅರಿಯದೇ ಮಾಡುವುದರಿಂದ ಒಳ್ಳೆಯದೇನೂ ದೊರಕುವುದಿಲ್ಲ.
अथाप्युपायं पश्येत दुःखस्य परिमोक्षणे।
अशोचन्नारभेतैव युक्तश्चाव्यसनी भवेत्॥03-206-024॥
ಶೋಕಿಸುವುದರ ಬದಲಾಗಿ ದುಃಖದ ಪರಿಮೋಕ್ಷಣದ ಉಪಾಯವನ್ನು ನೋಡಬೇಕು ಮತ್ತು ಅವ್ಯಸನಿಯಾಗಬೇಕು.
भूतेष्वभावं संचिन्त्य ये तु बुद्धेः परं गताः।
न शोचन्ति कृतप्रज्ञाः पश्यन्तः परमां गतिम्॥03-206-025॥
ಪರಮ ಬುದ್ಧಿಯನ್ನು ಪಡೆದವನು ಎಲ್ಲ ಭೂತಗಳ ಅಭಾವದ ಕುರಿತು ಯಾವಾಗಲೂ ಚಿಂತಿಸುತ್ತಿರುತ್ತಾನೆ. ಕೃತಪ್ರಜ್ಞನು ಶೋಕಿಸುವುದಿಲ್ಲ. ಪರಮ ಗತಿಯನ್ನೇ ಕಾಣುತ್ತಿರುತ್ತಾನೆ.
न शोचामि च वै विद्वन्कालाकाङ्क्षी स्थितोऽस्म्यहम्।
एतैर्निदर्शनैर्ब्रह्मन्नावसीदामि सत्तम॥03-206-026॥
ವಿದ್ವನ್! ನಾನೂ ಕೂಡ ಶೋಕಿಸುವುದಿಲ್ಲ. ಕಾಲಾಕಾಂಕ್ಷಿಯಾಗಿ ಇಲ್ಲಿಯೇ ನಿಂತಿರುತ್ತೇನೆ. ಆದುದರಿಂದ ಬ್ರಹ್ಮನ್! ಸತ್ತಮ! ನಾನು ಗೊಂದಲಕ್ಕೊಳಗಾಗುವುದಿಲ್ಲ.”
ब्राह्मण उवाच।
कृतप्रज्ञोऽसि मेधावी बुद्धिश्च विपुला तव।
नाहं भवन्तं शोचामि ज्ञानतृप्तोऽसि धर्मवित्॥03-206-027॥
ಬ್ರಾಹ್ಮಣನು ಹೇಳಿದನು: “ಮೇಧಾವೀ! ನೀನು ಕೃತಪ್ರಜ್ಞನಾಗಿರುವೆ. ನಿನ್ನ ಬುದ್ಧಿಯು ವಿಪುಲವಾದುದು. ಧರ್ಮವಿದನಾದ ನೀನು ಜ್ಞಾನತೃಪ್ತನಾಗಿದ್ದೀಯೆ. ನಿನಗಾಗಿ ನಾನು ಚಿಂತಿಸುವುದಿಲ್ಲ.
आपृच्छे त्वां स्वस्ति तेऽस्तु धर्मस्त्वा परिरक्षतु।
अप्रमादस्तु कर्तव्यो धर्मे धर्मभृतां वर॥03-206-028॥
ಧರ್ಮಭೃತರಲ್ಲಿ ಶ್ರೇಷ್ಠನೇ! ನಿನಗೆ ಮಂಗಳವಾಗಲಿ. ನಿನ್ನಲ್ಲಿ ಅಪ್ಪಣೆಯನ್ನು ಕೇಳುತ್ತೇನೆ. ಧರ್ಮವು ನಿನ್ನನ್ನು ಪರಿರಕ್ಷಿಸಲಿ. ಧರ್ಮದ ಕರ್ತವ್ಯಗಳಲ್ಲಿ ನೀನು ತಪ್ಪದಿರುವಂತಾಗಲಿ.””
मार्कण्डेय उवाच।
बाढमित्येव तं व्याधः कृताञ्जलिरुवाच ह।
प्रदक्षिणमथो कृत्वा प्रस्थितो द्विजसत्तमः॥03-206-029॥
ಮಾರ್ಕಂಡೇಯನು ಹೇಳಿದನು: “ಹಾಗೆಯೇ ಆಗಲಿ ಎಂದು ವ್ಯಾಧನು ಕೈಮುಗಿದು ಹೇಳಿದನು. ಆ ದ್ವಿಜಸತ್ತಮನು ಪ್ರದಕ್ಷಿಣೆಯನ್ನು ಹಾಕಿ ಹೊರಟನು.
स तु गत्वा द्विजः सर्वां शुश्रूषां कृतवांस्तदा।
मातापितृभ्यां वृद्धाभ्यां यथान्यायं सुसंशितः॥03-206-030॥
ಆ ದ್ವಿಜನಾದರೋ ಹೋಗಿ ಯಥಾನ್ಯಾಯವಾಗಿ ವೃದ್ಧರಾಗಿದ್ದ ಮಾತಾಪಿತೃಗಳ ಎಲ್ಲ ಶುಶ್ರೂಷೆಗಳನ್ನು ಮಾಡಿದನು.
एतत्ते सर्वमाख्यातं निखिलेन युधिष्ठिर।
पृष्टवानसि यं तात धर्मं धर्मभृतां वर॥03-206-031॥
ಯುಧಿಷ್ಠಿರ! ಮಗೂ! ಧರ್ಮಭೃತರಲ್ಲಿ ಶ್ರೇಷ್ಠ! ನೀನು ಧರ್ಮದ ಕುರಿತು ಕೇಳಿದುದೆಲ್ಲವನ್ನೂ ಸಂಪೂರ್ಣವಾಗಿ ನಿನಗೆ ಹೇಳಿದ್ದೇನೆ.
पतिव्रताया माहात्म्यं ब्राह्मणस्य च सत्तम।
मातापित्रोश्च शुश्रूषा व्याधे धर्मश्च कीर्तितः॥03-206-032॥
ಪತಿವ್ರತೆಯ, ಸತ್ತಮ ಬ್ರಾಹ್ಮಣನ ಮತ್ತು ಮಾತಾಪಿತೃಗಳ ಶುಶ್ರೂಷಣೆಯಲ್ಲಿದ್ದ ವ್ಯಾಧನ ಧರ್ಮದ ಮಹಾತ್ಮೆಗಳನ್ನು ಹೇಳಿದ್ದೇನೆ.”
युधिष्ठिर उवाच।
अत्यद्भुतमिदं ब्रह्मन्धर्माख्यानमनुत्तमम्।
सर्वधर्मभृतां श्रेष्ठ कथितं द्विजसत्तम॥03-206-033॥
ಯುಧಿಷ್ಠಿರನು ಹೇಳಿದನು: “ಸರ್ವಧರ್ಮಭೃತರಲ್ಲಿ ಶ್ರೇಷ್ಠ! ದ್ವಿಜಸತ್ತಮ! ಬ್ರಹ್ಮನ್! ನೀನು ಹೇಳಿದ ಈ ಧರ್ಮಾಖ್ಯಾನವು ಅನುತ್ತಮವಾದುದು! ಅದ್ಭುತವಾದುದು!
सुखश्रव्यतया विद्वन्मुहूर्तमिव मे गतम्।
न हि तृप्तोऽस्मि भगवञ्शृण्वानो धर्ममुत्तमम्॥03-206-034॥
ವಿದ್ವನ್! ಭಗವನ್! ನಿನ್ನನ್ನು ಕೇಳುತ್ತಾ ಸಮಯವು ಸುಖವಾಗಿ ಮುಹೂರ್ತದಂತೆ ಕಳೆದುಹೋಯಿತು. ಉತ್ತಮ ಧರ್ಮದ ಕುರಿತು ಕೇಳಿ ಇನ್ನೂ ತೃಪ್ತನಾಗಿಲ್ಲ.””

Leave a Reply